ಅಂಬಿಕಾ ಶುಕ್ಲಾ (ಸಂಗ್ರಹ ಚಿತ್ರ) 
ದೇಶ

'Rabies Virus ತುಂಬಾ ಸೂಕ್ಷ್ಮ.. ಸೋಪಿನಿಂದ ತೊಳೆದ್ರೆನೇ ಸಾಯುತ್ತೆ': ಮನೇಕಾ ಗಾಂಧಿ ಸಹೋದರಿ Ambika Shukla ಹೇಳಿಕೆ!

ಮೊದಲನೆಯದಾಗಿ, ರೇಬೀಸ್ ಬಹಳ ಅಪರೂಪದ ಕಾಯಿಲೆ. ಎರಡನೆಯದಾಗಿ, ಅದು ಸುಲಭವಾಗಿ ಹರಡುವುದಿಲ್ಲ.

ನವದೆಹಲಿ: ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ನಾಯಿ ಕಡಿತ ಮತ್ತು ರೇಬಿಸ್ ವೈರಸ್ ಕುರಿತು ಮನೇಕಾ ಗಾಂಧಿ ಸಹೋದರಿ ಮತ್ತು ಅನಿಮಲ್ ವೆಲ್ಫೇರ್ ಆ್ಯಕ್ಚಿವಿಸ್ಟ್ ಅಂಬಿಕಾ ಶುಕ್ಲಾ (Ambika Shukla) ನೀಡಿರುವ ಹೇಳಿಕೆ ವೈರಲ್ ಆಗಿದೆ.

ಹೌದು.. ಅಂಬಿಕಾ ಶುಕ್ಲಾ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು ಕುರಿತು ಮಾಧ್ಯಮಗಳ ಜೊತೆ ಮಾತನಾಡುತ್ತಾ, ರೇಬೀಸ್ ಒಂದು ಸೂಕ್ಷ್ಮ ವೈರಸ್ ಆಗಿದ್ದು, ಅದನ್ನು ಸೋಪಿನಿಂದ ತೊಳೆದು ಹೋಗಲಾಡಿಸಬಹುದು ಎಂದು ಹೇಳಿದ್ದಾರೆ.

ಬೀದಿಗಳಲ್ಲಿ ಅಲೆದಾಡುವ ಪ್ರಾಣಿಗಳನ್ನು ಆದಷ್ಟು ಬೇಗ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪ್ರಾಣಿ ಪ್ರಿಯರು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಂಬಿಕಾ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ.

"ಶತಕೋಟಿ ಜನರಿರುವ ನಮ್ಮ ದೇಶದಲ್ಲಿ, ಪ್ರಕರಣಗಳ ಸಂಖ್ಯೆ ಎಷ್ಟು? ಕೇವಲ 54. ಹಾಗಾದರೆ ಏಕೆ ಕಡಿಮೆ? ಏಕೆಂದರೆ ಮೊದಲನೆಯದಾಗಿ, ರೇಬೀಸ್ ಬಹಳ ಅಪರೂಪದ ಕಾಯಿಲೆ. ಎರಡನೆಯದಾಗಿ, ಅದು ಸುಲಭವಾಗಿ ಹರಡುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾಯಿಗಳು ತಮಗೆ ಅಪಾಯವಾಗುತ್ತಿದೆ ಎಂದು ಭಾವಿಸದ ಹೊರತು ಅವು ಕಚ್ಚುವುದಿಲ್ಲ" ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಸಹೋದರಿಯೂ ಆಗಿರುವ ಅಂಬಿಕಾ ಶುಕ್ಲಾ ಹೇಳಿದ್ದಾರೆ.

'ಸೋಂಕು ಲಾಲಾರಸ ಅಥವಾ ರಕ್ತದ ಮೂಲಕ ರಕ್ತವನ್ನು ತಲುಪಿದಾಗ ಮಾತ್ರ ರೇಬೀಸ್ ವೈರಸ್ ಹರಡುತ್ತದೆ... ಇದು ಪ್ರಸರಣ ಮಾಧ್ಯಮ. ಆದರೆ ವೈರಸ್ ತುಂಬಾ ಸೂಕ್ಷ್ಮವಾಗಿದ್ದು, ನೀವು ಗಾಯವನ್ನು ಸೋಪಿನಿಂದ ತೊಳೆದರೂ ರೇಬೀಸ್ ವೈರಸ್ ಸಾಯುತ್ತದೆ" ಎಂದು ಅಂಬಿಕಾ ಶುಕ್ಲಾ ಹೇಳಿದ್ದು, ಈ ವಿಡಿಯೋವನ್ನು ‘ದಿ ರೆಡ್ ಮೈಕ್’ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ವ್ಯಾಪಕ ವಿರೋಧ

ಇನ್ನು ಅಂಬಿಕಾ ಶುಕ್ಲಾ ಅವರ ಹೇಳಿಕೆ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಲವಾರು ಬಳಕೆದಾರರು, ಅವರು ಹೇಳಿಕೆಯನ್ನು ಅಜ್ಞಾನಿ ಹೇಳಿಕೆ ಎಂದು ಟೀಕಿಸಿದ್ದಾರೆ. ಅಂತೆಯೇ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಯಾವಾಗಲೂ ಮಾರಕವಾಗುವ ರೇಬೀಸ್ ಬಗ್ಗೆ ಇನ್ನಷ್ಟು ಓದಿ ತಿಳಿದುಕೊಳ್ಳಿ ಎಂದು ವ್ಯಂಗ್ಯ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT