ರಣವೀರ್ ಅಲ್ಹಾಬಾದಿಯಾ 
ದೇಶ

ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ; 50,000 ಫಾಲೋಯರ್ಸ್ ಕಳೆದುಕೊಂಡ ರಣವೀರ್ ಅಲ್ಹಾಬಾದಿಯಾ

ರಣವೀರ್ ಅವರ ಹೇಳಿಕೆಗೆ ಪ್ರೇಕ್ಷಕರು ಮತ್ತು ಸಹ ಕಾಮಿಕ್ಸ್ ಜೋರಾಗಿ ನಕ್ಕರು. ಆದರೆ, ಅದು ಶೀಘ್ರದಲ್ಲೇ ವಿವಾದವನ್ನು ಹುಟ್ಟುಹಾಕಿತು. ರಣವೀರ್ ವಿರುದ್ಧ ಹಲವು ಕಡೆ ಪ್ರಕರಣ ದಾಖಲಾಯಿತು.

ನವದೆಹಲಿ: ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ರಿಯಾಲಿಟಿ ಶೋ "ಇಂಡಿಯಾಸ್ ಗಾಟ್ ಲ್ಯಾಟೆಂಟ್" ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಪಾಡ್‌ಕಾಸ್ಟರ್ ರಣವೀರ್ ಅಲ್ಹಾಬಾದಿಯಾ ಅವರ ಸಾಮಾಜಿಕ ಮಾಧ್ಯಮದ ಅನುಯಾಯಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

'ಬಿಯರ್‌ಬೈಸೆಪ್ಸ್' ಎಂಬ ಹೆಸರು ಹೊಂದಿರುವ ರಣವೀರ್ ಅಲ್ಹಾಬಾದಿಯಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 50,000 ಅನುಯಾಯಿಗಳು ಕಡಿಮೆಯಾಗಿದ್ದಾರೆ.

ಡೇಟಾ-ಚಾಲಿತ ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ವೇದಿಕೆಯಾದ HypeAuditor ಪ್ರಕಾರ, BeerBiceps ಫೆಬ್ರುವರಿ 9 ರಂದು 45.27 ಲಕ್ಷ Instagram ಅನುಯಾಯಿಗಳನ್ನು ಹೊಂದಿತ್ತು. ಅದಾದ ಮೂರು ದಿನಗಳ ನಂತರ, ಫೆಬ್ರುವರಿ 11 ರಂದು, ಅನುಯಾಯಿಗಳ ಸಂಖ್ಯೆ 44.80 ಲಕ್ಷಕ್ಕೆ ಇಳಿಯಿತು. 'ranveerallahbadia' ಎಂಬ ಹೆಸರಿನ ಅವರ ಇನ್ನೊಂದು ಖಾತೆಯಲ್ಲಿಯೂ ಭಾನುವಾರ 34.39 ಲಕ್ಷವಿದ್ದ ಅನುಯಾಯಿಗಳ ಸಂಖ್ಯೆ ಮಂಗಳವಾರ 34.21 ಲಕ್ಷಕ್ಕೆ ಕುಸಿದಿದೆ ಎಂದಿದೆ.

ಸಾಮಾಜಿಕ ಮಾಧ್ಯಮದ ಪ್ರಭಾವಿ ರಣವೀರ್ ಅಲ್ಹಾಬಾದಿಯಾ ಇತ್ತೀಚೆಗೆ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಕಂಟೆಂಟ್ ಕ್ರಿಯೇಟರ್ ಅಪೂರ್ವ ಮುಖಿಜಾ ಮತ್ತು ಕಾಮಿಕ್ಸ್ ಆಶಿಶ್ ಚಂಚಲಾನಿ ಮತ್ತು ಜಸ್ಪ್ರೀತ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಪೋಷಕರು ಮತ್ತು ಲೈಂಗಿಕತೆ ಕುರಿತಂತೆ ಅಶ್ಲೀಲ ಮತ್ತು ಅಸಭ್ಯ ಹೇಳಿಕೆಯನ್ನು ನೀಡಿದ್ದರು. ಈ ಕ್ಲಿಪ್ ವೈರಲ್ ಆಗಿತ್ತು ಮತ್ತು ರಣವೀರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ರಣವೀರ್ ಅವರ ಹೇಳಿಕೆಗೆ ಪ್ರೇಕ್ಷಕರು ಮತ್ತು ಸಹ ಕಾಮಿಕ್ಸ್ ಜೋರಾಗಿ ನಕ್ಕರು. ಆದರೆ, ಅದು ಶೀಘ್ರದಲ್ಲೇ ವಿವಾದವನ್ನು ಹುಟ್ಟುಹಾಕಿತು. ರಣವೀರ್ ವಿರುದ್ಧ ಹಲವು ಕಡೆ ಪ್ರಕರಣ ದಾಖಲಾಯಿತು.

ಇದು ವಿವಾದದ ಸ್ಪರೂಪ ಪಡೆದುಕೊಳ್ಳುತ್ತಿದ್ದಂತೆ ರಣವೀರ್ ಅಲ್ಹಾಬಾದಿಯಾ ಅವರು, ಕ್ಷಮೆಯಾಚಿಸಿದರು ಮತ್ತು ನಾನು ಆ ರೀತಿ ಹೇಳಬಾರದಿತ್ತು ಎಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT