ಮನೋಜ್ ಜಾರಂಗೆ 
ದೇಶ

ಮರಾಠ ಮೀಸಲಾತಿ: ಆಗಸ್ಟ್ 29 ರಂದು ಮುಂಬೈನಲ್ಲಿ ಮತ್ತೆ ಜಾರಂಗೆ ಪ್ರತಿಭಟನೆ

ಆಗಸ್ಟ್ 27 ರಂದು ಜಲ್ನಾ ಜಿಲ್ಲೆಯ ತಮ್ಮ ಅಂತರವಾಲಿ ಸಾರತಿ ಗ್ರಾಮದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಮುಂಬೈಗೆ ಹೊರಡುವುದಾಗಿ ತಿಳಿಸಿದ್ದಾರೆ.

ಜಲ್ನಾ: ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಅವರು ಆಗಸ್ಟ್ 29 ರಂದು ಮುಂಬೈನಲ್ಲಿ ಹೊಸದಾಗಿ ಪ್ರತಿಭಟನೆ ಆರಂಭಿಸುವುದಾಗಿ ಗುರುವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, ಮರಾಠಾ ಸಮುದಾಯದ ಇತರ ಸದಸ್ಯರೊಂದಿಗೆ ಆಗಸ್ಟ್ 27 ರಂದು ಜಲ್ನಾ ಜಿಲ್ಲೆಯ ತಮ್ಮ ಅಂತರವಾಲಿ ಸಾರತಿ ಗ್ರಾಮದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಮುಂಬೈಗೆ ಹೊರಡುವುದಾಗಿ ತಿಳಿಸಿದ್ದಾರೆ.

ಎಲ್ಲಾ ಮರಾಠರನ್ನು(ಕುಂಬಿಸ್) ಇತರ ಹಿಂದುಳಿದ ವರ್ಗಗಳ ಕೋಟಾದಡಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ ಅವರು ಅನೇಕ ಬಾರಿ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದಾರೆ.

"ನಾವು ಆಗಸ್ಟ್ 27 ರಂದು ಬೆಳಗ್ಗೆ 10 ಗಂಟೆಗೆ ಅಂತರವಾಲಿ ಸಾರ್ತಿಯಿಂದ ಮುಂಬೈಗೆ ಹೊರಡುತ್ತೇವೆ. ಪುಣೆ ಜಿಲ್ಲೆಯ ಜುನ್ನಾರ್ ಪ್ರದೇಶದ ಶಿವನೇರಿ ಕೋಟೆಯ ಬಳಿ ನಾವು ಉಳಿದುಕೊಳ್ಳುತ್ತೇವೆ. ಅಂತರವಾಲಿಯಿಂದ ಶೇವ್‌ಗಾಂವ್, ಅಹಲ್ಯಾನಗರ ಮತ್ತು ಅಲೆಫಾಟಾ ಮೂಲಕ ಶಿವನೇರಿಗೆ ಹೋಗುತ್ತೇವೆ ಮತ್ತು ಮಳೆಗಾಲದ ಕಾರಣ ಮಲ್ಶೇಜ್ ಘಾಟ್ ಮೂಲಕ ಹೋಗುವುದಿಲ್ಲ" ಎಂದು ಜಾರಂಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT