ನಕ್ಸಲ್ ಸಾಂದರ್ಭಿಕ ಚಿತ್ರ 
ದೇಶ

ಒಡಿಶಾ: ತಲೆಗೆ 2 ಕೋಟಿ ರೂ ಗೂ ಹೆಚ್ಚು ಬಹುಮಾನ ಹೊಂದಿದ್ದ 22 ನಕ್ಸಲರು ಪೊಲೀಸರಿಗೆ ಶರಣು!

ಮಾವೋವಾದಿಗಳು ಒಡಿಶಾ ಡಿಜಿಪಿ ವೈ ಬಿ ಖುರಾನಿಯಾ ಮತ್ತು ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಿದ್ದು, ತಮ್ಮ ಬಳಿ ಇದ್ದ ಒಂಬತ್ತು ಬಂದೂಕುಗಳು ಮತ್ತು 150 ಕಾರ್ಟ್ರಿಡ್ಜ್‌ಗಳು, 20 ಕೆಜಿ ಸ್ಫೋಟಕಗಳು, 13 ಐಇಡಿ ಹಸ್ತಾಂತರಿಸಿದ್ದಾರೆ.

ಭುವನೇಶ್ವರ: ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ತಲೆಗೆ ಒಟ್ಟು 2.18 ಕೋಟಿ ರೂ. ಬಹುಮಾನ ಹೊಂದಿದ್ದ ಇಪ್ಪತ್ತೆರಡು ಮಾವೋವಾದಿಗಳು ಮಂಗಳವಾರ ಪೊಲೀಸರ ಮುಂದೆ ಶರಣಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭುವನೇಶ್ವರದಲ್ಲಿ ಮಾವೋವಾದಿಗಳು ಒಡಿಶಾ ಡಿಜಿಪಿ ವೈ ಬಿ ಖುರಾನಿಯಾ ಮತ್ತು ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಿದ್ದು, ತಮ್ಮ ಬಳಿ ಇದ್ದ ಒಂಬತ್ತು ಬಂದೂಕುಗಳು ಮತ್ತು 150 ಕಾರ್ಟ್ರಿಡ್ಜ್‌ಗಳು, 20 ಕೆಜಿ ಸ್ಫೋಟಕಗಳು, 13 ಐಇಡಿ, ಜೆಲಾಟಿನ್ ಸ್ಟಿಕ್‌ಗಳು ಮತ್ತು ಇತರ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ.

ಎಲ್ಲಾ 22 ಮಾವೋವಾದಿಗಳು ನೆರೆಯ ಛತ್ತೀಸ್‌ಗಢದವರಾಗಿದ್ದರೂ ಒಡಿಶಾದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಶರಣಾದ ನಕ್ಸಲರಲ್ಲಿ ವಿಭಾಗೀಯ ಸಮಿತಿ ಸದಸ್ಯ(ಡಿಸಿಎಂ) ಮತ್ತು ಆರು ಪ್ರದೇಶ ಸಮಿತಿ ಸದಸ್ಯರು ಸೇರಿದಂತೆ 10 ಮಹಿಳೆಯರಿದ್ದಾರೆ. ಅವರೆಲ್ಲರ ವಿರುದ್ಧ ಒಡಿಶಾ ಮತ್ತು ಛತ್ತೀಸ್‌ಗಢ ಎರಡರಲ್ಲೂ ಮಾವೋವಾದಿ ಚಟುವಟಿಕೆಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ.

ಶರಣಾದ ಮಾವೋವಾದಿಗಳಲ್ಲಿ ಸುಕ್ಮಾ ಜಿಲ್ಲೆಯ ಮೈರೆ ಮಡ್ಕಂ(45) ಎಂದು ಕರೆಯಲ್ಪಡುವ ಡಿಸಿಎಂ ಲಿಂಗೆ ಮತ್ತು ಎಸಿಎಂಗಳಾದ ಬಮನ್ ಮಡ್ಕಮ್ (27) ಮತ್ತು ಸುಕ್ಕಾ ಮುಚಾಕಿ ಮತ್ತು ರೀಟಾ ಪೊಡಿಯಮ್ ಕೂಡ ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಬಿಜೆಪಿ ಸಂಸದ ನೋಟಿಸ್; ಕಾರಣ ಏನು ಗೊತ್ತಾ?

'ವಂದೇ ಮಾತರಂ' ಹಾಡುವುದು ಕಡ್ಡಾಯ: ಮತೀಯ ಅಜೆಂಡಾ, ಮುಸ್ಲಿಂ ಸಂಘಟನೆ ಜಮಿಯತ್ ತೀವ್ರ ವಿರೋಧ!

ಕೂಡಲೇ ಭಾರತಕ್ಕೆ ವಾಪಸ್ಸಾಗಿ: ಇಲ್ಲವಾದ್ರೆ! ವಿಜಯ್ ಮಲ್ಯಗೆ ಕೊನೆಯ ಅವಕಾಶ ನೀಡಿದ ನ್ಯಾಯಾಲಯ

ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಬ್ರೇಕ್!

ದೂರದರ್ಶನದ ಖ್ಯಾತ 'ನ್ಯೂಸ್ ಆಂಕರ್' ಸರಳ ಮಹೇಶ್ವರಿ ನಿಧನ!

SCROLL FOR NEXT