ಶಿವ ಪ್ರತಾಪ್ ಶುಕ್ಲಾ-ಸುಖವಿಂದರ್ ಸಿಂಗ್ ಸುಖು 
ದೇಶ

ಕುಲಪತಿ ನೇಮಕಾತಿ ವಿಚಾರ: ಹಿಮಾಚಲ ರಾಜ್ಯಪಾಲ ಶುಕ್ಲಾ ಮತ್ತು ಕಾಂಗ್ರೆಸ್ ಸಿಎಂ ನಡುವೆ ಭಿನ್ನಾಭಿಪ್ರಾಯ ಉಲ್ಬಣ!

ರಾಜ್ಯದ ಎರಡು ಪ್ರಮುಖ ಕೃಷಿ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಾತಿ ವಿಚಾರದಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಮತ್ತು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯ ಉಲ್ಬಣಗೊಂಡಿದೆ.

ಚಂಡೀಗಢ: ರಾಜ್ಯದ ಎರಡು ಪ್ರಮುಖ ಕೃಷಿ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಾತಿ ವಿಚಾರದಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಮತ್ತು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯ ಉಲ್ಬಣಗೊಂಡಿದೆ. ರಾಜ್ಯಪಾಲರು ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕು ಏಕೆಂದರೆ ಅವರು ಕುಲಪತಿಯಾಗಿ ಅಧಿಕಾರವನ್ನು ಹೊಂದಿರುತ್ತಾರೆ. ಆದರೆ ಅವರಿಗೆ ಹೆಚ್ಚಿನ ಅಧಿಕಾರ ಸಾಂವಿಧಾನಿಕವಾಗಿ ಬಂದಿರುವುದಿಲ್ಲ ಬದಲಾಗಿ ಶಾಸಕಾಂಗ ಕಾನೂನುಗಳಿಂದ ಬಂದಿರುತ್ತದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಪ್ರತಿಪಾದಿಸಿದ್ದಾರೆ.

ಆಗಸ್ಟ್ 11ರಂದು ಡಾ.ವೈ.ಎಸ್. ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ (ಸೋಲನ್) ಮತ್ತು ಸಿಎಸ್‌ಕೆ ಹಿಮಾಚಲ ಪ್ರದೇಶ ಕೃಷಿ ವಿಶ್ವವಿದ್ಯಾಲಯ (ಪಾಲಂಪುರ) ದಲ್ಲಿ ಕುಲಪತಿ ನೇಮಕಾತಿಗಾಗಿ ರಾಜ್ಯ ಸರ್ಕಾರವು ನೀಡಿದ್ದ ಜಾಹೀರಾತನ್ನು ಹಿಂತೆಗೆದುಕೊಂಡಿತ್ತು. ಅಲ್ಲದೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮತ್ತೆ ಪರಿಚಯಿಸುವುದಾಗಿ ತಿಳಿಸಿದ ಬೆನ್ನಲ್ಲೇ ವಿವಾದ ಉಲ್ಬಣಗೊಂಡಿತು. ಆದಾಗ್ಯೂ, ಅರ್ಜಿ ಸಲ್ಲಿಸಲು ಗಡುವನ್ನು ಆಗಸ್ಟ್ 13ರವರೆಗೆ ವಿಸ್ತರಿಸಿದ್ದಕ್ಕೆ ರಾಜಭವನವು ಪ್ರತಿಭಟಿಸಿತು. ಅಸ್ತಿತ್ವದಲ್ಲಿರುವ ಕಾಯಿದೆಯಡಿಯಲ್ಲಿ ಕುಲಪತಿಯ ಅಧಿಕಾರವು ಸಚಿವ ಸಂಪುಟ ಸಲಹೆಯಿಂದ ಸ್ವತಂತ್ರವಾಗಿ ಮುಂದುವರಿಯಲು ಅವರಿಗೆ ಅಧಿಕಾರ ನೀಡುತ್ತದೆ ಎಂದು ಒತ್ತಾಯಿಸಿತು.

ವಿಶ್ವವಿದ್ಯಾನಿಲಯದ ಕುಲಪತಿಯಾಗಿ ರಾಜ್ಯಪಾಲರು ಚಲಾಯಿಸುವ ಅಧಿಕಾರಗಳು ಸಾಂವಿಧಾನಿಕವಲ್ಲ, ಅದು ವಿಧಾನಸಭಾ ಕಾಯ್ದೆಯಿಂದ ನೀಡಲ್ಪಟ್ಟಿವೆ. ಆದ್ದರಿಂದ ಅವರು ಶಾಸಕಾಂಗ ಮತ್ತು ಸರ್ಕಾರದ ನಿರ್ದೇಶನಗಳ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ಸುಖು ಹೇಳಿದರು. ಜುಲೈ 27ರಂದು ಸಂಪುಟವು ಈಗಾಗಲೇ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದರು. ಕೃಷಿ ಕಾರ್ಯದರ್ಶಿ ತರುವಾಯ ರಾಜ್ಯಪಾಲರ ಕಚೇರಿಯಿಂದ ಯಾವುದೇ ನೇಮಕಾತಿ ಕ್ರಮಗಳನ್ನು "ಶೂನ್ಯ ಮತ್ತು ಅನೂರ್ಜಿತ" ಎಂದು ಘೋಷಿಸಿದರು. ಆದರೆ ರಾಜಭವನವು ತನ್ನ ನಿಲುವನ್ನು ಉಳಿಸಿಕೊಂಡಿತು. ಕುಲಪತಿಯ ಶಾಸನಬದ್ಧ ಪಾತ್ರವು ಅವರನ್ನು ವಿಸಿ ನೇಮಕಾತಿಗಳನ್ನು ಪ್ರಾರಂಭಿಸುವ ಏಕೈಕ ಅಧಿಕಾರವನ್ನಾಗಿ ಮಾಡುತ್ತದೆ ಎಂದು ಹೇಳಿದೆ.

ಕೃಷಿ ಸಚಿವ ಚಂದರ್ ಕುಮಾರ್ ಅವರು ಆಗಸ್ಟ್ 18ರಿಂದ ಪ್ರಾರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ವಿಧಾನಸಭೆ ತಿದ್ದುಪಡಿ ಮಸೂದೆಯನ್ನು ಮರುಪರಿಶೀಲಿಸುವವರೆಗೆ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದರು. ಆದಾಗ್ಯೂ, ರಾಜಭವನವು ನೇಮಕಾತಿ ಅಭಿಯಾನವನ್ನು ಮುಂದುವರಿಸುತ್ತಿರುವುದರಿಂದ, ಈ ಬಿಕ್ಕಟ್ಟು ರಾಜ್ಯದಲ್ಲಿ ರಾಜ್ಯಪಾಲರ ಅಧಿಕಾರಗಳು ಮತ್ತು ಶಾಸಕಾಂಗ ಮೇಲ್ವಿಚಾರಣೆಯ ಮೇಲಿನ ವ್ಯಾಪಕ ಉದ್ವಿಗ್ನತೆಯನ್ನು ಎತ್ತಿ ತೋರಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

'ಜನ ಸಾಮಾನ್ಯರಿಗಾಗಿ ಸುಪ್ರೀಂಕೋರ್ಟ್' : ಬಲವಾದ ಸಂದೇಶ ರವಾನಿಸಿದ CJI ಸೂರ್ಯಕಾಂತ್!

ಬೆಂಗಳೂರಿನಲ್ಲಿ 2,215 ಕೋಟಿ ರೂ. ಮೊತ್ತದ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಪುಟ ಅನುಮೋದನೆ!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

ಇಂಡಿಗೋ ವಿಮಾನಗಳಲ್ಲಿ ವ್ಯತ್ಯಯ: ಇತರೆ ಏರ್‌ಲೈನ್‌ಗಳಿಂದ ಟಿಕೆಟ್ ದರ ಏರಿಕೆಗೆ ಸರ್ಕಾರ ಬ್ರೇಕ್

SCROLL FOR NEXT