ವಾರಣಾಸಿಯಲ್ಲಿ ಪ್ರಧಾನಿ ಮೋದಿ ಭಾಷಣ  
ದೇಶ

'ಆಪರೇಷನ್ ಸಿಂಧೂರ್' ಸಮಯದಲ್ಲಿ ಭಾರತ ತನ್ನ ರುದ್ರ ರೂಪ ತೋರಿಸಿದೆ, ವಿರೋಧ ಪಕ್ಷಗಳು ಮಾತ್ರ ಸಹಿಸಿಕೊಳ್ಳಲಿಲ್ಲ: ಪ್ರಧಾನಿ ಮೋದಿ

ನಮ್ಮ ದೇಶದ ಹೆಣ್ಣುಮಕ್ಕಳ ಸಿಂದೂರ ಅಳಿಸಿಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳುವ ನನ್ನ ಭರವಸೆಯನ್ನು ಮಹಾದೇವನ ಆಶೀರ್ವಾದದಿಂದ ಈಡೇರಿಸಲಾಯಿತು. ನಾನು ಕಾರ್ಯಾಚರಣೆಯ ಯಶಸ್ಸನ್ನು ಮಹಾದೇವನ ಪಾದಗಳಿಗೆ ಅರ್ಪಿಸುತ್ತೇನೆ ಎಂದರು.

ವಾರಣಾಸಿ: ಭಯೋತ್ಪಾದನೆಯ ವಿರುದ್ಧ ಭಾರತದ ದೃಢನಿಶ್ಚಯದ ಕ್ರಮವನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶಿವನ 'ರುದ್ರ ರೂಪ' (ಉಗ್ರ ರೂಪ)ವನ್ನು ಉಲ್ಲೇಖಿಸಿದರು. ಆಪರೇಷನ್ ಸಿಂದೂರ್ ದೇಶದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿದೆ. ಭಾರತದ ಮೇಲೆ ದಾಳಿ ಮಾಡಲು ಧೈರ್ಯ ಮಾಡುವ ಯಾರನ್ನೂ ಬಿಡಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಆಪರೇಷನ್ ಸಿಂದೂರ್ ನೀಡಿದೆ ಎಂದು ಹೇಳಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಜನರಿಗಾಗಿ ನನ್ನ ಹೃದಯ ದುಃಖದಿಂದ ತುಂಬಿದೆ ಎಂದು ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಇಂದು ಮಾತನಾಡುತ್ತಾ ಹೇಳಿದರು.

ಮಹಾದೇವನ ಆಶೀರ್ವಾದ

ನಮ್ಮ ದೇಶದ ಹೆಣ್ಣುಮಕ್ಕಳ ಸಿಂದೂರ ಅಳಿಸಿಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳುವ ನನ್ನ ಭರವಸೆಯನ್ನು ಮಹಾದೇವನ ಆಶೀರ್ವಾದದಿಂದ ಈಡೇರಿಸಲಾಯಿತು. ನಾನು ಕಾರ್ಯಾಚರಣೆಯ ಯಶಸ್ಸನ್ನು ಮಹಾದೇವನ ಪಾದಗಳಿಗೆ ಅರ್ಪಿಸುತ್ತೇನೆ ಎಂದರು.

140 ಕೋಟಿ ದೇಶವಾಸಿಗಳ ಏಕತೆ ಆಪರೇಷನ್ ಸಿಂದೂರದ ಶಕ್ತಿ. ಶಿವ ಎಂದರೆ ಕಲ್ಯಾಣ, ಆದರೆ ಭಯೋತ್ಪಾದನೆ ತನ್ನ ಕೊಳಕು ತಲೆ ಎತ್ತಿದಾಗ, ಮಹಾದೇವ ತನ್ನ 'ರುದ್ರ ರೂಪ'ವನ್ನು ತಾಳುತ್ತಾನೆ. ಆಪರೇಷನ್ ಸಿಂದೂರ್ ಸಮಯದಲ್ಲಿ, ಜಗತ್ತು ಭಾರತದ ಈ ಸ್ವರೂಪವನ್ನು ಕಂಡಿತು ಎಂದು ಹೇಳಿದರು.

ವಿರೋಧ ಪಕ್ಷಗಳನ್ನು ಇದೇ ಸಂದರ್ಭದಲ್ಲಿ ಟೀಕಿಸಿದ ಮೋದಿ, ಆಪರೇಷನ್ ಸಿಂದೂರ್ ಯಶಸ್ಸನ್ನು ದೇಶ ಆಚರಿಸುತ್ತಿರುವಾಗ, ನಮ್ಮ ದೇಶದ ಕೆಲವರೇ ಇದನ್ನು ಟೀಕಿಸುತ್ತಾರೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭಾರತ ಪಾಕಿಸ್ತಾನದೊಳಗಿನ ಭಯೋತ್ಪಾದಕ ಅಡಗುತಾಣಗಳನ್ನು ನಾಶಮಾಡಿದೆ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿರೋಧ ಪಕ್ಷಗಳ ಹೆಸರು ಹೇಳದೆಯೇ ಪ್ರಧಾನಿ ಟೀಕಿಸಿದರು.

ಪ್ರತಿಪಕ್ಷಗಳ ಮೇಲೆ ಮೋದಿ ವಾಗ್ದಾಳಿ

"ಆಪರೇಷನ್ ಸಿಂದೂರ್ ಬಗ್ಗೆ ನಿಮಗೆ ಹೆಮ್ಮೆಯಿಲ್ಲವೇ? ಭಾರತವು (ಪಾಕಿಸ್ತಾನದಲ್ಲಿ) ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ ಎಂದು ನಿಮಗೆ ಹೆಮ್ಮೆಯಿಲ್ಲವೇ" ಎಂದು ಪ್ರಧಾನಿ ಸಭೆಯಲ್ಲಿದ್ದ ಜನರನ್ನು ಕೇಳಿದರು.

ನಮ್ಮ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಭಯೋತ್ಪಾದಕರ ಪ್ರಧಾನ ಕಚೇರಿಗಳನ್ನು ನಿಖರವಾಗಿ ಹೇಗೆ ಹೊಡೆದು ನಾಶಮಾಡಿದವು ಎಂಬುದರ ದೃಶ್ಯಗಳನ್ನು ನೀವೆಲ್ಲರೂ ನೋಡಿರಬೇಕು. ಪಾಕಿಸ್ತಾನದ ಹಲವಾರು ವಾಯುನೆಲೆಗಳು ಇನ್ನೂ ಚೇತರಿಸಿಕೊಂಡಿಲ್ಲ. ಪಾಕಿಸ್ತಾನ ಏಕೆ ದುಃಖಿಸುತ್ತಿದೆ ಎಂದು ನಮಗೆ ದುಃಖ ಅರ್ಥವಾಗುವಂತಹದ್ದಾಗಿದ್ದರೂ, ಆಘಾತಕಾರಿ ಸಂಗತಿಯೆಂದರೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ಸಹ ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಸಶಸ್ತ್ರ ಪಡೆಗಳ ಶೌರ್ಯವನ್ನು ಕಾಂಗ್ರೆಸ್ ಪದೇ ಪದೇ ಅವಮಾನಿಸುತ್ತಿದೆ. ಆಪರೇಷನ್ ಸಿಂದೂರ್ ನ್ನು ತಮಾಷೆ ಎಂದು ಕರೆದಿದೆ ಎಂದು ಪ್ರಧಾನಿ ಆರೋಪಿಸಿದರು. ಸಿಂದೂರ ಎಂದಿಗೂ ತಮಾಷೆಯಾಗಬಹುದೇ, ಅವರು ನಮ್ಮ ಸಹೋದರಿಯರ ಪವಿತ್ರ ಗುರುತು ಮತ್ತು ನಮ್ಮ ಸೈನಿಕರ ಶೌರ್ಯವನ್ನು ಅವಮಾನಿಸಲು ಹೇಗೆ ಧೈರ್ಯ ಮಾಡಿದರು ಎಂದು ಪ್ರಶ್ನಿಸಿದರು.

ಮಿಲಿಟರಿ ದಾಳಿಯ ಸಮಯವನ್ನು ಪ್ರಶ್ನಿಸಿದ್ದಕ್ಕಾಗಿ ಸಮಾಜವಾದಿ ಪಕ್ಷ (ಎಸ್‌ಪಿ) ಮೇಲೂ ಮೋದಿ ವಾಗ್ದಾಳಿ ನಡೆಸಿದರು. ಸಮಾಜವಾದಿ ಪಕ್ಷದ ನಾಯಕರಲ್ಲಿ ಒಬ್ಬರು 'ಪಹಲ್ಗಾಮ್ ದಾಳಿಕೋರರನ್ನು ಈಗ ಏಕೆ ಕೊಲ್ಲಲಾಯಿತು' ಎಂದು ಸಂಸತ್ತಿನಲ್ಲಿ ಕೇಳಿದರು. ನಾನು ಸಮಾಜವಾದಿ ನಾಯಕರಿಗೆ ಕರೆ ಮಾಡಿ ಈಗ ಅಥವಾ ನಂತರ ದಾಳಿ ಮಾಡಬೇಕೇ ಎಂದು ಕೇಳಬೇಕೇ? ನಾವು ಕಾದು ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಹಾಯ ಮಾಡಬೇಕೆ ಎಂದು ಮೋದಿ ಕೇಳಿದರು.

ಉತ್ತರ ಪ್ರದೇಶದಲ್ಲಿ ತಮ್ಮ ಆಳ್ವಿಕೆಯಲ್ಲಿ ಭಯೋತ್ಪಾದಕರಿಗೆ ಕ್ಲೀನ್ ಚಿಟ್ ನೀಡಿದ ಮತ್ತು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಂಡ ಇದೇ ಜನರು. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗುತ್ತಿರುವುದರಿಂದ ಅಂತಹ ಪಕ್ಷಗಳು ಈಗ ತೊಂದರೆಗೊಳಗಾಗಿವೆ ಎಂದು ಹೇಳಿದರು.

ಇದು 'ನಯ ಭಾರತ' (ನವ ಭಾರತ), ಇದು ಶಿವನನ್ನು ಪೂಜಿಸುತ್ತದೆ ಆದರೆ ಅಗತ್ಯವಿದ್ದಾಗ ಕಾಲ ಭೈರವನನ್ನು ತನ್ನ ಶತ್ರುಗಳ ವಿರುದ್ಧ ತಿರುಗಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಆಪರೇಷನ್ ಸಿಂದೂರ್ ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯಗಳನ್ನು ಜಗತ್ತಿಗೆ ಪ್ರದರ್ಶಿಸಿದೆ ಎಂದು ಮೋದಿ ಹೇಳಿದರು. ನಾವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಶಕ್ತಿಯನ್ನು (ಆಪರೇಷನ್ ಸಿಂದೂರ್ ಸಮಯದಲ್ಲಿ) ಸಂಪೂರ್ಣವಾಗಿ ಪ್ರದರ್ಶಿಸಲಾಯಿತು. ನಮ್ಮ ಬ್ರಹ್ಮೋಸ್ ಕ್ಷಿಪಣಿ ಶತ್ರುಗಳಲ್ಲಿ ಭಯವನ್ನು ಹುಟ್ಟುಹಾಕಿತು, ಪಾಕಿಸ್ತಾನದಲ್ಲಿರುವ ಜನರು ಕನಸಿನಲ್ಲಿಯೂ ಸಹ ಶಾಂತಿಯುತವಾಗಿ ನಿದ್ರಿಸಲು ಸಾಧ್ಯವಿಲ್ಲ ಎಂದರು.

ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಭಾರತ ಸೇನೆ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ನಾಶಪಡಿಸಿತು.

ಇಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರು 2,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಅಡಿಪಾಯ ಹಾಕಿದರು, ಜೊತೆಗೆ ದೇಶಾದ್ಯಂತ ಅರ್ಹ ರೈತರಿಗೆ 20,500 ಕೋಟಿ ರೂ. ಮೌಲ್ಯದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20 ನೇ ಕಂತನ್ನು ವಿತರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT