ಇಳಯರಾಜ ಮತ್ತು ಅಜಿತ್ ಕುಮಾರ್ 
ದೇಶ

ಹಾಡುಗಳ ಅನಧಿಕೃತ ಬಳಕೆ: 'ಗುಡ್ ಬ್ಯಾಡ್ ಅಗ್ಲಿ' ನಿರ್ಮಾಪಕರಿಗೆ ಇಳಯರಾಜ ಲೀಗಲ್ ನೋಟಿಸ್; 5 ಕೋಟಿ ರೂಪಾಯಿಗೆ ಡಿಮ್ಯಾಂಡ್!

ಯಶಸ್ಸಿನ ಖುಷಿಯಲ್ಲಿರುವಾಗಲೇ ‘ಗುಡ್ ಬ್ಯಾಡ್ ಅಗ್ಲಿʼಗೆ ಕಾನೂನು ಸಂಕಷ್ಟ ಎದುರಾಗಿದೆ. ಕಾಪಿ ರೈಟ್ಸ್‌ ಆರೋಪ ಮಾಡಿ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಚಿತ್ರತಂಡಕ್ಕೆ ನೊಟೀಸ್‌ ಕಳುಹಿಸಿದ್ದಾರೆ.

ಕಾಲಿವುಡ್‌ ನಟ ಅಜಿತ್‌ ಕುಮಾರ್‌ ಅಭಿನಯಿಸಿರುವ ‘ಗುಡ್ ಬ್ಯಾಡ್ ಅಗ್ಲಿʼ ಚಿತ್ರಕ್ಕೆ ಪಾಸಿಟವ್‌ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ರಿಲೀಸ್‌ ಆಗಿ ಐದು ದಿನ ಕಳೆದರೂ ಚಿತ್ರದ ಬಗೆಗಿನ ಕ್ರೇಜ್‌ ಕಡಿಮೆ ಆಗುತ್ತಿಲ್ಲ.

ಯಶಸ್ಸಿನ ಖುಷಿಯಲ್ಲಿರುವಾಗಲೇ ‘ಗುಡ್ ಬ್ಯಾಡ್ ಅಗ್ಲಿʼಗೆ ಕಾನೂನು ಸಂಕಷ್ಟ ಎದುರುರಾಗಿದೆ. ಕಾಪಿ ರೈಟ್ಸ್‌ ಆರೋಪ ಮಾಡಿ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಚಿತ್ರತಂಡಕ್ಕೆ ನೊಟೀಸ್‌ ಕಳುಹಿಸಿದ್ದಾರೆ.

ತಮಿಳು ಆ್ಯಕ್ಷನ್-ಕಾಮಿಡಿ ‘ಗುಡ್ ಬ್ಯಾಡ್ ಅಗ್ಲಿ’ ನಿರ್ಮಾಪಕರಿಗೆ ಸಂಗೀತ ಮಾಂತ್ರಿಕ ಇಳಯರಾಜ ಲೀಗಲ್‌ ನೊಟೀಸ್‌ ಕಳುಹಿಸಿದ್ದಾರೆ. ಇಳಯರಾಜ ಅವರ ‘ಓತ ರುಬಾಯುಮ್ ತಾರೆನ್’, ‘ಇಲಮೈ ಇದೋ ಇಧೋ’ ಮತ್ತು ‘ಏನ್ ಜೋಡಿ ಮಂಜ ಕುರುವಿ’ ಹಾಡುಗಳ ಬದಲಾದ ಆವೃತ್ತಿಗಳನ್ನು ಬಳಸಿದ್ದಕ್ಕಾಗಿ ಚಿತ್ರತಂಡಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.

ನಮ್ಮ ಕ್ಲೈಂಟ್‌ನ ‘ನಟ್ಟುಪುರ ಪಟ್ಟು’ ಚಿತ್ರದ ‘ಒಥ ರುಬಾಯುಮ್ ತರೇನ್’, ‘ಸಕಲಕಲಾ ವಲ್ಲವನ್’ ಚಿತ್ರದ ‘ಇಲಮೈ ಇಧೋ ಇಧೋ’ ಮತ್ತು ‘ವಿಕ್ರಮ್’ ಚಿತ್ರದ ‘ಎನ್ ಜೋಡಿ ಮಂಜ ಕುರುವಿ’ ಹಾಡುಗಳನ್ನು ಸ್ಪಷ್ಟ ಒಪ್ಪಿಗೆ/ಅನುಮತಿ ಪಡೆಯದೆ ಚಿತ್ರದಲ್ಲಿ ಬಳಸಲಾಗಿದೆ. ಹಾಡುಗಳನ್ನು ಮಾರ್ಪಡಿಸಿ ಚಿತ್ರದಲ್ಲಿ ಬಳಸಿರುವುದು ಗಮನಕ್ಕೆ ಬಂದಿದೆ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ. ಇದು ಅನಧಿಕೃತ ಬಳಕೆ, ಸ್ವಾಧೀನ ಆಗಿದ್ದು, ನಮ್ಮ ಕ್ಲೈಂಟ್‌ನ ಹಕ್ಕುಸ್ವಾಮ್ಯ ಮತ್ತು ನೈತಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಚಿತ್ರದಲ್ಲಿನ ನನ್ನ ಶೀಘ್ರವೇ ಹಾಡುಗಳನ್ನು ತೆಗೆದು ಹಾಕಬೇಕು. ಇಲ್ಲದಿದ್ರೆ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 5 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT