ಬಾಂಗ್ಲಾದೇಶದ ಸಾಂದರ್ಭಿಕ ಚಿತ್ರ 
ದೇಶ

ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡನ ಹತ್ಯೆಗೆ ಖಂಡನೆ: 'ವ್ಯವಸ್ಥಿತ ಕಿರುಕುಳ' ಎಂದ ಭಾರತ!

ಉತ್ತರ ಬಾಂಗ್ಲಾದೇಶದ ದಿನಜ್‌ಪುರ ಜಿಲ್ಲೆಯ ಅವರ ನಿವಾಸದಿಂದ ಅಪಹರಿಸಲಾಗಿದ್ದ 58 ವರ್ಷದ ರಾಯ್ ಅವರ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದು, ತೀವ್ರ ಗಾಯಗಳಿಂದ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಮುಖಂಡ ಭಬೇಶ್ ಚಂದ್ರ ರಾಯ್ ಅವರ ಹತ್ಯೆಯನ್ನು ಭಾರತ ಶನಿವಾರ ಬಲವಾಗಿ ಖಂಡಿಸಿದೆ. ಇದು ನೆರೆಯ ದೇಶದ ಮಧ್ಯಂತರ ಸರ್ಕಾರದಡಿ ಅಲ್ಪಸಂಖ್ಯಾತರ ಮೇಲಿನ ವ್ಯವಸ್ಥಿತ ಕಿರುಕುಳದ ಭಾಗವಾಗಿದೆ ಎಂದು ಕರೆದಿದೆ.

ಉತ್ತರ ಬಾಂಗ್ಲಾದೇಶದ ದಿನಜ್‌ಪುರ ಜಿಲ್ಲೆಯ ಅವರ ನಿವಾಸದಿಂದ ಅಪಹರಿಸಲಾಗಿದ್ದ 58 ವರ್ಷದ ರಾಯ್ ಅವರ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದು, ತೀವ್ರ ಗಾಯಗಳಿಂದ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾಯ್ ಅವರು ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ತಿನ ಬಿರಾಲ್ ಘಟಕದ ಉಪಾಧ್ಯಕ್ಷರಾಗಿದ್ದರು ಮತ್ತು ಹಿಂದೂ ಸಮುದಾಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು ಎನ್ನಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ಇಂತಹ ಘಟನೆಗಳ ಅಪರಾಧಿಗಳು ನಿರ್ಭಯದಿಂದ ಅಲೆದಾಡುತ್ತಿದ್ದು, ಇದು ಮಧ್ಯಂತರ ಸರ್ಕಾರದಡಿ ಹಿಂದೂ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಶೋಷಿಸುವ ಮಾದರಿಯ ಹತ್ಯೆಯಾಗಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಬಾಂಗ್ಲಾದೇಶದ ಜವಾಬ್ದಾರಿಗಳನ್ನು ಭಾರತ ನೆನಪಿದೆ. "ಈ ಘಟನೆಯನ್ನು ಖಂಡಿಸುತ್ತೇವೆ. ಮಧ್ಯಂತರ ಸರ್ಕಾರ ಹಿಂದೂಗಳು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿಯನ್ನು ಮತ್ತೊಮ್ಮೆ ನೆನಪಿಸುತ್ತೇವೆ ಎಂದು ಹೇಳಿದೆ.

ದಿ ಡೈಲಿ ಸ್ಟಾರ್ ಪ್ರಕಾರ, ಗುರುವಾರ ಸಂಜೆ 4-30ರ ಸುಮಾರಿನಲ್ಲಿ ರಾಯ್ ಫೋನ್ ಕರೆ ಸ್ವೀಕರಿಸಿದ್ದಾರೆ. ಅವರು ಮನೆಯಲ್ಲಿ ಇದ್ದಾರೆಯೇ ಎಂಬುದನ್ನು ಖಚಿಪಡಿಸಿಕೊಳ್ಳಲು ದುಷ್ಕರ್ಮಿಗಳು ಮಾಡಿದ ಕರೆ ಎನ್ನಲಾಗಿದೆ. ಬಳಿಕ ಅರ್ಧಗಂಟೆಯಲ್ಲಿ ಎರಡು ಸ್ಕೂಟರ್ ನಲ್ಲಿ ಬಂದ ನಾಲ್ವರು ರಾಯ್ ಅವರನ್ನು ಢಾಕಾದಿಂದ ಸುಮಾರು 330 ಕಿ.ಮೀ ದೂರದಲ್ಲಿರುವ ಅವರ ಮನೆಯಿಂದ ಅಪಹರಿಸಿದ್ದಾರೆ.

ರಾಯ್ ಅವರು ಗುರುವಾರ ಸಂಜೆ 4:30 ರ ಸುಮಾರಿಗೆ ಫೋನ್ ಕರೆಯನ್ನು ಸ್ವೀಕರಿಸಿದರು, ಮನೆಯಲ್ಲಿ ಅವರ ಉಪಸ್ಥಿತಿಯನ್ನು ದೃಢೀಕರಿಸುವ ದುಷ್ಕರ್ಮಿಗಳಿಂದ ನಂಬಲಾಗಿದೆ. ಸರಿಸುಮಾರು 30 ನಿಮಿಷಗಳ ನಂತರ, ಎರಡು ಮೋಟಾರ್ ಸೈಕಲ್‌ಗಳಲ್ಲಿ ಬಂದ ನಾಲ್ವರು ಢಾಕಾದಿಂದ ವಾಯುವ್ಯಕ್ಕೆ 330 ಕಿಲೋಮೀಟರ್ ದೂರದಲ್ಲಿರುವ ಬಸುದೇಬ್‌ಪುರ ಗ್ರಾಮದ ಅವರ ನಿವಾಸದಿಂದ ಅವರನ್ನು ಅಪಹರಿಸಿದ್ದಾರೆ.

ಬಳಿಕ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ರಾಯ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಗೆ ವಾಪಸ್ಸಾದಾಗ ಅವರನ್ನು ದಿನಾಜ್‌ಪುರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗಿದ್ದು, ದಾಳಿಕೋರರನ್ನು ಗುರುತಿಸಿ ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಬೀರಾಲ್ ಪೊಲೀಸ್ ಠಾಣೆ ಪ್ರಭಾರಿ ಅಧಿಕಾರಿ ಅಬ್ದುಸ್ ಸಬೂರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT