ರಿನ್ಸನ್ ಜೋಸ್ 
ದೇಶ

ಪೇಜರ್​ ಬ್ಲಾಸ್ಟ್ ಗೆ ಮಲಯಾಳಿ ನಂಟು: ಕೇರಳದ ವಯನಾಡ್ ಮೂಲದ ವ್ಯಕ್ತಿ ಕುರಿತು ತನಿಖೆ

ಘಟನೆಯಲ್ಲಿ 39 ವರ್ಷದ ಉದ್ಯಮಿ ಮತ್ತು ನಾರ್ವೇ ಪ್ರಜೆ ರಿನ್ಸನ್ ಜೋಸ್ ಭಾಗಿಯಾಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲತಃ ಕೇರಳದ ಮನಂತವಾಡಿಯವರಾದ ಜೋಸ್, ಪ್ರಸ್ತುತ ಓಸ್ಲೋದಲ್ಲಿ ವಾಸಿಸುತ್ತಿದ್ದಾರೆ.

ಕೊಜಿಕ್ಕೋಡ್: ಪೇಜರ್‌ಗಳು, ವಾಕಿ-ಟಾಕಿಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳ ಸ್ಫೋಟದ ನಂತರ ಲೆಬನಾನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಸ್ಫೋಟಗಳಲ್ಲಿ ಸುಮಾರು 20 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಸಾವುನೋವುಗಳಲ್ಲಿ ಲೆಬನಾನಿನ ಮಿಲಿಟರಿ ಹಿಜ್ಬುಲ್ಲಾದ ಹಲವಾರು ಸದಸ್ಯರು ಸೇರಿದ್ದಾರೆ.

ಈ ಸ್ಫೋಟಗಳ ಹಿಂದೆ ನೇರವಾಗಿ ಇಸ್ರೇಲ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ, ಆದರೆ ಇಸ್ರೇಲಿ ಗುಪ್ತಚರ ಸಂಸ್ಥೆಗಳು ಪೇಜರ್‌ಗಳು ಮತ್ತು ವಾಕಿ ಟಾಕಿಗಳನ್ನು ಹೇಗೆ ಮಾರಣಾಂತಿಕ ಅಸ್ತ್ರಗಳಾಗಿ ಪರಿವರ್ತಿಸಿದವು ಎಂದು ಪ್ರಪಂಚದಾದ್ಯಂತ ಜನರು ಆಶ್ಚರ್ಯ ಪಡುತ್ತಾರೆ. ಈ ನಡುವೆ ಕೇರಳ ಮೂಲದ ಇದೀಗ ನಾರ್ವೆ ಪ್ರಜೆಯಾಗಿರುವ ವ್ಯಕ್ತಿಯ ಹೆಸರು ಬಯಲಿಗೆ ಬರುತ್ತಿದೆ.

ಘಟನೆಯಲ್ಲಿ 39 ವರ್ಷದ ಉದ್ಯಮಿ ಮತ್ತು ನಾರ್ವೇ ಪ್ರಜೆ ರಿನ್ಸನ್ ಜೋಸ್ ಭಾಗಿಯಾಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲತಃ ಕೇರಳದ ಮನಂತವಾಡಿಯವರಾದ ಜೋಸ್, ಪ್ರಸ್ತುತ ಓಸ್ಲೋದಲ್ಲಿ ವಾಸಿಸುತ್ತಿದ್ದಾರೆ, ಜೋಸ್ ಕೇರಳದ ವಯನಾಡಿನಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅಲ್ಲಿಂದ ಎಂಬಿಎ ಮುಗಿಸಿ ನಾರ್ವೆಗೆ ಹೋದರು. ಲೆಬನಾನ್​​ನ ರಾಜ್ಯ ಭದ್ರತಾ ಸಂಸ್ಥೆ DANS ಮಾಡಿದ ತನಿಖೆ ಪ್ರಕಾರ ಸಂಹವನಕ್ಕಾಗಿ ಬಳಸುವ ಪೇಜರ್​​ಗಳಲ್ಲಿ ಮೂರು ಗ್ರಾಂ ಸ್ಫೋಟಕ ತುಂಬಲಾಗುತ್ತದೆ. ಪ್ರಾಥಮಿಕ ತನಿಖೆಗಳ ಪ್ರಕಾರ ಈ ಪೇಜರ್ ಸ್ಫೋಟಕಗಳನ್ನು ತೈವಾನ್ ಮೂಲದ ಗೋಲ್ಡ್ ಅಪೊಲೊ ತಯಾರಿಸಿದೆ ಎಂದು ಹೇಳಲಾಗಿದೆ. ಸ್ಫೋಟದ ದಿನದಿಂದ ರಿನ್ಸನ್ ಜೋಸ್ ಮತ್ತು ಅವರ ಪತ್ನಿ ನಾಪತ್ತೆಯಾಗಿರುವುದರಿಂದ ತಮ್ಮ ಕಿರಿಯ ಸಹೋದರ ವಾಸಿಸುವ ಯುಎಸ್ ಅಥವಾ ಯುಕೆಗೆ ಓಡಿಹೋಗಿರಬಹುದು ಎಂದು ವರದಿಯಾಗಿದೆ.

ಮಾನಂತವಾಡಿಯಲ್ಲಿರುವ ಜೋಸ್ ಅವರ ಕುಟುಂಬ ಈ ಆರೋಪಕ್ಕೆ ಆಘಾತ ವ್ಯಕ್ತಪಡಿಸಿದೆ. ಅವರ ಚಿಕ್ಕಪ್ಪ, ತಂಕಚನ್ ಮಾತನಾಡಿ. ಕಾನೂನುಬಾಹಿರ ಚಟುವಟಿಕೆಯ ಅನುಮಾನವನ್ನು ನಿರಾಕರಿಸಿದ್ದಾರೆ. ರಿನ್ಸನ್ ಕೇವಲ ಒಂದು ವಾರದ ಹಿಂದೆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಯಾವಾಗಲೂ ಉತ್ತಮ ನಡವಳಿಕೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.

ಥಂಕಚನ್ ಪ್ರಕಾರ, ರಿನ್ಸನ್ ಕೊನೆಯ ಬಾರಿಗೆ 2022 ರಲ್ಲಿ ತನ್ನ ತವರು ಮನೆಗೆ ಭೇಟಿ ನೀಡಿದ್ದರು. ರಿನ್ಸನ್ 2012 ರಲ್ಲಿ ನಾರ್ವೆಗೆ ತೆರಳಿದರು ಮತ್ತು ನಾರ್ವೇಜಿಯನ್ ಪೌರತ್ವವನ್ನು ಹೊಂದಿದ್ದಾರೆ. ಅವರು NortaLink ಎಂಬ ಐಟಿ ಸಲಹಾ ಸಂಸ್ಥೆಯನ್ನು ಒಳಗೊಂಡಂತೆ ಹಲವಾರು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ . ಓಸ್ಲೋದಲ್ಲಿ DN ಮೀಡಿಯಾ ಗ್ರೂಪ್‌ಗೆ ಗ್ರಾಹಕ ಪ್ರಯಾಣ ಮತ್ತು CRM ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಇಂಡಿಯನ್ ಸ್ಪೋರ್ಟ್ ಮತ್ತು ಕಲ್ಚರಲ್ ಅಸೋಸಿಯೇಷನ್ ​​ಆಫ್ ನಾರ್ವೆ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಯನಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ತಪೋಶ್ ಬಸುಮತರಿ ಅವರು ಸ್ಥಳೀಯ ಅಧಿಕಾರಿಗಳು ಸಮಸ್ಯೆಯ ಸೂಕ್ಷ್ಮತೆ ಬಗ್ಗೆ ತಿಳಿದಿದ್ದಾರೆ ಮತ್ತು ಮಾನಂತವಾಡಿಯಲ್ಲಿರುವ ರಿನ್ಸನ್ ಅವರ ಕುಟುಂಬಕ್ಕೆ ರಕ್ಷಣೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಅಥವಾ ಕೇಂದ್ರ ಅಧಿಕಾರಿಗಳು ಯಾವುದೇ ನಿರ್ದಿಷ್ಟ ಆದೇಶವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT