ಮೊಹಮ್ಮದ್ ಶಮಿ ಮತ್ತು ಅವರ ಪತ್ನಿ ಹಸೀನ್ ಜಹಾನ್ 
ದೇಶ

'ಪ್ರೇಯಸಿಗಾಗಿ ಲಕ್ಷಾಂತರ ರೂ ಖರ್ಚು, ಮಗಳ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ': ಮೊಹಮ್ಮದ್ ಶಮಿ ವಿರುದ್ಧ ಮಾಜಿ ಪತ್ನಿ ವಾಗ್ದಾಳಿ

ಹಸಿನ್ ಮತ್ತು ಶಮಿ 2014 ರಲ್ಲಿ ವಿವಾಹವಾದರು ಮತ್ತು 2015 ರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತು. ಆದಾಗ್ಯೂ, ಈ ಜೋಡಿ 2018 ರಲ್ಲಿ ಬೇರ್ಪಟ್ಟರು.

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಯಿಂದ ವಿಚ್ಛೇದನ ಪಡೆದಿರುವ ಹಸಿನ್ ಜಹಾನ್, ಮಾಜಿ ಪತಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಶಮಿ ತಮ್ಮ ಮಗಳ ಶಿಕ್ಷಣವನ್ನು ನೋಡಿಕೊಳ್ಳುತ್ತಿಲ್ಲ. ಶಮಿ ತನ್ನ ಪ್ರೇಯಸಿಯ ಮಕ್ಕಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

'ನನ್ನ ಮಗಳು ಒಳ್ಳೆಯ ಶಾಲೆಯಲ್ಲಿ ಪ್ರವೇಶ ಪಡೆಯಬೇಕೆಂದು ಶತ್ರುಗಳು ಬಯಸಿರಲಿಲ್ಲ. ಆದರೆ, ಅಲ್ಲಾಹನು ಅವರ ಯೋಜನೆಗಳನ್ನು ವಿಫಲಗೊಳಿಸಿದನು ಮತ್ತು ಅವಳು ತುಂಬಾ ಒಳ್ಳೆಯ ಅಂತರರಾಷ್ಟ್ರೀಯ ಶಾಲೆಗೆ ಪ್ರವೇಶ ಪಡೆದಳು. ನನ್ನ ಮಗಳ ತಂದೆ, ಕೋಟ್ಯಾಧಿಪತಿಯಾಗಿದ್ದರೂ, ಅನೈತಿಕ ಸಂಬಂಧದಿಂದಾಗಿ ಆಕೆಯ ಜೀವನದ ಜೊತೆ ಆಟವಾಡುತ್ತಿದ್ದಾರೆ. ತನ್ನ ಪ್ರೇಯಸಿಯ ಮಕ್ಕಳಿಗೆ ದೊಡ್ಡ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಕೆಲವು ಪ್ರೇಯಸಿಯರಿಗೆ ವಿಮಾನಗಳಲ್ಲಿ ಬಿಸಿನೆಸ್ ಕ್ಲಾಸ್‌ಗಾಗಿ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಆದರೆ, ತನ್ನ ಸ್ವಂತ ಮಗಳ ಶಿಕ್ಷಣಕ್ಕೆ ತನ್ನ ಬಳಿ ಹಣವಿಲ್ಲ ಎಂದು ಹೇಳಿಕೊಳ್ಳುತ್ತಾರೆ' ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಹಸಿನ್ ಮತ್ತು ಶಮಿ 2014 ರಲ್ಲಿ ವಿವಾಹವಾದರು ಮತ್ತು 2015 ರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತು. ಆದಾಗ್ಯೂ, ಈ ಜೋಡಿ 2018 ರಲ್ಲಿ ಬೇರ್ಪಟ್ಟರು. ಅಂದಿನಿಂದ, ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ದೂರುತ್ತಲೇ ಇದ್ದಾರೆ.

ಈ ಆರೋಪಗಳ ನಡುವೆಯೇ, ಶಮಿ ಅವರ ಮಗಳು ಇತ್ತೀಚೆಗೆ ಜುಲೈ 17 ರಂದು ತನ್ನ 10ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

'ಡಾರ್ಲಿಂಗ್, ಮಗಳೇ, ನಾವು ಎಚ್ಚರವಾಗಿರುವುದು, ಮಾತನಾಡುವುದು, ನಗುವುದು ಮತ್ತು ನಿರ್ದಿಷ್ಟವಾಗಿ ನಿನ್ನ ನೃತ್ಯವನ್ನು ನೋಡುತ್ತಾ ಕಳೆದ ಎಲ್ಲ ರಾತ್ರಿಗಳು ನನಗೆ ಇನ್ನೂ ನೆನಪಿದೆ. ನೀನು ಇಷ್ಟು ವೇಗವಾಗಿ ಬೆಳೆಯುತ್ತಿದ್ದೀಯಾ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ನಿನಗೆ ಜೀವನದಲ್ಲಿ ಒಳ್ಳೆಯದನ್ನು ಮಾತ್ರ ಬಯಸುತ್ತೇನೆ. ದೇವರು ಇಂದು ಮತ್ತು ಯಾವಾಗಲೂ ಪ್ರೀತಿ, ಶಾಂತಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಹೇರಳವಾಗಿ ಆಶೀರ್ವದಿಸಲಿ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಶಮಿ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದಿದ್ದಾರೆ.

ಸದ್ಯ ಬಲಗೈ ಸೀಮರ್ 2025ರ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ. ಭಾರತ ತಂಡಕ್ಕೆ ಮರಳಲು ಅವರ ಪರೀಕ್ಷಾರ್ಥವಾಗಿಯೂ ಕಾರ್ಯನಿರ್ವಹಿಸಲಿದೆ. ಗಮನಾರ್ಹವಾಗಿ, ಶಮಿ ಅವರ ಕೊನೆಯ ಟೆಸ್ಟ್ ಪಂದ್ಯ 2023ರ ಜೂನ್‌ನಲ್ಲಿ ನಡದಿತ್ತು. ಐಪಿಎಲ್ 2025ನೇ ಆವೃತ್ತಿಯಲ್ಲಿ ಶಮಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT