ಬಿಎಲ್ ಒ ಅಧಿಕಾರಿಗಳ ಪರಿಶೀಲನೆ  
ದೇಶ

'ಮೃತ ಮಹಿಳೆ ಜೀವಂತವಿದ್ದಾಳೆ' ಎಂದು ಗೊತ್ತಾದಾಗ!: ಇದು ಆಗಿದ್ದು ಬಿಹಾರದಲ್ಲಿ!

ಮತದಾರರ ಪಟ್ಟಿಯನ್ನು ಅಧಿಕಾರಿ ಪರಿಶೀಲಿಸಿದಾಗ, ಕಂದಾಯ, ಭೂ ಸುಧಾರಣೆ ಮತ್ತು ನೋಂದಣಿ ಇಲಾಖೆಯು ಮರಣ ಪ್ರಮಾಣಪತ್ರವನ್ನು ನೀಡಿದೆ ಎಂದು ಗೊತ್ತಾಯಿತು.

ಪಾಟ್ನಾ: ಸುಮಾರು ಮೂರು ತಿಂಗಳ ಹಿಂದೆ ಮೃತಪಟ್ಟಿರುವುದಾಗಿ ಘೋಷಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ, ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬೂತ್ ಮಟ್ಟದ ಅಧಿಕಾರಿಗಳು (BLO's) ಮನೆ ಮನೆಗೆ ತೆರಳಿ ನಡೆಸಿದ ಅಭಿಯಾನದ ಫಲವಾಗಿ ಇದು ಬೆಳಕಿಗೆ ಬಂದಿದೆ.

ಕಳೆದ ತಿಂಗಳು ಮತದಾರರ ಪಟ್ಟಿ ಪರಿಶೀಲನೆಗಾಗಿ ಬಿಹಾರದ ಗ್ರಾಮೀಣ ಪಾಟ್ನಾದ ಧನರುವಾ ನಿವಾಸಿ ಶಿವರಂಜನ್ ಕುಮಾರ್ ಅವರ ಮನೆಗೆ ಬಿಎಲ್‌ಒ ಅಧಿಕಾರಿ ಭೇಟಿ ನೀಡಿದಾಗ ನಿಶಾ ಕುಮಾರಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ ಈಗಾಗಲೇ ನಿಶಾ ಕುಮಾರಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದರಿಂದ ಬಿಎಲ್‌ಒ ದಿಗ್ಭ್ರಮೆಗೊಂಡರು. ಮೇ 5 ರಂದು ರಾಜ್ಯ ಸರ್ಕಾರದಿಂದ ಮರಣ ಪ್ರಮಾಣಪತ್ರ ನೀಡಲಾಗಿತ್ತು.

ಮತದಾರರ ಪಟ್ಟಿಯನ್ನು ಅಧಿಕಾರಿ ಪರಿಶೀಲಿಸಿದಾಗ, ಕಂದಾಯ, ಭೂ ಸುಧಾರಣೆ ಮತ್ತು ನೋಂದಣಿ ಇಲಾಖೆಯು ಮರಣ ಪ್ರಮಾಣಪತ್ರವನ್ನು ನೀಡಿದೆ ಎಂದು ಗೊತ್ತಾಯಿತು. ನಿಶಾ ಅವರ ಮರಣ ಪ್ರಮಾಣಪತ್ರವನ್ನು ಮಾಹಿತಿ ಹಕ್ಕು ಕಾಯ್ದೆಯ ಕೌಂಟರ್ ಮೂಲಕ ಪಡೆಯಲಾಯಿತು. ಬಿಎಲ್‌ಒ ನಿಶಾ ಅವರ ವಿವರಗಳನ್ನು ಸಂಗ್ರಹಿಸಿ ಅವರಿಗೆ ಎಣಿಕೆ ಫಾರ್ಮ್ ನ್ನು ಅಧಿಕಾರಿ ನೀಡಿದರು.

ಆದರೆ ನಿಶಾ ಅವರ ಚಿಂತೆಗಳು ಅಲ್ಲಿಗೆ ಮುಗಿಯಲಿಲ್ಲ. ತಮ್ಮ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಹೆಸರನ್ನು ಹುಡುಕುತ್ತಾ ಧನುರುವಾದಲ್ಲಿ ಆರ್‌ಟಿಐ ಮೂಲಕ ಅರ್ಜಿಯನ್ನು ಸಲ್ಲಿಸಿದರು. ಅದು ಅವರ ಪತಿ ಶಿವರಂಜನ್ ಎಂದು ತಿಳಿದು ಆಘಾತಕ್ಕೊಳಗಾದರು.

ನಂತರ ನಿಶಾ ಬಿಡಿಒ ಸೀಮಾ ಕುಮಾರಿ ಅವರಿಗೆ ದೂರು ನೀಡಿ, ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಪಂಚಾಯತ್ ಕಾರ್ಯದರ್ಶಿ, ಮುಖಿಯಾ ಮತ್ತು ಅಂಗನವಾಡಿ ಸೇವಿಕಾ ವಿರುದ್ಧ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಬಿಡಿಒ ಹೇಳಿದರು.

ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಅಂಗನವಾಡಿ ಸೇವಿಕಾ ಸದಸ್ಯರು, ಸಂಬಂಧಪಟ್ಟ ಪಂಚಾಯತ್ ಕಾರ್ಯದರ್ಶಿ ಮತ್ತು ಮುಖಿಯಾ ಅವರು ಕಳುಹಿಸಿದ್ದಾರೆ. ಅವರ ಸಹಿ ಮತ್ತು ಅಧಿಕೃತ ಮುದ್ರೆ ಇಲ್ಲದೆ ಅರ್ಜಿಯನ್ನು ಸಲ್ಲಿಸಲು ಹೇಗೆ ಸಾಧ್ಯ ಎಂದು ಬ್ಲಾಕ್ ಕಚೇರಿಯಲ್ಲಿ ನಿಯೋಜಿಸಲಾದ ಸಿಬ್ಬಂದಿಯೊಬ್ಬರು ಕೇಳುತ್ತಾರೆ.

ಶಿವರಂಜನ್ ದಂಪತಿ ದೀರ್ಘಕಾಲದಿಂದ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ಮರಣದ ನಂತರ ಕುಟುಂಬ ಪಿಂಚಣಿಯ ಪ್ರಯೋಜನಗಳನ್ನು ಪತ್ನಿಗೆ ನೀಡಲು ಬಯಸದ ಕಾರಣ ತಮ್ಮ ಪತ್ನಿಯನ್ನು ಸತ್ತಿದ್ದಾರೆಂದು ಘೋಷಿಸಿದರು ಎಂದು ಕುಟುಂಬ ಮೂಲಗಳು ಹೇಳುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆದರಿಕೆ ನಡುವೆ 'ಆರ್ ಎಸ್ ಎಸ್' ಕುರಿತು ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ! ಇದರಲ್ಲಿ ಏನಿದೆ?

ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ: Donald Trump

ಮುಂದಿನ 7 ದಿನ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಡಿಸಿಎಂ ಆಗುತ್ತೀರೋ, ಜೈಲಿಗೆ ಹೋಗುತ್ತೀರೋ ಎಂದು ಬಿಜೆಪಿಯಿಂದ ಆಫರ್ ಬಂದಿತ್ತು, ಪಕ್ಷನಿಷ್ಠೆಗೆ ಜೈಲುವಾಸ ಆಯ್ಕೆ ಮಾಡಿಕೊಂಡೆ: ರಹಸ್ಯ ಬಿಚ್ಚಿಟ್ಟ ಡಿಕೆಶಿ

ನಾವು ಹಿಂದುಳಿದ ಜಾತಿಗೆ ಸೇರಿಲ್ಲ: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಾರಾಯಣಮೂರ್ತಿ- ಸುಧಾಮೂರ್ತಿ ನಿರಾಕರಣೆ!

SCROLL FOR NEXT