ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಫೋಟೋ 
ದೇಶ

ಕೋರ್ಟ್ ನಲ್ಲಿ ಅಳಲು ಪ್ರಾರಂಭಿಸಿದ್ದೆ: ಯುಜ್ವೇಂದ್ರ ಚಾಹಲ್ ಜೊತೆಗಿನ ವಿಚ್ಛೇದನದ ಬಗ್ಗೆ ಧನಶ್ರೀ ವರ್ಮಾ ಮನದ ಮಾತು!

ಮಂಗಳವಾರ ಹ್ಯೂಮನ್ ಆಫ್ ಬಾಂಬೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ವರ್ಮಾ, ವಿಚ್ಚೇದನ ಪಡೆದ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.

ನವದೆಹಲಿ: ಯುಜುವೇಂದ್ರ ಚಹಲ್ ಅವರಿಂದ ವಿಚ್ಛೇದನ ಪಡೆದಿರುವ ಅವರ ಮಾಜಿ ಪತ್ನಿ ಇದೀಗ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಆ ಕ್ಷಣ ನಾನು ಮಾನಸಿಕವಾಗಿ ಸಂಪೂರ್ಣವಾಗಿ ಕುಸಿದು ಹೋಗಿದ್ದೆ. ವಿಚ್ಚೇದನದ ತೀರ್ಪು ನೀಡುವಾಗ ಕೋರ್ಟ್ ನಲ್ಲಿ ಎಲ್ಲರೆದುರು ಜೋರಾಗಿ ಅಳಲು ಪ್ರಾರಂಭಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ಮಂಗಳವಾರ ಹ್ಯೂಮನ್ ಆಫ್ ಬಾಂಬೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ವರ್ಮಾ, ವಿಚ್ಚೇದನ ಪಡೆದ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.

ಮಾನಸಿಕವಾಗಿ ಸಿದ್ಧವಾಗಿದ್ದರೂ ಕೋರ್ಟ್ ನಲ್ಲಿ ಎಲ್ಲರೆದುರು ಜೋರಾಗಿ ಅಳಲು ಪ್ರಾರಂಭಿಸಿದ್ದೆ. "ಆ ಸಮಯದಲ್ಲಿ ನನ್ನ ಭಾವನೆಯನ್ನು ವ್ಯಕ್ತಪಡಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಅಳುತ್ತಲೇ ಇದ್ದೆ. ಚಹಾಲ್ ಮೊದಲು ಹೊರ ನಡೆದರು ಎಂದು ತಿಳಿಸಿದ್ದಾರೆ.

ಟೀಶರ್ಟ್ ವಿವಾದ: ನ್ಯಾಯಾಲಯದ ಕಲಾಪ ನಡೆಯುವಾಗ ಚಹಾಲ್ ಧರಿಸಿದ್ದ ‘ಬಿ ಯುವರ್ ಓನ್ ಶುಗರ್ ಡ್ಯಾಡಿ’ ಎಂಬ ಬರಹವಿರುವ ಟೀ ಶರ್ಟ್ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆ ಕುರಿತು ಮಾತನಾಡಿದ ವರ್ಮಾ, "ಜನರು ನಿಮ್ಮನ್ನು ದೂಷಿಸುತ್ತಾರೆ ಎಂದು ನಿಮಗೆ ತಿಳಿದಿದೆ, ಈ ಟೀ-ಶರ್ಟ್ ಸ್ಟಂಟ್ ನಡೆದಿದೆ ಎಂದು ನಾನು ತಿಳಿಯುವ ಮೊದಲು, ಜನರು ಇದಕ್ಕೆ ನನ್ನನ್ನು ದೂರುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿತ್ತು ಎಂದು ಹೇಳಿದ್ದಾರೆ.

ಬಹಳ ಪ್ರಬುದ್ಧತೆಯಿಂದ ವಿಚ್ಚೇದನ ಪಡೆಯುವ ದಾರಿ ಆಯ್ಕೆ ಮಾಡಿಕೊಂಡೆ. ನನ್ನ ಕುಟುಂಬ ಹಾಗೂ ಚಹಾಲ್ ಕುಟುಂಬದ ಮೌಲ್ಯಗಳಿಗೆ ಪರಸ್ಪರ ಗೌರವ ನೀಡಬೇಕಾಗಿತ್ತು. ಹಾಗಾಗೀ ವಿಚ್ಚೇದನ ನಿರ್ಧಾರವನ್ನು ತೆಗೆದುಕೊಂಡೆ ಎಂದು ತಿಳಿಸಿದರು.

ಮಹಿಳೆಯಾಗಿ, ಎಲ್ಲವನ್ನೂ ಇತ್ಯರ್ಥಗೊಳಿಸಲು ಮತ್ತು ನಿರ್ವಹಿಸಲು ನಮಗೆ ಕಲಿಸಲಾಗುತ್ತದೆ. ನಮ್ಮ ಸಮಾಜಗಳನ್ನು ನಾವು ಚೆನ್ನಾಗಿ ತಿಳಿದಿರುವ ಕಾರಣ ನಮ್ಮ ತಾಯಂದಿರಿಗೆ ನಮ್ಮ ಸಮಾಜ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.

ವರ್ಮಾ ಮತ್ತು ಚಾಹಲ್ ಇಬ್ಬರೂ 2020 ರಲ್ಲಿ ವಿವಾಹವಾಗಿದ್ದರು. 2025 ರಲ್ಲಿ ವಿಚ್ಚೇದನ ಪಡೆದರು. ಈ ಹಿಂದೆ ವಿಚ್ಚೇದನದಿಂದ ಎದುರಿಸಿದ ಮಾನಸಿಕ ಹೋರಾಟದ ಬಗ್ಗೆ ಚಹಾಲ್ ಕೂಡಾ ಮಾತನಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT