ಸುಪ್ರೀಂ ಕೋರ್ಟ್  online desk
ದೇಶ

ನನಗೂ ಮಗಳಿದ್ದಾಳೆ, ಯುವಕ-ಯುವತಿ ರಿಲೇಷನ್ ಶಿಪ್ ಶಿಕ್ಷಾರ್ಹವಲ್ಲ; ಭಗ್ನ ಪ್ರಣಯ ಸಂಬಂಧಗಳನ್ನೆಲ್ಲಾ ಅತ್ಯಾಚಾರ ಎನ್ನಲಾಗದು: ಸುಪ್ರೀಂ ಕೋರ್ಟ್ ಜಡ್ಜ್

ಪುರುಷನ ಮೇಲೆ ಆರೋಪ ಹೊರಿಸಲಾಗುವ ಸಂಪ್ರದಾಯವಾದಿ ನೈತಿಕತೆ ಮತ್ತು ಮೌಲ್ಯಗಳಿಂದ ಕೆಲವೊಮ್ಮೆ ಇಂತಹ ದೂರುಗಳು ಉಂಟಾಗುತ್ತವೆ ಎಂದು ನ್ಯಾಯಾಲಯ ಗಮನಿಸಿದೆ.

ನವದೆಹಲಿ: ಭಗ್ನ ಪ್ರಣಯ ಸಂಬಂಧಗಳೆಂದರೆ ಅಲ್ಲಿ ಗಂಡು ಅಥವಾ ಹೆಣ್ಣಿನ ಮೇಲೆ ಲೈಂಗಿಕ ಸಂಬಂಧಗಳನ್ನು ಹೇರಲಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.

ಮಹಿಳೆಯೊಬ್ಬರು ತನ್ನ ವಿರುದ್ಧ ಸಲ್ಲಿಸಿದ್ದ ಅತ್ಯಾಚಾರ ಆರೋಪಗಳನ್ನು ಖುಲಾಸೆಗೊಳಿಸಬೇಕೆಂದು ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂಎಂ ಸುಂದರೇಶ್ ಹಾಗೂ ನ್ಯಾ. ರಾಜೇಶ್ ಬಿಂದಾಲ್ ಅವರಿದ್ದ ಪೀಠ ಇಂದಿನ ಜಗತ್ತಿನಲ್ಲಿ ವಿಕಸನಗೊಳ್ಳುತ್ತಿರುವ ನೈತಿಕತೆಯ ಪ್ರಜ್ಞೆಯನ್ನು ಉಲ್ಲೇಖಿಸಿದ್ದಾರೆ. ಮದುವೆ ನಿರೀಕ್ಷೆಯಲ್ಲಿ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ.

"ಮಹಿಳೆ, ಮುಂದಿನ ದಿನಗಳಲ್ಲಿ ಈ ಸಂಬಂಧ ಮುರಿಯಬಹುದು ಎಂಬ ಆಯ್ಕೆಯೊಂದಿಗೇ ಈ ಸಂಬಂಧವನ್ನು ಒಪ್ಪಿಕೊಂಡರು" ಎಂದು ನ್ಯಾಯಪೀಠ ಹೇಳಿದ್ದು ಯಾವುದೇ ವಿಫಲ ಸಂಬಂಧವನ್ನು ಅಂತಿಮವಾಗಿ ಶಿಕ್ಷಿಸಬಹುದೇ ಎಂದು ಪ್ರಶ್ನಿಸಿದೆ.

"ನೀವು ಅಪ್ರಾಪ್ತರಲ್ಲ... ನಿಮಗೆ ಮದುವೆಯಾಗುತ್ತೇನೆ ಅಂತ ಮೋಸ ಮಾಡಿರಲು ಸಾಧ್ಯವಿಲ್ಲ. ಇಂದು ನೈತಿಕತೆ, ಸದ್ಗುಣಗಳ ಪರಿಕಲ್ಪನೆ ಕಿರಿಯರಿಗೆ ಹೋಲಿಸಿದರೆ ಭಿನ್ನವಾಗಿದೆ. ನಾವು ನಿಮ್ಮ ವಾದವನ್ನು ಒಪ್ಪಿದರೆ, ಕಾಲೇಜಿನಲ್ಲಿ ಹುಡುಗ ಮತ್ತು ಹುಡುಗಿಯ ನಡುವಿನ ಯಾವುದೇ ಸಂಬಂಧ ಇತ್ಯಾದಿಗಳು ಶಿಕ್ಷಾರ್ಹವಾಗಿರುತ್ತವೆ."

ವ್ಯವಸ್ಥೆಯಲ್ಲಿನ "ದೋಷ"ದ ಕಾರಣದಿಂದಾಗಿ. ಪುರುಷನ ಮೇಲೆ ಆರೋಪ ಹೊರಿಸಲಾಗುವ ಸಂಪ್ರದಾಯವಾದಿ ನೈತಿಕತೆ ಮತ್ತು ಮೌಲ್ಯಗಳಿಂದ ಕೆಲವೊಮ್ಮೆ ಇಂತಹ ದೂರುಗಳು ಉಂಟಾಗುತ್ತವೆ ಎಂದು ನ್ಯಾಯಾಲಯ ಗಮನಿಸಿದೆ.

ಮಹಿಳೆಯ ಪರ ವಾದ ಮಂಡಿಸಿದ ವಕೀಲರು, ಪ್ರಶ್ನಾರ್ಹ ಸಂಬಂಧವು 'ವ್ಯವಸ್ಥಿತ'ವಾಗಿದ್ದು, 'ಪ್ರಣಯ' ಸ್ವಭಾವದ್ದಾಗಿರಲಿಲ್ಲ ಎಂದು ಎತ್ತಿ ತೋರಿಸಿದರು, "ಇದು ಹಳಸಿದ ಪ್ರಣಯ ಸಂಬಂಧವಲ್ಲ. ಈ ಸಂಬಂಧ ವ್ಯವಸ್ಥಿತವಾಗಿತ್ತು. ಈ ಪ್ರಕರಣದಲ್ಲಿ ಒಪ್ಪಿಗೆಯನ್ನು 'ಮುಕ್ತ ಒಪ್ಪಿಗೆ' ಎಂದು ಹೇಳಲಾಗುವುದಿಲ್ಲ" ಎಂದು ಮಾಧವಿ ದಿವಾನ್ ಹೇಳಿದರು, ನಿಶ್ಚಿತಾರ್ಥವನ್ನು ಮುರಿಯುವುದು "ಸಾಮಾಜಿಕ ನಿಷೇಧ"ಕ್ಕೆ ಸಮನಾಗಿರುತ್ತದೆ ಎಂದು ವಿವರಿಸಿದರು.

ಪುರುಷನು ಆತನನ್ನು ಮೆಚ್ಚಿಸದಿದ್ದರೆ ಆ ಪುರುಷನು ತನ್ನನ್ನು ಮದುವೆಯಾಗುವುದಿಲ್ಲ ಎಂದು ಮಹಿಳೆ ನಂಬಿದ್ದಳು ಎಂದು ದಿವಾನ್ ವಾದಿಸಿದರು. "ಇದು ಓರ್ವ ಪುರುಷನಿಗೆ ಸಾಂದರ್ಭಿಕ ಲೈಂಗಿಕತೆಯಾಗಿರಬಹುದು... ಆದರೆ ಮಹಿಳೆಗೆ ಅಲ್ಲ" ಎಂದು ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಆದಾಗ್ಯೂ, ಎರಡೂ ಕಡೆಯ ದೃಷ್ಟಿಕೋನಗಳಿಂದ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಮತ್ತು ಅದು "ಯಾವುದೇ ಒಂದು ಕಡೆಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. "ನನಗೂ ಒಬ್ಬ ಮಗಳಿದ್ದಾಳೆ (ಆದರೆ) ಅವಳು ಈ ಸ್ಥಾನದಲ್ಲಿದ್ದರೆ ನಾನು ವಿಶಾಲ ದೃಷ್ಟಿಕೋನವನ್ನು ನೋಡಬೇಕಾಗಿದೆ. ಈ ಸಂದರ್ಭದಲ್ಲಿ, ಅಂತಹ ದುರ್ಬಲ ಸಂಗತಿಗಳೊಂದಿಗೆ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಬಹುದೇ?" ಎಂದು ನ್ಯಾಯಮೂರ್ತಿ ಸುಂದ್ರೇಶ್ ಪ್ರಶ್ನಿಸಿದ್ದಾರೆ. ಆದಾಗ್ಯೂ, ಮಹಿಳೆ "ಅಂತಿಮವಾಗಿ... ಬಲಿಪಶು" ಎಂದು ನ್ಯಾಯಾಲಯ ಹೇಳಿದ್ದು, ಅಂತಿಮವಾಗಿ ನ್ಯಾಯಾಲಯ ಪುರುಷನ ಮನವಿಯನ್ನು ಮತ್ತಷ್ಟು ಆಲಿಸಲು ನಿರ್ಧರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT