ಪಾರ್ಥಸಾರಥಿ ಮಹಾಂತ 
ದೇಶ

'ಬಾಂಗ್ಲಾದೇಶ ಮೂಲದ ಸಂಘಟನೆಯೊಂದಿಗೆ' ನಂಟು: ಅಸ್ಸಾಂ, ತ್ರಿಪುರಾದಲ್ಲಿ 11 ಜನರ ಬಂಧನ

ಕೇಂದ್ರ ಸಂಸ್ಥೆಗಳು ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) 11 ಜನರನ್ನು ಬಂಧಿಸಿದೆ ಎಂದು ಗುವಾಹಟಿಯ ಪೊಲೀಸ್ ಆಯುಕ್ತ ಪಾರ್ಥಸಾರಥಿ ಮಹಾಂತ ಹೇಳಿದರು.

ಗುವಾಹಟಿ: ನಿಷೇಧಿತ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ(ಜೆಎಂಬಿ)ದ ಅಂಗಸಂಸ್ಥೆಯಾದ ಇಮಾಮ್ ಮಹ್ಮದರ್ ಕಫಿಲಾ(ಐಎಂಕೆ) ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಅಸ್ಸಾಂ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) 11 ಜನರನ್ನು ಬಂಧಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗುವಾಹಟಿಯ ಪೊಲೀಸ್ ಆಯುಕ್ತ ಪಾರ್ಥಸಾರಥಿ ಮಹಾಂತ, ಕೇಂದ್ರ ಸಂಸ್ಥೆಗಳು ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) 11 ಜನರನ್ನು ಬಂಧಿಸಿದೆ ಎಂದು ಹೇಳಿದರು.

"ನಿನ್ನೆ ರಾತ್ರಿ ತ್ರಿಪುರಾ ಜೊತೆಗೆ ಅಸ್ಸಾಂನ ಬಾರ್ಪೇಟಾ, ಚಿರಾಂಗ್, ಬಕ್ಸಾ ಮತ್ತು ದರ್ರಾಂಗ್ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು" ಎಂದು ಅವರು ತಿಳಿಸಿದ್ದಾರೆ.

"ಈ ಬಂಧಿತ ಆರೋಪಿಗಳು ಬಾಂಗ್ಲಾದೇಶ ಮೂಲದ ಸಂಘಟನೆಗಳ ನೇರ ಆದೇಶದ ಮೇರೆಗೆ ಕೆಲಸ ಮಾಡುತ್ತಿದ್ದರು. ಅಸ್ಸಾಂ ಮತ್ತು ಈಶಾನ್ಯದ ಉಳಿದ ಭಾಗಗಳನ್ನು ಅಸ್ಥಿರಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು" ಎಂದು ಎಸ್‌ಟಿಎಫ್ ಮುಖ್ಯಸ್ಥರು ಹೇಳಿದ್ದಾರೆ.

ಏಕಕಾಲದಲ್ಲಿ ನಡೆಸಿದ ದಾಳಿಯ ಸಮಯದಲ್ಲಿ ಪೊಲೀಸ್ ತಂಡಗಳು ಸಾಕಷ್ಟು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಮಹಾಂತ ತಿಳಿಸಿದ್ದಾರೆ.

ಅಸ್ಸಾಂನಿಂದ ಬಂಧಿಸಲ್ಪಟ್ಟವರನ್ನು ನಾಸಿಮ್ ಉದ್ದೀನ್ ಅಲಿಯಾಸ್ ನಜೀಮುದ್ದೀನ್ ಅಲಿಯಾಸ್ ತಮೀಮ್(24), ಜುನಾಬ್ ಅಲಿ(38), ಅಫ್ರಹಿಂ ಹುಸೇನ್ (24), ಮಿಜಾನೂರ್ ರೆಹಮಾನ್ (46), ಸುಲ್ತಾನ್ ಮೆಹಮೂದ್ (40), ಎಂಡಿ ಸಿದ್ದಿಕ್ ಅಲಿ (46), ರಸೀದುಲ್ ಆಲಂ (28), ಮಹಿಬುಲ್ ಖಾನ್ (25), ಶಾರುಕ್ ಹುಸೇನ್ (22) ಮತ್ತು ಎಂಡಿ ದಿಲ್ಬರ್ ರಜಾಕ್ (26) ಎಂದು ಗುರುತಿಸಲಾಗಿದೆ.

ಜಾಗೀರ್ ಮಿಯಾ(33)ನನ್ನು ತ್ರಿಪುರಾದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕೋಗಿಲು ಪ್ರಕರಣ' ಈಗ ಅಂತಾರಾಷ್ಟ್ರೀಯ ವಿಚಾರ: ಪಾಕ್ ಕ್ಯಾತೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಕಿಡಿ; ಸಚಿವ ಜಮೀರ್ ಹೇಳಿದ್ದು ಏನು?

'ಸ್ವಂತ ತಮ್ಮನ ಮಗನಿಗೆ ಮಗಳನ್ನು ಕೊಟ್ಟು ಮದುವೆ' ಮಾಡಿದ ಪಾಕ್ ಸೇನಾ ಮುಖ್ಯಸ್ಥ! ಇದರಲ್ಲಿಯೂ ಒಳ ಸಂಚು?

2026 ರಲ್ಲಿಯೂ ಭಾರತ- ಪಾಕಿಸ್ತಾನ ಮಿಲಿಟರಿ ಸಂಘರ್ಷ ಸಾಧ್ಯತೆ! US ಥಿಂಕ್ ಟ್ಯಾಂಕ್ ವಾರ್ನಿಂಗ್

ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ; G RAM G ಕಾಯ್ದೆ ಅನುಷ್ಠಾನಗೊಳಿಸದಂತೆ ಆಗ್ರಹ

ಹೊಸ ವರ್ಷದಲ್ಲಿ ಶುಭಸುದ್ದಿ? ನಾಯಕತ್ವ ಬದಲಾವಣೆ ಬಗ್ಗೆ ಡಿಕೆಶಿ ಹೇಳಿದ್ದೇನು?

SCROLL FOR NEXT