ಸಾಂದರ್ಭಿಕ ಚಿತ್ರ  
ದೇಶ

ವಾಯು ಮಾಲಿನ್ಯದಿಂದ ಸರಾಸರಿ ಜೀವಿತಾವಧಿ 3.5 ವರ್ಷ ಇಳಿಕೆ: ಅಧ್ಯಯನ ಬಹಿರಂಗ

ಮಕ್ಕಳು ಮತ್ತು ತಾಯಿಯ ಅಪೌಷ್ಟಿಕತೆಯಿಂದ ಮನುಷ್ಯ ಜೀವನದ ಸರಾಸರಿ ಜೀವಿತಾವಧಿಯಲ್ಲಿ 1.6 ವರ್ಷಗಳ ನಷ್ಟಕ್ಕೆ ಕಾರಣವಾಗುತ್ತದೆ.

ನವದೆಹಲಿ: ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಬಹುದೊಡ್ಡ ಸಮಸ್ಯೆ. ವಾಯು ಮಾಲಿನ್ಯವು ಭಾರತದಲ್ಲಿ ಮನುಷ್ಯರ ಸರಾಸರಿ ಜೀವಿತಾವಧಿಯನ್ನು ಮೂರೂವರೆ ವರ್ಷಗಳಷ್ಟು ಕಡಿಮೆ ಮಾಡುತ್ತಿದೆ, ವಾಯುಮಾಲಿನ್ಯದಿಂದ ಉಂಟಾಗುವ ತೊಂದರೆ ಮಕ್ಕಳು ಮತ್ತು ತಾಯಿಯ ಅಪೌಷ್ಟಿಕತೆಯ ಪರಿಣಾಮಕ್ಕಿಂತ ಸುಮಾರು ಎರಡು ಪಟ್ಟು ಮತ್ತು ಅಸುರಕ್ಷಿತ ನೀರು, ನೈರ್ಮಲ್ಯ ಸಮಸ್ಯೆಯಿಂದ ಐದು ಪಟ್ಟು ಹೆಚ್ಚು ಎಂದು ಚಿಕಾಗೋ ವಿಶ್ವವಿದ್ಯಾಲಯದ (EPIC) ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಮಕ್ಕಳು ಮತ್ತು ತಾಯಿಯ ಅಪೌಷ್ಟಿಕತೆಯಿಂದ ಮನುಷ್ಯ ಜೀವನದ ಸರಾಸರಿ ಜೀವಿತಾವಧಿಯಲ್ಲಿ 1.6 ವರ್ಷಗಳ ನಷ್ಟಕ್ಕೆ ಕಾರಣವಾಗುತ್ತದೆ, ತಂಬಾಕು ಬಳಕೆ 1.5 ವರ್ಷಗಳು ಮತ್ತು ಅಸುರಕ್ಷಿತ ನೀರು, ನೈರ್ಮಲ್ಯ ಸಮಸ್ಯೆಯಿಂದ ಸುಮಾರು 8.4 ತಿಂಗಳುಗಳು ಮನುಷ್ಯ ಜೀವಿತಾವಧಿ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನವು ಹೇಳಿದೆ.

ವಾಯು ಗುಣಮಟ್ಟ ಜೀವನ ಸೂಚ್ಯಂಕದ (AQLI) ದತ್ತಾಂಶವು ಉತ್ತರ ಭಾರತವು ವಿಶ್ವದ ಅತ್ಯಂತ ಕಲುಷಿತ ಪ್ರದೇಶವಾಗಿ ಉಳಿದಿದೆ ಎಂದು ತೋರಿಸುತ್ತದೆ, 544.4 ಮಿಲಿಯನ್ ಜನರು ಅಥವಾ ಭಾರತದ ಜನಸಂಖ್ಯೆಯ 38.9 ಶೇಕಡಾ ಜನರು ತೀವ್ರ ಮಾಲಿನ್ಯ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023 ರ ಅಂಕಿಅಂಶ ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ.

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ AQLI ದತ್ತಾಂಶದ ಪ್ರಕಾರ, ದೆಹಲಿ-ಎನ್ ಸಿಆರ್ ನಿವಾಸಿಗಳು PM2.5 ಮಾಲಿನ್ಯದಿಂದಾಗಿ 8.2 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ 5 µg/m³ ಗೆ ಹೋಲಿಸಿದರೆ. ಬಿಹಾರ (5.6 ವರ್ಷಗಳು), ಹರಿಯಾಣ (5.3 ವರ್ಷಗಳು), ಮತ್ತು ಉತ್ತರ ಪ್ರದೇಶ (5 ವರ್ಷಗಳು) ನಂತರದ ಸ್ಥಾನದಲ್ಲಿವೆ.

2023 ರ ಸಾಂದ್ರತೆಯಿಂದ PM2.5 ನೊಂದಿಗೆ 40 µg/m³ ನ ರಾಷ್ಟ್ರೀಯ PM2.5 ಮಾನದಂಡಕ್ಕೆ ಹೋಲಿಸಿದರೆ, ದೆಹಲಿ-ಎನ್ ಸಿಆರ್ ಪ್ರದೇಶದ ನಿವಾಸಿಗಳು 4.74 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ, ನಂತರ ಬಿಹಾರ (1.97 ವರ್ಷಗಳು), ಹರಿಯಾಣ (1.83 ವರ್ಷಗಳು), ಮತ್ತು ಉತ್ತರ ಪ್ರದೇಶ (1.59 ವರ್ಷಗಳು) ರಾಜ್ಯಗಳ ಜನರಾಗಿದ್ದಾರೆ.

ಜನಸಂಖ್ಯೆಯ ಸುಮಾರು ಶೇಕಡಾ 46 ಮಂದಿ ರಾಷ್ಟ್ರೀಯ ವಾರ್ಷಿಕ PM2.5 ಮಾನದಂಡವನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದ ರಾಷ್ಟ್ರೀಯ ಮಾನದಂಡವನ್ನು ಪೂರೈಸಲು ಈ ಪ್ರದೇಶಗಳಲ್ಲಿ ಕಣಗಳ ಸಾಂದ್ರತೆಯನ್ನು ಕಡಿಮೆ ಮಾಡುವುದರಿಂದ ಈ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವಿತಾವಧಿಗೆ 1.5 ವರ್ಷಗಳನ್ನು ಸೇರಿಸಬಹುದು ಎಂದು ವಿಶ್ಲೇಷಣೆ ಹೇಳಿದೆ.

ಭಾರತದ ಎಲ್ಲಾ 1.4 ಶತಕೋಟಿ ಜನರು ಡಬ್ಲ್ಯುಹೆಚ್ ಒ ಮಾರ್ಗಸೂಚಿಯನ್ನು ಮೀರಿದ ಮಾಲಿನ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ 1,950 ಕೋಟಿ ರೂ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ!

News headlines 19-10-2025 | ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; DK Shivakumar- Kiran Majumdar ನಡುವೆ ನಿಲ್ಲದ ವಾಕ್ಸಮರ

SCROLL FOR NEXT