ಪಂಬನ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ online desk
ದೇಶ

Pamban bridge ಉದ್ಘಾಟಿಸಿದ PM Modi: ಹೊಸ ಚೆನ್ನೈ ರೈಲು ಸೇವೆಗಳಿಗೆ ಚಾಲನೆ

ರೈಲು ಪಂಬನ್ ಸೇತುವೆಯನ್ನು ದಾಟಿದ ನಂತರ, ಹಳೆಯ ಮತ್ತು ಹೊಸ ಪಂಬಂ ಸೇತುವೆಗಳ ಸೆಂಟರ್ ಲಿಫ್ಟ್ ಸ್ಪ್ಯಾನ್ ನ್ನು ಐಸಿಜಿ ಹಡಗುಗಳು ಆ ಪ್ರದೇಶವನ್ನು ದಾಟಲು ತೆರೆಯಲಾಗಿದೆ.

ರಾಮೇಶ್ವರಂ: ರಾಮೇಶ್ವರಂ ದ್ವೀಪ ಮತ್ತು ಮುಖ್ಯ ಭೂಭಾಗದ ನಡುವೆ ರೈಲು ಸಂಪರ್ಕವನ್ನು ಒದಗಿಸುವ ಪಂಬನ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.

ಪಂಬನ್ ಸೇತುವೆಯನ್ನು ತೆರೆದ ನಂತರ, ಪ್ರಧಾನಿ ಮೋದಿ ರಾಮೇಶ್ವರಂ - ತಾಂಬರಂ ಎಕ್ಸ್‌ಪ್ರೆಸ್‌ನಿಂದ ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು. ರೈಲು ಪಂಬನ್ ಸೇತುವೆಯನ್ನು ದಾಟಿದ ನಂತರ, ಹಳೆಯ ಮತ್ತು ಹೊಸ ಪಂಬಂ ಸೇತುವೆಗಳ ಸೆಂಟರ್ ಲಿಫ್ಟ್ ಸ್ಪ್ಯಾನ್ ನ್ನು ಐಸಿಜಿ ಹಡಗುಗಳು ಆ ಪ್ರದೇಶವನ್ನು ದಾಟಲು ತೆರೆಯಲಾಗಿದೆ.

ರಾಮ ನವಮಿಯ ಶುಭ ದಿನದಂದು ಹೊಸ ಸೇತುವೆಯನ್ನು ತೆರೆಯಲಾಗಿದೆ. ಸಾಂಪ್ರದಾಯಿಕ ತಮಿಳು ಉಡುಪಿನ ಧೋತಿ ಮತ್ತು ಶರ್ಟ್ ಧರಿಸಿದ ಪ್ರಧಾನಿ ಮೋದಿ, ಪಂಬನ್ ರಸ್ತೆ ಸೇತುವೆಯ ಮೇಲಿನ ವೇದಿಕೆಯಿಂದ 535 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 2.08 ಕಿ.ಮೀ ಉದ್ದದ ಭಾರತದ ಮೊದಲ ಲಂಬ ಸಮುದ್ರ ರೈಲು ಸೇತುವೆ ಇದಾಗಿದೆ.

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಕೇಂದ್ರ ರಾಜ್ಯ ಸಚಿವ ಎಲ್. ಮುರುಗನ್, ತಮಿಳುನಾಡು ರಾಜ್ಯ ಸಚಿವ ತಂಗಮ್ ತೆನ್ನರಸು, ರಾಜಾ ಕಣ್ಣಪ್ಪನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಬಿಜೆಪಿ ನಾಯಕರಾದ ನೈನಾರ್ ನಾಗೇಂದ್ರನ್, ವನತಿ ಶ್ರೀನಿವಾಸನ್ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೊಸ ಪಂಬನ್ ರೈಲ್ವೆ ಸಮುದ್ರ ಸೇತುವೆಯ ಲಂಬ ಲಿಫ್ಟ್ ಸ್ಪ್ಯಾನ್‌ನ ಮಾದರಿಯನ್ನು ಪ್ರಧಾನಿಗೆ ನೀಡಲಾಯಿತು. ಸೇತುವೆಯ ಕೆಳಗೆ ಹಾದುಹೋಗುವ ಕೋಸ್ಟ್ ಗಾರ್ಡ್ ಹಡಗನ್ನು ಪ್ರಧಾನಿ ಹಸಿರು ನಿಶಾನೆ ತೋರಿದರು. ವರ್ಷವಿಡೀ ದೇಶಾದ್ಯಂತ ಭಕ್ತರು ಸೇರುವ ಈ ಆಧ್ಯಾತ್ಮಿಕ ತಾಣಕ್ಕೆ ಸಂಪರ್ಕವನ್ನು ಸುಧಾರಿಸಲು ಸೇತುವೆ ಸಜ್ಜಾಗಿದೆ.

2.08 ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿರುವ ಈ ಸೇತುವೆಯು 99 ಸ್ಪ್ಯಾನ್‌ಗಳು ಮತ್ತು 72.5 ಮೀಟರ್ ಉದ್ದದ ಲಂಬ ಲಿಫ್ಟ್ ಸ್ಪ್ಯಾನ್ ಅನ್ನು ಒಳಗೊಂಡಿದೆ, ಇದನ್ನು 17 ಮೀಟರ್‌ಗಳವರೆಗೆ ಎತ್ತರಿಸಬಹುದು, ಇದು ದೊಡ್ಡ ಹಡಗುಗಳ ಸುಗಮ ಹಾದಿಗೆ ಅನುವು ಮಾಡಿಕೊಡುತ್ತದೆ ಮತ್ತು ತಡೆರಹಿತ ರೈಲು ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ.

ಶ್ರೀಲಂಕಾದಿಂದ ಆಗಮಿಸಿದ ಮೋದಿ ಅವರನ್ನು ರವಿ, ತಮಿಳುನಾಡು ಹಣಕಾಸು ಸಚಿವ ತಂಗಮ್ ತೆನರಸು, ಕೇಂದ್ರ ರಾಜ್ಯ ಸಚಿವ ಎಲ್ ಮುರುಗನ್, ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ, ಎಚ್ ರಾಜಾ ಮತ್ತು ವನತಿ ಶ್ರೀನಿವಾಸನ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT