ದೇಶ

ತಿರುಪತಿ ಕಾಲ್ತುಳಿತ ಘಟನೆ: TTD ಕ್ಷಮೆಯಾಚನೆ

ಟಿಟಿಡಿ ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಘಟನೆಗೆ ಕ್ಷಮೆಯಾಚಿಸಿ ಟ್ರಸ್ಟ್ ಈ ನಿಟ್ಟಿನಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ತಿರುಪತಿ: ತಿರುಪತಿಯಲ್ಲಿ ಆರು ಜೀವಗಳನ್ನು ಬಲಿ ಪಡೆದ ಕಾಲ್ತುಳಿತ ಪ್ರಕರಣಕ್ಕೆ ತೀವ್ರ ಜನದಟ್ಟಣೆ ಕಾರಣವಾಯಿತು ಎಂದು ತಿರುಮಲ ತಿರುಪತಿ ದೇವಸ್ಥಾನಗಳ (TTD) ಅಧ್ಯಕ್ಷರು ಹೇಳಿದ್ದಾರೆ.

ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಸುದ್ದಿಗಾರರೊಂದಿಗೆ ಮಾತನಾಡಿ, ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೇವೆ.

ಇದೊಂದು ತೀರಾ ದುರದೃಷ್ಟಕರ ಘಟನೆ. ವಿವರವಾದ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದಾರೆ ಎಂದು ಹೇಳಿದರು. ಕಾಲ್ತುಳಿತಕ್ಕೆ ಕಾರಣ (ಕಾಲ್ತುಳಿತ) ಮಿತಿಮೀರಿದ ಜನಸಂದಣಿ. ಇದು ದುರದೃಷ್ಟಕರ ಘಟನೆ. ನಾಳೆ ಸಿಎಂ ಎಲ್ಲವನ್ನೂ ಹೇಳಲಿದ್ದಾರೆ, ಇಂದು ಸಂಪೂರ್ಣ ವರದಿ ಬರಲಿದೆ. ಒಟ್ಟು ಆರು ಜನರು ಮೃತಪಟ್ಟಿದ್ದಾರೆ. ಕೆಲವರು ತಮಿಳುನಾಡಿನವರು ಮತ್ತು ಕೆಲವರು ಆಂಧ್ರಪ್ರದೇಶದವರು. ಇಲ್ಲಿಯವರೆಗೆ ಒಂದು ಶವವನ್ನು ಗುರುತಿಸಲಾಗಿದೆ, ಇನ್ನೂ ಐದು ಜನರನ್ನು ಗುರುತಿಸಬೇಕಾಗಿದೆ ಎಂದರು.

ಟಿಟಿಡಿ ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಘಟನೆಗೆ ಕ್ಷಮೆಯಾಚಿಸಿ ಟ್ರಸ್ಟ್ ಈ ನಿಟ್ಟಿನಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿ ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ, ಕಾಲ್ತುಳಿತದಲ್ಲಿ ಸುಮಾರು 40 ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಗಡಿ ಪರಿಸ್ಥಿತಿಯೇ ಕೀಲಿ.. ಶಾಂತಿ ಇದ್ದರೆ ಮಾತ್ರ ಉತ್ತಮ ಬಾಂಧವ್ಯ’: ಚೀನಾಗೆ S Jaishankar ಸ್ಪಷ್ಟ ಸಂದೇಶ

IAS ಅಧಿಕಾರಿ ನಿಗೂಢ ಕಣ್ಮರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಪತ್ತೆ ಆಗಿಲ್ಲ, ಆದ್ರೆ...: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಗೂರ್ಖಾ ಸಮಸ್ಯೆಗೆ 'ಶಾಶ್ವತ ರಾಜಕೀಯ ಪರಿಹಾರಕ್ಕೆ ಕೇಂದ್ರದಿಂದ ಸಮಿತಿ ರಚನೆ

CAA ಅರ್ಜಿದಾರರಿಗೆ ಗುಡ್‌ನ್ಯೂಸ್: ಹಿಂದೂ, ಸಿಖ್, ಜೈನ ನಿರಾಶ್ರಿತರಿಗೆ 6 ತಿಂಗಳಲ್ಲಿ ಭಾರತೀಯ ಪೌರತ್ವ- Amit shah

Nestle, PepsiCo, Coca-Cola.. ದಿಗ್ಗಜ ಕಂಪನಿಗಳ ವಿರುದ್ಧವೇ ಆಕ್ಷನ್; FSSAI ನೋಟಿಸ್, ಉತ್ಪನ್ನಗಳ ಜಪ್ತಿ ಎಚ್ಚರಿಕೆ!