ಮಾಣಿಕ್​ರಾವ್ ಕೊಕಾಟೆ 
ದೇಶ

ಮಹಾರಾಷ್ಟ್ರ: ಸಚಿವ ಸ್ಥಾನಕ್ಕೆ ಮಾಣಿಕ್​ರಾವ್ ಕೊಕಾಟೆ ರಾಜೀನಾಮೆ!

ನಾಸಿಕ್‌ ಅಪಾರ್ಟ್‌ಮೆಂಟ್ ಹಗರಣದಿಂದ ಮಹಾರಾಷ್ಟ್ರ ರಾಜ್ಯ ಕ್ರೀಡಾ ಸಚಿವ ಮಾಣಿಕ್​ರಾವ್ ಕೊಕಾಟೆ ಸಂಕಷ್ಟಕ್ಕೆ ಸಿಲುಕಿದ್ದು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ನಾಸಿಕ್‌ ಅಪಾರ್ಟ್‌ಮೆಂಟ್ ಹಗರಣದಿಂದ ಮಹಾರಾಷ್ಟ್ರ ರಾಜ್ಯ ಕ್ರೀಡಾ ಸಚಿವ ಮಾಣಿಕ್​ರಾವ್ ಕೊಕಾಟೆ ಸಂಕಷ್ಟಕ್ಕೆ ಸಿಲುಕಿದ್ದು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪ್ರಕರಣ ಸಂಬಂಧ ನಾಸಿಕ್ ಸೆಷನ್ಸ್ ನ್ಯಾಯಾಲಯವು ಸಚಿವ ಮಾಣಿಕ್​ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. 1995ರಲ್ಲಿ ನಡೆದಿದ್ದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಕೊಕಾಟೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಅದರ ನಂತರ ನಾಸಿಕ್ ಸೆಷನ್ಸ್ ನ್ಯಾಯಾಲಯವು ಈಗ ಮಾಣಿಕ್​ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

ನಾಸಿಕ್‌ನಲ್ಲಿ 1995ರ ಜುನ್ಯಾ ಸದನಿಕಾ ಹಗರಣ ಪ್ರಕರಣವು ಮಾಣಿಕ್ರಾವ್ ಕೊಕಾಟೆ ಅವರಿಗೆ ದೊಡ್ಡ ಹೊಡೆತ ನೀಡಿತ್ತು. ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಕೊಕಾಟೆ ವಿರುದ್ಧ ವಾರಂಟ್ ಹೊರಡಿಸಿತ್ತು. ಕೊಕಾಟೆ ಕಥೆ ಸುಮಾರು 30 ವರ್ಷಗಳಿಂದ ನಡೆಯುತ್ತಿದ್ದು ಯಾವುದೇ ಕ್ಷಣದಲ್ಲಾದರೂ ಅವರ ಬಂಧನವಾಗಬಹುದು.

ಏತನ್ಮಧ್ಯೆ, ಮಾಣಿಕ್​ರಾವ್ ಕೊಕಾಟೆ ತಮ್ಮ ರಾಜೀನಾಮೆ ಪತ್ರವನ್ನು ಅಜಿತ್ ಪವಾರ್ ಅವರಿಗೆ ಸಲ್ಲಿಸಿದ್ದಾರೆ. ಸದ್ಯ ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶಗಳ ವಿರುದ್ಧ ಕೊಕಾಟೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್ ಶುಕ್ರವಾರ ತನ್ನ ನಿರ್ಧಾರವನ್ನು ನೀಡಲಿದೆ. ಆದ್ದರಿಂದ, ಹೈಕೋರ್ಟ್ ಆದೇಶದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಸಂಸತ್ ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ಔಟಾಗಿ ಹೋಗುತ್ತಿದ್ದ Pak ಆಟಗಾರನ ಕಡೆ ಕೋಪದಿಂದ ನುಗ್ಗಿದ ಸೂರ್ಯವಂಶಿ, ಕೂಡಲೇ ಮಧ್ಯಪ್ರವೇಶಿಸಿದ ವಿಹಾನ್, Video!

ಸಿಜೆ ರಾಯ್ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯಿ ಒತ್ತಾಯ, ಕೇಂದ್ರಕ್ಕೆ ಪತ್ರ!

'ಮುಖಂಡರ ಮುಂದೆ ಗ್ಲಾಮರಸ್‌ ಆಗಿರಲು ಬಯಸಬೇಡಿ': ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿಕೆ ವೈರಲ್!

ಭಾರತದ ಕನಸುಗಳಿಗೆ ಇಂಧನ: ಬಾಹ್ಯಾಕಾಶ ಜಿಗಿತಕ್ಕೆ 13,700 ಕೋಟಿ (ಜಾಗತಿಕ ಜಗಲಿ)

SCROLL FOR NEXT