ಅಕ್ಬರ್ ರಸ್ತೆ online desk
ದೇಶ

Chhaava Effect: ಅಕ್ಬರ್, ಹುಮಾಯೂನ್ ರಸ್ತೆ ಸೂಚನಾ ಫಲಕಗಳಿಗೆ ಕಪ್ಪು ಮಸಿ, ಅದೇ ಜಾಗದಲ್ಲಿ ರಾರಾಜಿಸಿದ ಛತ್ರಪತಿ ಪೋಸ್ಟರ್!

ಅಕ್ಬರ್, ಹುಮಯೂನ್ ರಸ್ತೆಯ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿದು ಪ್ರತಿಭಟನೆ ನಡೆಸಲಾಗುತ್ತಿದ್ದು, ಆ ಜಾಗದಲ್ಲಿ ಛತ್ರಪತಿ ಶಿವಾಜಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಛತ್ರಪತಿ ಸಂಭಾಜಿ ಅವರ ಜೀವನ ಚರಿತ್ರೆಯ ಕಥೆ ಹೊಂದಿರುವ ಛಾವಾ (Chhaava) ಸಿನಿಮಾ ಪ್ರೇಕ್ಷಕರಲ್ಲಿ ಭಾರತೀಯ ಇತಿಹಾಸದೆಡೆಗೆ ಹೆಚ್ಚಿನ ಆಸಕ್ತಿಯನ್ನು ಹೆಚ್ಚಿಸಿದೆ.

ಮೊಘಲರ ದೌರ್ಜನ್ಯವನ್ನು ಮಾರಾಠ ರಾಜರು ಮೆಟ್ಟಿನಿಂತ ಕಥೆಯ ಬಗ್ಗೆ ಛಾವಾ ಸಿನಿಮಾದಲ್ಲಿ ಹೇಳಲಾಗಿದ್ದು ಸಂಭಾಜಿ ಮಹಾರಾಜರ ಜೀವನ ಚರಿತ್ರೆಯನ್ನು ತೆರೆ ಮೇಲೆ ಕಂಡ ಪ್ರೇಕ್ಷಕರು ಭಾವುಕರಾಗಿದ್ದಾರೆ. ಈ ಮಧ್ಯೆ ಈ ಸಿನಿಮಾದ ಪರಿಣಾಮ ಇರಬಹುದು ಎಂಬಂತೆ ದೆಹಲಿಯಲ್ಲಿ ಅಕ್ಬರ್ ರಸ್ತೆ ಮತ್ತು ಹುಮಾಯೂನ್ ರಸ್ತೆಯಲ್ಲಿರುವ ನಾಮಫಲಕಗಳ ಮೇಲೆ ಛತ್ರಪತಿ ಶಿವಾಜಿ ಅವರ ಪೋಸ್ಟರ್ ನ್ನು ಅಂಟಿಸಲಾಗುತ್ತಿದೆ.

ಅಕ್ಬರ್, ಹುಮಯೂನ್ ರಸ್ತೆಯ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿದು ಪ್ರತಿಭಟನೆ ನಡೆಸಲಾಗುತ್ತಿದ್ದು, ಆ ಜಾಗದಲ್ಲಿ ಛತ್ರಪತಿ ಶಿವಾಜಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ವಿಕ್ಕಿ ಕೌಶಲ್ ಅಭಿನಯದ ಛಾವ ಚಲನಚಿತ್ರವನ್ನು ಗುಂಪೊಂದು ವೀಕ್ಷಿಸಿದ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಕೃತ್ಯದ ಅನೇಕ ವೀಡಿಯೊಗಳು ಕಾಣಿಸಿಕೊಂಡಿದ್ದು, ಕೆಲವು ಯುವಕರು ನಾಮಫಲಕಗಳ ಮೇಲೆ ಕಪ್ಪು ಸ್ಪ್ರೇ ಹಚ್ಚುತ್ತಿರುವುದನ್ನು ಮತ್ತು ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯ ಚಿತ್ರಗಳನ್ನು ಅಂಟಿಸುತ್ತಿರುವುದನ್ನು ತೋರಿಸಲಾಗಿದೆ. ಶಿವಾಜಿಯ ಪುತ್ರ ಸಂಭಾಜಿ ಮರಾಠಾ ಸಾಮ್ರಾಜ್ಯದ ಎರಡನೇ ರಾಜನಾಗಿದ್ದರು.

ಘಟನೆ ನಡೆದ ಬೆನ್ನಲ್ಲೆ ಪೊಲೀಸ್ ತಂಡಗಳು ಮತ್ತು ನಾಗರಿಕ ಅಧಿಕಾರಿಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಲಾಗಿದೆ ಮತ್ತು ವಿರೂಪಗೊಂಡ ನಾಮಫಲಕಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಕೃತ್ಯ ಎಸಗಿದವರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮತ್ತಷ್ಟು ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT