ಪ್ರಧಾನಿ ಮೋದಿ- ಡೊನಾಲ್ಡ್ ಟ್ರಂಪ್ online desk
ದೇಶ

ಭಾರತದ ಸಾರ್ವಭೌಮತ್ವಕ್ಕೆ ಟ್ರಂಪ್ ಬೆದರಿಕೆ; ಅವರ ಆಪ್ತ ಸ್ನೇಹಿತ ಮೋದಿ ಇದರ ವಿರುದ್ಧ ನಿಲ್ಲುತ್ತಾರಾ?: ಕಾಂಗ್ರೆಸ್

ಕನಿಷ್ಠ ದರಗಳು ಮತ್ತು ವ್ಯಾಪಕವಾಗಿ ಸುಧಾರಿಸಿದ ಅನುಸರಣಾ ನಿಯಮಗಳಿಗೆ ಕಾಂಗ್ರೆಸ್ ನ ಪ್ರಸ್ತಾವನೆ ಕರೆ ನೀಡಿದೆ ಎಂದು ಜೈರಾಮ್ ರಮೇಶ್ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಸ್ಪರ ಸುಂಕಗಳ ಬಗ್ಗೆ ಮಾತನಾಡುತ್ತಿರುವುದು ಜಿಎಸ್‌ಟಿಯಂತಹ ತೆರಿಗೆ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವು ಅಪಾಯದಲ್ಲಿರುವಾಗ ಟ್ರಂಪ್ ಆಪ್ತ ಸ್ನೇಹಿತ" ಇದನ್ನು ವಿರೋಧಿಸುತ್ತಾರೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಪಕ್ಷವು ಬಹಳ ಹಿಂದಿನಿಂದಲೂ ಜಿಎಸ್‌ಟಿ 2.0ಗಾಗಿ ಕರೆ ನೀಡುತ್ತಿದೆ. ಇದು ಜಿಎಸ್‌ಟಿಯನ್ನು ನಿಜವಾಗಿಯೂ ಉತ್ತಮ ಮತ್ತು ಸರಳ ತೆರಿಗೆಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.

ಕನಿಷ್ಠ ದರಗಳು ಮತ್ತು ವ್ಯಾಪಕವಾಗಿ ಸುಧಾರಿಸಿದ ಅನುಸರಣಾ ನಿಯಮಗಳಿಗೆ ಕಾಂಗ್ರೆಸ್ ನ ಪ್ರಸ್ತಾವನೆ ಕರೆ ನೀಡಿದೆ ಎಂದು ಜೈರಾಮ್ ರಮೇಶ್ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

"ಈಗ ಅಧ್ಯಕ್ಷ ಟ್ರಂಪ್ ಜಿಎಸ್‌ಟಿಯ ಅಸ್ತಿತ್ವಕ್ಕೇ ಬೆದರಿಕೆ ಹಾಕುತ್ತಿದ್ದಾರೆ. ಜಿಎಸ್ ಟಿಯ ರಚನೆಯಿಂದ, ತೆರಿಗೆ ಆಮದುಗಳಿಗೆ ಅನ್ವಯಿಸುತ್ತದೆ ಆದರೆ ರಫ್ತುಗಳ ಮೇಲೆ ಅಲ್ಲ. ಇದು ವಿವಾದಾತೀತವಾಗಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಈಗ ಅಮೆರಿಕ ಅಧ್ಯಕ್ಷರ ಪರಸ್ಪರ ಸುಂಕಗಳ ಬಗ್ಗೆ ಮಾತನಾಡುವುದು ಜಿಎಸ್‌ಟಿಯಂತಹ ತೆರಿಗೆಯ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.

"ಡಬ್ಲ್ಯುಟಿಒ ಹೊರತುಪಡಿಸಿ, ಇಲ್ಲಿ ರಾಷ್ಟ್ರೀಯ ಸಾರ್ವಭೌಮತ್ವ ಅಪಾಯದಲ್ಲಿದೆ. ತಾನು ವಿಶ್ವಗುರು ಎಂದು ನಿರಂತರವಾಗಿ ಘಂಟಾಘೋಷವಾಗಿ ಹೇಳುತ್ತಿರುವ. ಅಧ್ಯಕ್ಷ ಟ್ರಂಪ್ ಅವರ ಉತ್ತಮ ಸ್ನೇಹಿತ ಮೋದಿ ಟ್ರಂಪ್ ಬೆದರಿಕೆಗಳ ವಿರುದ್ಧ ಎದ್ದು ನಿಲ್ಲುತ್ತಾರೆಯೇ?" ಎಂದು ಕಾಂಗ್ರೆಸ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಪ್ರಶ್ನಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪ್ರಸ್ತಾವಿತ ಸುಂಕಗಳ ಕುರಿತಂತೆ ಶ್ವೇತಭವನವು "ಅನ್ಯಾಯಯುತ" ತೆರಿಗೆಗಳು ಎಂದು ವಿವರಿಸುವ ಒಂದು ಲೇಖನವನ್ನು ರಮೇಶ್ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT