ಸಾಂದರ್ಭಿಕ ಚಿತ್ರ 
ದೇಶ

ಅಂಟಾಸಿಡ್ ಪ್ಯಾನ್ ಡಿ, ಪ್ಯಾರಸಿಟಮಾಲ್ ಸೇರಿ 50ಕ್ಕೂ ಹೆಚ್ಚು ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್!

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಕಳೆದ ಆಗಸ್ಟ್‌ನಲ್ಲಿ 'ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ' (NSQ) ಎಚ್ಚರಿಕೆ ನೀಡಿತ್ತು.

ನವದೆಹಲಿ: ಮಧುಮೇಹ, ಅಧಿಕ ರಕ್ತದೊತ್ತಡ, ವಿಟಮಿನ್‌ಗಳು, ಕ್ಯಾಲ್ಸಿಯಂ ಡಿ3 ಸಪ್ಲಿಮೆಂಟ್ಸ್, ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಆಸಿಡ್ ರಿಫ್ಲಕ್ಸ್ ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳು ಭಾರತದ ಔಷಧ ನಿಯಂತ್ರಕ ನಡೆಸಿದ ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್ ಆಗಿವೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಕಳೆದ ಆಗಸ್ಟ್‌ನಲ್ಲಿ 'ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ' (NSQ) ಎಚ್ಚರಿಕೆಯನ್ನು ನೀಡಿತ್ತು. ಅಲ್ಕೆಮ್ ಲ್ಯಾಬೊರೇಟರೀಸ್, ಹೆಟೆರೊ ಡ್ರಗ್ಸ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್(HAL), ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಸೇರಿದಂತೆ ಕೆಲವು ಹೆಚ್ಚು ಮಾರಾಟವಾದ ಔಷಧಿಗಳನ್ನು ಪ್ರಸಿದ್ಧ ಔಷಧಿ ಕಂಪನಿಗಳು ಉತ್ಪಾದಿಸಿವೆ ಎಂದು ಹೈಲೈಟ್ ಮಾಡಿದೆ.

NSQ ಎಂದು ಗುರುತಿಸಲಾದ ಔಷಧಿಗಳಲ್ಲಿ ಪ್ಯಾರಸಿಟಮಾಲ್ ಮಾತ್ರೆಗಳು(500 mg), ಮಧುಮೇಹ ವಿರೋಧಿ ಔಷಧ ಗ್ಲಿಮೆಪಿರೈಡ್, ಅಧಿಕ ರಕ್ತದೊತ್ತಡ ಔಷಧಿ ಟೆಲ್ಮಾ H(ಟೆಲ್ಮಿಸಾರ್ಟನ್ 40 mg), ಆಸಿಡ್ ರಿಫ್ಲಕ್ಸ್ ಔಷಧಿ ಪ್ಯಾನ್ ಡಿ, ಮತ್ತು ಕ್ಯಾಲ್ಸಿಯಂ ಪೂರಕಗಳಾದ ಶೆಲ್ಕಾಲ್ C ಮತ್ತು D3 ಸೇರಿವೆ. ಈ ಪಟ್ಟಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಆಂಟಿಬಯೋಟಿಕ್ ಮೆಟ್ರೋನಿಡಜೋಲ್ ಸಹ ಇದೆ. ಇದನ್ನು HAL ತಯಾರಿಸಿದೆ.

ಅಲ್ಕೆಮ್ ಹೆಲ್ತ್ ಸೈನ್ಸ್‌ನ ಆ್ಯಂಟಿಬಯೋಟಿಕ್ಸ್, ಕ್ಲಾವಮ್ 625 ಮತ್ತು ಪ್ಯಾನ್ ಡಿ ಸಹ ಕಳಪೆ ಗುಣಮಟ್ಟದ್ದಾಗಿದೆ ಎಂದು ಕೋಲ್ಕತ್ತಾ ರಾಜ್ಯ-ಚಾಲಿತ ಪ್ರಯೋಗಾಲಯ ಗುರುತಿಸಿದೆ. ಮಕ್ಕಳಲ್ಲಿ ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿಗೆ ಸೂಚಿಸಲಾಗುವ, ಹೈದರಾಬಾದ್ ಮೂಲದ ಹೆಟೆರೊದ ಸೆಪೊಡೆಮ್ ಎಕ್ಸ್‌ಪಿ 50 ಡ್ರೈ ಕಳಪೆ ಗುಣಮಟ್ಟದ್ದಾಗಿದೆ ಎಂದು ಲ್ಯಾಬ್ ಹೇಳಿದೆ.

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಪ್ಯಾರಸಿಟಮಾಲ್ ಮಾತ್ರೆಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಹೆಚ್ಚುವರಿಯಾಗಿ, ಪಿತ್ತ ಕರಗಿಸಲು ಸಿದ್ಧಪಡಿಸಲಾದ ಸನ್ ಫಾರ್ಮಾ ಲ್ಯಾಬೊರೇಟರೀಸ್ ಲಿಮಿಟೆಡ್‌ನ ಉರ್ಸೊಕಾಲ್ 300 ಅನ್ನು ನಕಲಿ ಎಂದು ಫ್ಲ್ಯಾಗ್ ಮಾಡಲಾಗಿದೆ.

ಹರಿದ್ವಾರದಲ್ಲಿ ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬ್ ತಯಾರಿಸಿದ ಟೆಲ್ಮಿಸಾರ್ಟನ್‌ನ ಹಲವು ಬ್ಯಾಚ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT