ಜಾರ್ಖಂಡ್ ಸಚಿವ- ವೈದ್ಯೆಯ ಹಿಜಾಬ್ ಎಳೆಯುತ್ತಿರುವ ನಿತೀಶ್ ಕುಮಾರ್  online desk
ದೇಶ

ನಿತೀಶ್ ಕುಮಾರ್ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್ ನಿಂದ ಜಾಕ್ ಪಾಟ್; ಸಚಿವ ಇರ್ಫಾನ್ ಅನ್ಸಾರಿ ಭರ್ಜರಿ ಆಫರ್!

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯ ಮುಸುಕನ್ನು ತೆಗೆದುಹಾಕುವ ಮೂಲಕ ನಖಾಬ್ ಮತ್ತು ಮುಸ್ಲಿಂ ಸಮುದಾಯವನ್ನು ಅವಮಾನಿಸಲು ಪ್ರಯತ್ನಿಸಿದ್ದಾರೆ ಎಂದು ಅನ್ಸಾರಿ ಆರೋಪಿಸಿದ್ದಾರೆ.

ರಾಂಚಿ: ನೇಮಕಾತಿ ಪತ್ರಗಳ ವಿತರಣೆಯ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್ ಸರ್ಕಾರ ಭರ್ಜರಿ ಆಫರ್ ನೀಡಿದೆ.

ನಖಾಬ್ (ಹಿಜಾಬ್) ವಿವಾದದ ನಂತರ ಬಿಹಾರದ ಮಹಿಳಾ ವೈದ್ಯೆಗೆ 3 ಲಕ್ಷ ರೂ. ಮಾಸಿಕ ಸಂಬಳ, ಸರ್ಕಾರಿ ಫ್ಲಾಟ್ ಮತ್ತು ಬಯಸಿದ ಪೋಸ್ಟಿಂಗ್ ನೀಡುವ ಆಫರ್ ನೀಡಿರುವುದಾಗಿ ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಶನಿವಾರ ಹೇಳಿದ್ದಾರೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯ ಮುಸುಕನ್ನು ತೆಗೆದುಹಾಕುವ ಮೂಲಕ ನಖಾಬ್ ಮತ್ತು ಮುಸ್ಲಿಂ ಸಮುದಾಯವನ್ನು ಅವಮಾನಿಸಲು ಪ್ರಯತ್ನಿಸಿದ್ದಾರೆ ಎಂದು ಅನ್ಸಾರಿ ಆರೋಪಿಸಿದ್ದಾರೆ.

"ನಾನು ಮಹಿಳಾ ವೈದ್ಯರನ್ನು ಜಾರ್ಖಂಡ್‌ಗೆ ಆಹ್ವಾನಿಸಿದ್ದೇನೆ ಮತ್ತು ಅವರಿಗೆ 3 ಲಕ್ಷ ರೂ. ಮಾಸಿಕ ಸಂಬಳ, ಫ್ಲಾಟ್, ಬಯಸಿದ ಪೋಸ್ಟಿಂಗ್ ಮತ್ತು ಪೂರ್ಣ ಭದ್ರತೆಯೊಂದಿಗೆ ಕೆಲಸ ನೀಡಲು ಸಿದ್ಧನಿದ್ದೇನೆ" ಎಂದು ಅವರು ಜಮ್ತಾರಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಒಬ್ಬ ವೈದ್ಯೆ ಮತ್ತು ಮಹಿಳೆಯನ್ನು ಅವರ ನಖಾಬ್ ಎಳೆಯುವ ಮೂಲಕ ಅವಮಾನಿಸಿ ಅಸಭ್ಯವಾಗಿ ನಡೆಸಿಕೊಂಡ ರೀತಿ ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ, ಬದಲಾಗಿ ಮಾನವ ಘನತೆ, ಗೌರವ ಮತ್ತು ಸಂವಿಧಾನದ ಮೇಲಿನ ನೇರ ದಾಳಿಯಾಗಿದೆ" ಎಂದು ಅವರು ಹೇಳಿದರು.

ಈ ಘಟನೆಯ ವಿಡಿಯೋ ತುಣುಕು ವ್ಯಾಪಕವಾಗಿ ಪ್ರಸಾರವಾಗಿದ್ದು, ಪ್ರಮುಖ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಸೋಮವಾರ ಪಾಟ್ನಾದ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಆಯುಷ್ ವೈದ್ಯರು ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಲು ಸೇರಿದ್ದರು.

ಮಹಿಳೆ ತನ್ನ ಪತ್ರಕ್ಕಾಗಿ ಬಂದಾಗ, ಕುಮಾರ್ ಅವರ ನಖಾಬ್ ನ್ನು ನೋಡಿ, "ಇದು ಏನು?" ಎಂದು ಕೇಳಿದರು ಮತ್ತು ನಂತರ ಮುಸುಕನ್ನು ತೆಗೆಯಲು ಮುಂದಾದರು. ಏತನ್ಮಧ್ಯೆ, ಘಟನೆಯ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಮೊಹಮ್ಮದ್ ಮುರ್ತಾಜಾ ಆಲಂ ಮತ್ತು ಕೆಲವು ಗ್ರಾಮಸ್ಥರು ಗುರುವಾರ ಇಟ್ಕಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇಟ್ಕಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮನೀಶ್ ಕುಮಾರ್ ಪಿಟಿಐಗೆ ಮಾಹಿತಿ ನೀಡಿದ್ದು, ನಿತೀಶ್ ಕುಮಾರ್ ಮಹಿಳಾ ವೈದ್ಯರ ನಖಾಬ್ ಅನ್ನು ಕಿತ್ತುಹಾಕುತ್ತಿರುವುದನ್ನು ತೋರಿಸುವ ವೀಡಿಯೊದ ಆಧಾರದ ಮೇಲೆ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT