ದೇಶ

ಕುನೋ ರಾಷ್ಟ್ರೀಯ ಉದ್ಯಾನವನ: ನೀರು ನೀಡುತ್ತ ಚೀತಾಗಳ ಬಳಿಯೇ ಕುಳಿತುಕೊಂಡ ವ್ಯಕ್ತಿ: ವಿಡಿಯೋ ವೈರಲ್

ಉದ್ಯಾನವನದ ಅಧಿಕಾರಿಗಳು ವೀಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸಲಿಲ್ಲ ಮತ್ತು ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಭೋಪಾಲ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್‌ಪಿ) ಬಳಿಯ ಹಳ್ಳಿಯೊಂದರಲ್ಲಿ ಚೀತಾಗಳಿಗೆ ವ್ಯಕ್ತಿಯೊಬ್ಬ ನೀರು ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗತೊಡಗಿವೆ.

ಆದಾಗ್ಯೂ, ಉದ್ಯಾನವನದ ಅಧಿಕಾರಿಗಳು ವೀಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸಲಿಲ್ಲ ಮತ್ತು ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಸುಮಾರು 40 ಸೆಕೆಂಡುಗಳ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ಡಬ್ಬಿಯಿಂದ ನೀರನ್ನು ಪ್ಯಾನ್‌ಗೆ ಸುರಿಯುವುದನ್ನು ಕಾಣಬಹುದಾಗಿದೆ. ನಂತರ ಸುತ್ತಮುತ್ತಲಿನ ನೆರಳಿನಲ್ಲಿ ಕುಳಿತಿದ್ದ ಐದು ಚೀತಾಗಳು ಪಾತ್ರೆಯ ಬಳಿಗೆ ನಡೆದು ನೀರು ಕುಡಿಯಲು ಪ್ರಾರಂಭಿಸುತ್ತವೆ.

ಆ ವ್ಯಕ್ತಿ ಆರಂಭದಲ್ಲಿ ಚೀತಾಗಳ ಹತ್ತಿರ ಹೋಗಲು ಹಿಂಜರಿಯುತ್ತಿರುವಂತೆ ತೋರುತ್ತದೆ. ಆದರೆ ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ಸೇರಿದಂತೆ ಅವನ ಹಿಂದೆ ಇರುವವರು ಚೀತಾಗಳಿಗೆ ನೀರು ಕುಡಿಯಲು ಬಿಡುವಂತೆ ಅವನನ್ನು ಒತ್ತಾಯಿಸುತ್ತಾರೆ. ನಂತರ ಆ ವ್ಯಕ್ತಿ ಪ್ಯಾನ್‌ಗೆ ನೀರನ್ನು ಸುರಿದು ಸ್ವಲ್ಪ ಸಮಯದವರೆಗೆ ಚೀತಾಗಳ ಬಳಿ ಕುಳಿತುಕೊಳ್ಳುತ್ತಾನೆ.

ವೈರಲ್ ವೀಡಿಯೊದ ಬಗ್ಗೆ ಕೇಳಿದಾಗ, ಚೀತಾ ಯೋಜನಾ ನಿರ್ದೇಶಕ ಉತ್ತಮ್ ಕುಮಾರ್ ಶರ್ಮಾ ಅವರು ಈ ದೃಶ್ಯದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಷ್ಟೇ ಹೇಳಿದ್ದಾರೆ. ನಾವು ವೀಡಿಯೊವನ್ನು ದೃಢೀಕರಿಸಿಲ್ಲ. ಆದರೆ ನಾವು ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ.

ಶುಕ್ರವಾರದ ಆರಂಭದಲ್ಲಿ, ಚಿರತೆಗಳು ತಮ್ಮ ಬೇಟೆಯನ್ನು ತಿನ್ನುವುದನ್ನು ತೋರಿಸುವ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಎರಡೂ ವೀಡಿಯೊಗಳನ್ನು ಉಮರಿಕಲಾ ಗ್ರಾಮದ ಬಳಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ತಿಂಗಳು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹಲವಾರು ವೀಡಿಯೊಗಳು ಮಾನವ ವಸಾಹತುಗಳ ಬಳಿ ಮತ್ತು ವಿರ್‌ಪುರ್ ತಹಸಿಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಸೇತುವೆಯಲ್ಲಿ ಹೆಣ್ಣು ಚಿರತೆ ಮತ್ತು ಅದರ ನಾಲ್ಕು ಮರಿಗಳ ಚಲನವಲನಗಳನ್ನು ಸೆರೆ ಹಿಡಿದಿದೆ.

ಪ್ರಸ್ತುತ, ಭಾರತೀಯ ನೆಲದಲ್ಲಿ ಜನಿಸಿದ 11 ಮರಿಗಳು ಸೇರಿದಂತೆ 17 ಚಿರತೆಗಳು ಕೆಎನ್‌ಪಿಯಲ್ಲಿ ಕಾಡಿನಲ್ಲಿ ಅಡ್ಡಾಡುತ್ತಿದರೆ, ಒಂಬತ್ತು ಮರಿಗಳು ಆವರಣ (enclosures) ಗಳಲ್ಲಿವೆ.

ಸೆಪ್ಟೆಂಬರ್ 17, 2022 ರಂದು ಎಂಟು ನಮೀಬಿಯನ್ ಚಿರತೆಗಳನ್ನು-ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಕೆಎನ್‌ಪಿಯಲ್ಲಿ ಬಿಡಲಾಯಿತು, ಇದು ಚೀತಾಗಳ ಮೊದಲ ಖಂಡಾಂತರ ಸ್ಥಳಾಂತರವಾಗಿದೆ. ಫೆಬ್ರವರಿ 2023 ರಲ್ಲಿ, ದಕ್ಷಿಣ ಆಫ್ರಿಕಾದಿಂದ ಅಭಯಾರಣ್ಯಕ್ಕೆ 12 ಹೆಚ್ಚಿನ ಚೀತಾಗಳನ್ನು ಸ್ಥಳಾಂತರಿಸಲಾಯಿತು. ಸಂರಕ್ಷಿತ ಅರಣ್ಯವು ಈಗ 26 ಚೀತಾಗಳನ್ನು ಹೊಂದಿದೆ, ಇದರಲ್ಲಿ 14 ಭಾರತದಲ್ಲಿ ಜನಿಸಿದ ಮರಿಗಳು ಸೇರಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT