ಐಐಟಿ ಬಾಬಾ TNIE
ದೇಶ

IIT Baba: ಮಹಾಕುಂಭ ಮೇಳದಲ್ಲಿ ಐಐಟಿ ಪದವೀಧರ ಬಾಬಾ; Aerospace Engineer to 'ಸನ್ಯಾಸ'... ಕಾರಣವಾದ ಘಟನೆ?

ಐಐಟಿ ಬಾಬಾ ಎಂದೂ ಕರೆಯಲ್ಪಡುವ ಗೋರಖ್ ಬಾಬಾ, ಏರೋಸ್ಪೇಸ್ ಮತ್ತು ಏರೋನಾಟಿಕಲ್ ವಿಭಾಗದಲ್ಲಿ ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಪದವಿ ಪಡೆದರು. ಎಂಜಿನಿಯರಿಂಗ್ ನಂತರ ಅವರು ಬಾಬಾ ಆದರು ಎಂಬುದು ಅವರ ಹೆಸರಿನಿಂದಲೇ ಸ್ಪಷ್ಟವಾಗುತ್ತದೆ.

ಪ್ರಯಾಗ್‌ರಾಜ್‌: ಐಐಟಿ ಬಾಬಾ ಎಂದೂ ಕರೆಯಲ್ಪಡುವ ಗೋರಖ್ ಬಾಬಾ, ಏರೋಸ್ಪೇಸ್ ಮತ್ತು ಏರೋನಾಟಿಕಲ್ ವಿಭಾಗದಲ್ಲಿ ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಪದವಿ ಪಡೆದರು. ಎಂಜಿನಿಯರಿಂಗ್ ನಂತರ ಅವರು ಬಾಬಾ ಆದರು ಎಂಬುದು ಅವರ ಹೆಸರಿನಿಂದಲೇ ಸ್ಪಷ್ಟವಾಗುತ್ತದೆ.

ಹರಿಯಾಣ ನಿವಾಸಿಯಾದ ಐಐಟಿ ಬಾಬಾ ಅವರ ನಿಜವಾದ ಹೆಸರು ಅಭಯ್ ಸಿಂಗ್. ಎಂಜಿನಿಯರಿಂಗ್‌ನಿಂದ ಸನ್ಯಾಸಿಯಾಗುವವರೆಗಿನ ಅಭಯ್ ಸಿಂಗ್ ಅವರ ಪ್ರಯಾಣವು ತುಂಬಾ ಆಸಕ್ತಿದಾಯಕವಾಗಿದೆ. ಅವರಿಗೆ ಛಾಯಾಗ್ರಹಣದಲ್ಲಿ ತೀವ್ರ ಆಸಕ್ತಿ ಇತ್ತು. ಈ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಅವರಿಗೆ ಪದವಿಯ ಅಗತ್ಯವಿತ್ತು. ಈ ಕಾರಣಕ್ಕಾಗಿ, ಅವರು ಒಂದು ವರ್ಷ ಕೋಚಿಂಗ್‌ ಪಡೆದಿದ್ದರು.

ನೀವು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ, ನೀವು ತುಂಬಾ ವಿದ್ಯಾವಂತರೆಂದು ತೋರುತ್ತದೆ ಎಂದು ಪತ್ರಕರ್ತರೊಬ್ಬರು ಕೇಳುತ್ತಾರೆ. ಅದಕ್ಕೆ ಬಾಬಾ, ತಾವು ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಓದಿರುವುದಾಗಿ ಹೇಳಿದರು. ಈ ವಿಚಾರ ತಿಳಿದ ನಂತರ ಸಂದರ್ಶಕ ಸ್ವಲ್ಪ ಸಮಯದವರೆಗೆ ಮೌನವಾಗಿದ್ದರು. ನಂತರ ಮತ್ತೆ ಬಾಬಾ ಅವರನ್ನು ನೀವು ನಿಜವಾಗಿಯೂ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಓದಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಹೌದು ಎಂದು ಬಾಬಾ ಉತ್ತರಿಸಿತ್ತಾರೆ. ಅವರ ನಿಜವಾದ ಹೆಸರು ಅಭಯ್ ಸಿಂಗ್ ಎಂದು ತಿಳಿದುಬಂದಿದೆ. ನೀವು ಸನ್ಯಾಸತ್ವ ಯಾಕೆ ಸ್ವೀಕರಿಸಿದ್ರಿ?" ಎಂದು ಸಂದರ್ಶಕರು ಸಿಂಗ್ ಅವರನ್ನು ಕೇಳಿದರು. ಅದಕ್ಕೆ ಸಿಂಗ್ ಮುಗುಳ್ನಗುತ್ತಾ, ಇದು ಅತ್ಯುತ್ತಮ ಮಾರ್ಗ, ಜ್ಞಾನವನ್ನು ಮುಂದುವರಿಸಬೇಕು ಎಂದು ಹೇಳಿದರು.

ತಮ್ಮ ಶೈಕ್ಷಣಿಕ ಯಶಸ್ಸು ಮತ್ತು ತಾಂತ್ರಿಕ ಪರಿಣತಿಯ ಹೊರತಾಗಿಯೂ, ಜ್ಞಾನದ ನಿಜವಾದ ಅನ್ವೇಷಣೆ ಭೌತಿಕ ಪ್ರಪಂಚದ ಆಚೆಗೆ ಇದೆ ಎಂದು ಸಿಂಗ್ ತಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಕುಂಭಮೇಳದಲ್ಲಿ ನಾನು ತೊಡಗಿದ್ದು ಈಗ ತಮ್ಮ ಆಧ್ಯಾತ್ಮಿಕ ಹೆಸರನ್ನು ಮಸಾನಿ ಗೋರಖ್ ಎಂದು ಕರೆದುಕೊಂಡಿದ್ದಾರೆ. ಇದು ಆಳವಾದ ಅರ್ಥದ ಹುಡುಕಾಟದ ಪರಾಕಾಷ್ಠೆಯಾಗಿದೆ ಎಂದು ಅವರು ವಿವರಿಸಿದರು.

ಈ ಹಂತವು ಅತ್ಯುತ್ತಮ ಹಂತವಾಗಿದೆ ಎಂದು ಅವರು ಆಯ್ಕೆ ಮಾಡಿದ ಆಧ್ಯಾತ್ಮಿಕ ಜೀವನವನ್ನು ಉಲ್ಲೇಖಿಸುತ್ತಾ ಹೇಳಿದರು. ಹೆಚ್ಚಿನ ಸಂಬಳದ ವೃತ್ತಿಜೀವನದ ನಿರೀಕ್ಷೆಗಳನ್ನು ಬಿಟ್ಟು ಆಧ್ಯಾತ್ಮಿಕತೆಯನ್ನು ಅನುಸರಿಸುವ ಅವರ ನಿರ್ಧಾರವು ಜ್ಞಾನದ ಅನ್ವೇಷಣೆಯು ಅಂತಿಮವಾಗಿ ಆಳವಾದ, ಹೆಚ್ಚು ಅರ್ಥಪೂರ್ಣ ಅಸ್ತಿತ್ವಕ್ಕೆ ಕಾರಣವಾಗುತ್ತದೆ ಎಂಬ ಅವರ ನಂಬಿಕೆಯಲ್ಲಿ ಬೇರೂರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT