ಸಂಗ್ರಹ ಚಿತ್ರ 
ದೇಶ

122 ಕೋಟಿ ರೂ ದುರುಪಯೋಗ: RBI ನಿಷೇಧಕ್ಕೊಳಗಾಗಿದ್ದ ನ್ಯೂ ಇಂಡಿಯಾ ಕೋ-ಆಪ್ ಬ್ಯಾಂಕ್‌ ಮಾಜಿ ಸಿಇಒ ಬಂಧನ

ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) 122 ಕೋಟಿ ರೂಪಾಯಿ ದುರುಪಯೋಗ ಪ್ರಕರಣದಲ್ಲಿ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅಭಿಮನ್ಯು ಭೋನ್ ಅವರನ್ನು ಬಂಧಿಸಿದೆ.

ಮುಂಬೈ: ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) 122 ಕೋಟಿ ರೂಪಾಯಿ ದುರುಪಯೋಗ ಪ್ರಕರಣದಲ್ಲಿ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅಭಿಮನ್ಯು ಭೋನ್ ಅವರನ್ನು ಬಂಧಿಸಿದೆ. ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ. ಬ್ಯಾಂಕಿನ ಜನರಲ್ ಮ್ಯಾನೇಜರ್ ಹಿತೇಶ್ ಮೆಹ್ತಾ ಅವರು ಬ್ಯಾಂಕಿನ ಮೀಸಲು ನಿಧಿಯಿಂದ ಸುಮಾರು ₹122 ಕೋಟಿ ನಗದನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ.

ಈ ಹಗರಣ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಭೋನ್ ರನ್ನು ವಿಚಾರಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ ಅಪರಾಧದಲ್ಲಿ ಅವರ ಪಾತ್ರ ಸ್ಪಷ್ಟವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು ಎಂದು EOW ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ EOW ಈ ಹಿಂದೆ ಹಿತೇಶ್ ಮೆಹ್ತಾ ಮತ್ತು ಡೆವಲಪರ್ ಧರ್ಮೇಶ್ ಪೌನ್ ಅವರನ್ನು ಬಂಧಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ ತಪಾಸಣೆಯ ನಂತರ ಹಣದ ದುರುಪಯೋಗದ ಆರೋಪ ಬೆಳಕಿಗೆ ಬಂದಿದೆ.

ಬ್ಯಾಂಕಿನ ಪ್ರಸ್ತುತ ದ್ರವ್ಯತೆ ಸ್ಥಿತಿಯನ್ನು ಪರಿಗಣಿಸಿ, ಉಳಿತಾಯ ಬ್ಯಾಂಕ್ ಅಥವಾ ಚಾಲ್ತಿ ಖಾತೆಗಳು ಅಥವಾ ಠೇವಣಿದಾರರ ಯಾವುದೇ ಇತರ ಖಾತೆಯಿಂದ ಯಾವುದೇ ಮೊತ್ತವನ್ನು ಹಿಂಪಡೆಯಲು ಅನುಮತಿಸಬಾರದು ಎಂದು ಬ್ಯಾಂಕಿಗೆ ನಿರ್ದೇಶನ ನೀಡಲಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ಬರೆದಿದೆ.

ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಠೇವಣಿಗಳಿಂದ ಹಿಂಪಡೆಯುವಿಕೆಯನ್ನು ಆರ್‌ಬಿಐ ನಿಷೇಧಿಸಿತು. ಆದರೆ ಠೇವಣಿಗಳ ವಿರುದ್ಧ ಸಾಲಗಳನ್ನು ಹೊಂದಿಸಲು ಅವಕಾಶ ಮಾಡಿಕೊಟ್ಟಿತು. ಇದು ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಹಿತೇಶ್ ಮೆಹ್ತಾ ವಿರುದ್ಧ ಕ್ರಿಮಿನಲ್ ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದ್ದು, 122 ಕೋಟಿ ರೂಪಾಯಿ ಮೌಲ್ಯದ ಮೀಸಲು ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿತೇಶ್ ಮೆಹ್ತಾ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಮುಂಬೈನ ಪ್ರಭಾದೇವಿ ಮತ್ತು ಗೋರೆಗಾಂವ್ ಶಾಖೆಗಳ ಮೀಸಲು ನಿಧಿಯನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತೀಯ ದಂಡ ಸಂಹಿತೆ, 2023 ರ ಸೆಕ್ಷನ್ 316(5) 61(2) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

2024ರ ಮಾರ್ಚ್ ವೇಳೆಗೆ ಈ ಬ್ಯಾಂಕ್ 2,436 ಕೋಟಿ ರೂ. ಠೇವಣಿಗಳನ್ನು ಹೊಂದಿತ್ತು. ಠೇವಣಿದಾರರು ಠೇವಣಿ ವಿಮಾ ಯೋಜನೆಯಡಿ 5 ಲಕ್ಷ ರೂಪಾಯಿಗಳವರೆಗಿನ ವಿಮೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಠೇವಣಿದಾರರು ತಮ್ಮ ಕ್ಲೈಮ್‌ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ತಿಳಿಸಲಾಗಿದೆ.

ಸಹಕಾರಿ ಬ್ಯಾಂಕಿನ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವೇನು?

ಈ ಬ್ಯಾಂಕಿನ ದ್ರವ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆರ್ ಬಿಐ ಕ್ರಮ ಕೈಗೊಂಡಿದೆ. ಈ ಬ್ಯಾಂಕಿನ ದ್ರವ್ಯತೆ ಸ್ಥಿತಿಯ ಬಗ್ಗೆ ಕಳವಳಗಳಿವೆ. ಇದರಿಂದಾಗಿ ಆರ್‌ಬಿಐ ಉಳಿತಾಯ, ಚಾಲ್ತಿ ಅಥವಾ ಯಾವುದೇ ಇತರ ಠೇವಣಿ ಖಾತೆಯಿಂದ ಹಣವನ್ನು ಹಿಂಪಡೆಯುವುದರ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡಲು ಈ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT