ನವದಂಪತಿಗಳಿಗೆ Blue Drum ಗಿಫ್ಟ್ 
ದೇಶ

ನವದಂಪತಿಗಳಿಗೆ Blue Drum ಗಿಫ್ಟ್: ಬೇಸ್ತು ಬಿದ್ದ ವರ, ಬಿದ್ದು ಬಿದ್ದು ನಕ್ಕ ಸಂಬಂಧಿಕರು! Video Viral

ಸಂಬಂಧಿಕರ ಈ ವಿಶೇಷ ಉಡುಗೊರೆ ನೋಡಿದ ವರ ಬೇಸ್ತು ಬಿದ್ದರೆ ಪಕ್ಕದಲ್ಲೇ ಇದ್ದ ವಧು ಮತ್ತು ಸಮಾರಂಭದಲ್ಲಿ ಹಾಜರಿದ್ದ ಸಂಬಂಧಿಕರು ಬಿದ್ದು ಬಿದ್ದು ನಕ್ಕಿದ್ದಾರೆ.

ಲಖನೌ: ಮೀರತ್ ನ ಸೌರವ್ ರಜಪೂತ್ ಕೊಲೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಉತ್ತರ ಪ್ರದೇಶದಲ್ಲಿ ನವದಂಪತಿಗಳಿಗೆ Blue Drum ಗಿಫ್ಟ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವರನ ಕಡೆಯ ಅತಿಥಿಗಳ ಗುಂಪೊಂದು ನವದಂಪತಿಗಳಿ ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಬಂಧಿಕರ ಈ ವಿಶೇಷ ಉಡುಗೊರೆ ನೋಡಿದ ವರ ಬೇಸ್ತು ಬಿದ್ದರೆ ಪಕ್ಕದಲ್ಲೇ ಇದ್ದ ವಧು ಮತ್ತು ಸಮಾರಂಭದಲ್ಲಿ ಹಾಜರಿದ್ದ ಸಂಬಂಧಿಕರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ನೀಲಿ ಡ್ರಮ್ ಏಕೆ?

ಈ ನೀಲಿ ಡ್ರಮ್ ಉತ್ತರ ಪ್ರದೇಶ ಮಾತ್ರವಲ್ಲ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೀಡಾದ ಅಪರಾಧ ಪ್ರಕರಣದ ಕೇಂದ್ರಬಿಂದುವೇ ಈ ನೀಲಿ ಬಣ್ಣದ ಡ್ರಮ್. ಇದೇ ಉತ್ತರ ಪ್ರದೇಶದ ಮೀರತ್ ನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕ್ರೂರವಾಗಿ ಕೊಂದು ಬಳಿಕ ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಇದೇ ರೀತಿಯ ನೀಲಿ ಡ್ರಮ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ಹಾಕಿ ಮುಚ್ಚಿ ಹಾಕಿದ್ದಳು.

ಇದೀಗ ಇದೇ ರೀತಿಯ ಡ್ರಮ್ ಅನ್ನು ವರನ ಸ್ನೇಹಿತರು ಗಿಫ್ಟ್ ನೀಡಿರುವುದು ಮದುವೆ ಗಂಡಿನ ಮುಜುಗರಕ್ಕೆ ಕಾರಣವಾಗಿದೆ. ವೇದಿಕೆ ಮೇಲಿದ್ದ ವರ ಇದನ್ನು ನೋಡಿ ಆಘಾತಕ್ಕೊಳಗಾದರೆ, ಪಕ್ಕದಲ್ಲೇ ಇದ್ದ ಆತನ ಪತ್ನಿ ನಕ್ಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಆದರೆ ವರನ ಕಡೆಯವರ ಈ ನಡೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, "ಇದಕ್ಕಿಂತ ಕೆಟ್ಟ ಜೋಕ್ ಏನಿರಬಹುದು! ಮದುವೆಯಂತಹ ಸಂತೋಷದ ಸಂದರ್ಭದಲ್ಲಿ ಘೋರ ತಮಾಷೆಯಾಗಿ ನೆನಪಿಸಿಕೊಳ್ಳುವುದು ಸಂಪೂರ್ಣವಾಗಿ ಸೂಕ್ತವಲ್ಲ" ಎಂದು ಕೆಲವರು ಕಿಡಿಕಾರುತ್ತಿದ್ದಾರೆ. "ಜಗತ್ತು ಮಾನಸಿಕ ಅಸ್ವಸ್ಥವಾಗಿದೆ, ಜನರು ಪ್ರತಿ ಬೀದಿಯಲ್ಲಿ ಗೇಲಿ ಮಾಡುತ್ತಿದ್ದಾರೆ, ಆದರೆ ಅದು ತನಗೇ ಸಂಭವಿಸಿದಾಗ, ಅವರಿಗೆ ಇತರರ ನೋವು ಅರ್ಥವಾಗುತ್ತದೆ ಎಂದು ಮತ್ತೋರ್ವ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT