ದೆಹಲಿ ಸಿಎಂ ರೇಖಾಗುಪ್ತಾ 
ದೇಶ

ಇಂದಿರಾ ಕ್ಯಾಂಟೀನ್ ನಂತೆ ದೆಹಲಿಯಲ್ಲಿ 100 'ಅಟಲ್ ಕ್ಯಾಂಟೀನ್' ಆರಂಭ! ಕೇವಲ 5 ರೂ. ಗೆ ಥಾಲಿ: ಮೆನುವಿನಲ್ಲಿ ಏನಿದೆ ಗೊತ್ತಾ?

ಅಟಲ್ ಕ್ಯಾಂಟೀನ್ ದೆಹಲಿಯ ಆತ್ಮವಾಗಲಿದೆ, ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ರೇಖಾಗುಪ್ತಾ ಹೇಳಿದ್ದಾರೆ.

ನವದೆಹಲಿ: ಕರ್ನಾಟಕದಲ್ಲಿರುವ ಇಂದಿರಾ ಕ್ಯಾಂಟೀನ್ ನಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ 'ಅಟಲ್ ಕ್ಯಾಂಟೀನ್' ಆರಂಭಿಸಲಾಗಿದೆ. ನಗರದಾದ್ಯಂತ 100 ಸ್ಥಳಗಳಲ್ಲಿ ಕೇವಲ 5 ರೂ.ಗೆ ಪೌಷ್ಟಿಕಾಂಶದ ಊಟವನ್ನು ಒದಗಿಸಲು ಅಟಲ್ ಕ್ಯಾಂಟೀನ್ ಗಳನ್ನು ದೆಹಲಿ ಸರ್ಕಾರ ಆರಂಭಿಸಿದೆ.

ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮದಿನದ ಸ್ಮರಣಾರ್ಥ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಬಡವರು, ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಗುಣಮಟ್ಟದ ಆಹಾರವನ್ನು ಒದಗಿಸುವ ಉದ್ದೇಶದಿಂದ 100 ಅಟಲ್ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿದ್ದಾರೆ.

ಅಟಲ್ ಕ್ಯಾಂಟೀನ್ ದೆಹಲಿಯ ಆತ್ಮವಾಗಲಿದೆ, ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೆನುವಿನಲ್ಲಿ ಏನಿದೆ? ದೆಹಲಿಯಾದ್ಯಂತ 45 ಅಟಲ್ ಕ್ಯಾಂಟೀನ್‌ಗಳು ಇಂದು ಪ್ರಾರಂಭವಾಗಿವೆ. ಉಳಿದ 55 ಕ್ಯಾಂಟೀನ್‌ಗಳು ಮುಂದಿನ ದಿನಗಳಲ್ಲಿ ಉದ್ಘಾಟನೆಗೊಳ್ಳಲಿವೆ. ಈ ಕ್ಯಾಂಟೀನ್‌ಗಳಲ್ಲಿ ದಿನಕ್ಕೆ ಎರಡು ಊಟಗಳನ್ನು ನೀಡುತ್ತವೆ - ಬೆಳಿಗ್ಗೆ 11 ರಿಂದ ಸಂಜೆ 4 ರ ನಡುವೆ ಮತ್ತು ಸಂಜೆ 6:30 ರಿಂದ 9:30 ರ ನಡುವೆ ಸುಮಾರು 500 ಜನರಿಗೆ ಥಾಲಿ ಊಟ ಇರುತ್ತದೆ. ಇದರಲ್ಲಿ ದಾಲ್, ಅನ್ನ, ಚಪಾತಿ, ತರಕಾರಿ ಪಲ್ಯ ಮತ್ತು ಉಪ್ಪಿನ ಕಾಯಿ ಇರುತ್ತದೆ.

ಊಟ ವಿತರಣೆಗಾಗಿ ಡಿಜಿಟಲ್ ಟೋಕನ್ ವ್ಯವಸ್ಥೆ: ಊಟ ವಿತರಣೆಗಾಗಿ ದೆಹಲಿ ಸರ್ಕಾರ ಡಿಜಿಟಲ್ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಮನುಷ್ಯರಿಂದ ಕೂಪನ್ ಕೂಡುವ ಬದಲು ಡಿಜಿಟಲ್ ಕೂಪನ್ ವ್ಯವಸ್ಥೆ ಮಾಡಲಾಗಿದೆ.

ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್‌ನ (DUSIB) ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ CCTV ಕ್ಯಾಮೆರಾಗಳು ಎಲ್ಲಾ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ-ಖರ್ಗೆ ಭೇಟಿ: ಮತ್ತೆ ಚಾಲ್ತಿಗೆ ಬಂದ ಸಿಎಂ ಬದಲಾವಣೆ ಊಹಾಪೋಹ, ಸಿಡಬ್ಲ್ಯುಸಿ ಸಭೆ ಕುರಿತು ಮಹತ್ವದ ಮಾತು!

'ರಾಷ್ಟ್ರೀಯ ಪ್ರೇರಣಾ ಸ್ಥಳ' ಲೋಕಾರ್ಪಣೆ: ಭಾರತದಲ್ಲಿ ಟೆಲಿಕಾಂ ಕ್ರಾಂತಿಯ ವೇಗ ಹೆಚ್ಚಿಸಿದ ಶ್ರೇಯಸ್ಸು ಅಟಲ್ ಜಿಗೆ ಸಲ್ಲುತ್ತದೆ- ಪ್ರಧಾನಿ ಮೋದಿ

ಚಿತ್ರದುರ್ಗ: ಖಾಸಗಿ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ, ಬೆಂಕಿ​​​​; 9 ಮಂದಿ ಸಜೀವ ದಹನ, ಹಲವರಿಗೆ ಗಂಭೀರ ಗಾಯ; ತನಿಖೆಗೆ ಆದೇಶ; Video

ಚಿತ್ರದುರ್ಗ ಬಸ್ ದುರಂತ: ಸಿಎಂ ಸಿದ್ದರಾಮಯ್ಯ-ಪ್ರಧಾನಿ ಮೋದಿ ತೀವ್ರ ಸಂತಾಪ; ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

'ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು': ದರ್ಶನ್-ಸುದೀಪ್ ಫ್ಯಾನ್ಸ್ ವಾರ್ ಕುರಿತು ಶಿವಣ್ಣ ಖಡಕ್ ಮಾತು!

SCROLL FOR NEXT