ಅರ್ ಎಸ್ ಎಸ್ ಹೊಸ ಕಚೇರಿ  
ದೇಶ

ದೆಹಲಿಯಲ್ಲಿ RSS ಕಚೇರಿ ನಿರ್ಮಾಣ ಕಾರ್ಯ ಪೂರ್ಣ: 150 ಕೋಟಿ ರೂ ವೆಚ್ಚದ 'ಪವರ್ ಹೌಸ್' ಕೇಶವ್ ಕುಂಜ್!

ಈ ಕಟ್ಟಡಗಳಿಗೆ ಸಾಧನ, ಪ್ರೇರಣಾ ಮತ್ತು ಅರ್ಚನಾ ಎಂದು ಹೆಸರಿಸಲಾಗಿದೆ. ಹಿಂದುತ್ವ ಸಿದ್ಧಾಂತದ ಬಗ್ಗೆ ಒಲವು ಹೊಂದಿರುವ 75,000 ಕ್ಕೂ ಹೆಚ್ಚು ಜನರ ದೇಣಿಗೆಯಿಂದ ಕಟ್ಟಡ ಪೂರ್ಣಗೊಂಡಿದೆ.

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ರಾಷ್ಟ್ರ ರಾಜಧಾನಿಯಲ್ಲಿ ಈ ಹಿಂದಿದ್ದ ತನ್ನ ಕಚೇರಿ ಸ್ಥಳದಲ್ಲೇ ಹೊಸ ಕಚೇರಿ ಸಂಕೀರ್ಣವನ್ನು ನಿರ್ಮಿಸಿದೆ. 3.75 ಎಕರೆ ಜಾಗದಲ್ಲಿ ತಲಾ ಹದಿಮೂರು ಅಂತಸ್ತಿನ ಮೂರು ಕಟ್ಟಡಗಳು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, 300 ಕೊಠಡಿಗಳನ್ನು ಒಳಗೊಂಡಿವೆ.

ಈ ಕಟ್ಟಡಗಳಿಗೆ ಸಾಧನ, ಪ್ರೇರಣಾ ಮತ್ತು ಅರ್ಚನಾ ಎಂದು ಹೆಸರಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 150 ಕೋಟಿ ರೂ.ಗಳಾಗಿದ್ದು, ಹಿಂದುತ್ವ ಸಿದ್ಧಾಂತದ ಬಗ್ಗೆ ಒಲವು ಹೊಂದಿರುವ 75,000 ಕ್ಕೂ ಹೆಚ್ಚು ಜನರ ದೇಣಿಗೆಯಿಂದ ಇದು ನೆರವೇರಿದೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನವೆಂಬರ್ 2016 ರಲ್ಲಿ ಯೋಜನೆಗೆ ಅಡಿಪಾಯ ಹಾಕಿದ್ದರು, ಆದರೂ ಕೆಲಸ ವಿಳಂಬವಾಯಿತು. ಈಗ, ಕೇಶವ್ ಕುಂಜ್ ಬಳಕೆಗೆ ಸಿದ್ಧವಾಗಿದೆ. ಆರ್‌ಎಸ್‌ಎಸ್ ಮೂಲಗಳ ಪ್ರಕಾರ, ಯೋಜನೆಯು ಮೂರು ಗೋಪುರಗಳನ್ನು ಹೊಂದಿದ್ದು, ಪ್ರತಿಯೊಂದೂ ನೆಲ ಮಹಡಿ ಮತ್ತು 12 ಹೆಚ್ಚುವರಿ ಮಹಡಿಗಳನ್ನು ಹೊಂದಿದೆ. ಕೇಶವ ಕುಂಜ್‌ನಲ್ಲಿ ಒಟ್ಟು 13 ಲಿಫ್ಟ್‌ಗಳಿದ್ದು, ಮೊದಲ ಮತ್ತು ಎರಡನೇ ಗೋಪುರಗಳಲ್ಲಿ ಐದು ಮತ್ತು ಮೂರನೇ ಗೋಪುರದಲ್ಲಿ ಮೂರು ಇವೆ. ಪ್ರತಿ ಗೋಪುರದಲ್ಲಿ ಸೇವಾ ಲಿಫ್ಟ್ ಕೂಡ ಇದೆ.

ಹೊಸ ಪ್ರಧಾನ ಕಚೇರಿಯನ್ನು ಗುಜರಾತ್ ಮೂಲದ ವಾಸ್ತುಶಿಲ್ಪಿ ಅನೂಪ್ ಡೇವ್ ವಿನ್ಯಾಸಗೊಳಿಸಿದ್ದಾರೆ. ಎರಡನೇ ಮತ್ತು ಮೂರನೇ ಗೋಪುರಗಳ ನಡುವೆ ಒಂದು ದೊಡ್ಡ ತೆರೆದ ಸ್ಥಳವಿದೆ, ಅಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಮೂಲಗಳ ಪ್ರಕಾರ ಈ ಪ್ರದೇಶವನ್ನು 'ಸಂಘ ಸ್ಥಾನ' (ಆರ್‌ಎಸ್‌ಎಸ್ ಸ್ಥಳ) ಎಂದು ಕರೆಯಲಾಗುತ್ತದೆ.

ಈ ಕಟ್ಟಡವು ರಾಮ ಜನ್ಮಭೂಮಿ ಚಳುವಳಿ ಮತ್ತು ವಿಶ್ವ ಹಿಂದೂ ಪರಿಷತ್ತಿನೊಂದಿಗೆ ಸಂಬಂಧ ಹೊಂದಿರುವ ಪ್ರಮುಖ ನಾಯಕ ಅಶೋಕ್ ಸಿಂಘಾಲ್ ಅವರ ಹೆಸರಿನ ದೊಡ್ಡ ಸಭಾಂಗಣವನ್ನು ಸಹ ಹೊಂದಿದೆ. ಕಟ್ಟಡದಲ್ಲಿ ಗ್ರಂಥಾಲಯ, ಆರೋಗ್ಯ ಚಿಕಿತ್ಸಾಲಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕದಂತಹ ಸೌಲಭ್ಯಗಳನ್ನು ಹೊಂದಿರುತ್ತದೆ. ಈ ಸ್ಥಳದಲ್ಲಿ ಸೌರಶಕ್ತಿಯನ್ನು ಸಹ ಬಳಸಲಾಗುತ್ತಿದೆ.

ಆರ್‌ಎಸ್‌ಎಸ್-ಸಂಬಂಧಿತ ವಾರಪತ್ರಿಕೆಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್‌ನ ಕಚೇರಿಗಳು ಹಾಗೂ ಸುರುಚಿ ಪಬ್ಲಿಕೇಷನ್‌ಗಳು ಸಹ ಇದೇ ಕಟ್ಟದಲ್ಲಿ ಇರಲಿದೆಯ ಕೇಶವ್ ಕುಂಜ್‌ನ ಎರಡು ಮಹಡಿಗಳನ್ನು ಆರ್‌ಎಸ್‌ಎಸ್ ದೆಹಲಿ ಘಟಕಕ್ಕೆ ಮೀಸಲಿಡಲಾಗುವುದು ಮತ್ತು ಒಂದು ಮಹಡಿಯನ್ನು ವಿಶಾವ್ ಕೇಂದ್ರಕ್ಕೆ ಮೀಸಲಿಡಲಾಗುವುದು. ಸಂಕೀರ್ಣವು ಐದು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯನ್ನು ಸಹ ಒಳಗೊಂಡಿದೆ, ದೈಹಿಕ ಸದೃಢತೆಗಾಗಿ ಯೋಗ ಕೊಠಡಿ ಮತ್ತು ಆಧುನಿಕ ವ್ಯಾಯಾಮ ಉಪಕರಣಗಳು ಸಹ ಲಭ್ಯವಿರುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT