ಐಐಟಿ ಬಾಬಾ TNIE
ದೇಶ

IIT Baba: ಮಹಾಕುಂಭ ಮೇಳದಲ್ಲಿ ಐಐಟಿ ಪದವೀಧರ ಬಾಬಾ; Aerospace Engineer to 'ಸನ್ಯಾಸ'... ಕಾರಣವಾದ ಘಟನೆ?

ಐಐಟಿ ಬಾಬಾ ಎಂದೂ ಕರೆಯಲ್ಪಡುವ ಗೋರಖ್ ಬಾಬಾ, ಏರೋಸ್ಪೇಸ್ ಮತ್ತು ಏರೋನಾಟಿಕಲ್ ವಿಭಾಗದಲ್ಲಿ ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಪದವಿ ಪಡೆದರು. ಎಂಜಿನಿಯರಿಂಗ್ ನಂತರ ಅವರು ಬಾಬಾ ಆದರು ಎಂಬುದು ಅವರ ಹೆಸರಿನಿಂದಲೇ ಸ್ಪಷ್ಟವಾಗುತ್ತದೆ.

ಪ್ರಯಾಗ್‌ರಾಜ್‌: ಐಐಟಿ ಬಾಬಾ ಎಂದೂ ಕರೆಯಲ್ಪಡುವ ಗೋರಖ್ ಬಾಬಾ, ಏರೋಸ್ಪೇಸ್ ಮತ್ತು ಏರೋನಾಟಿಕಲ್ ವಿಭಾಗದಲ್ಲಿ ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಪದವಿ ಪಡೆದರು. ಎಂಜಿನಿಯರಿಂಗ್ ನಂತರ ಅವರು ಬಾಬಾ ಆದರು ಎಂಬುದು ಅವರ ಹೆಸರಿನಿಂದಲೇ ಸ್ಪಷ್ಟವಾಗುತ್ತದೆ.

ಹರಿಯಾಣ ನಿವಾಸಿಯಾದ ಐಐಟಿ ಬಾಬಾ ಅವರ ನಿಜವಾದ ಹೆಸರು ಅಭಯ್ ಸಿಂಗ್. ಎಂಜಿನಿಯರಿಂಗ್‌ನಿಂದ ಸನ್ಯಾಸಿಯಾಗುವವರೆಗಿನ ಅಭಯ್ ಸಿಂಗ್ ಅವರ ಪ್ರಯಾಣವು ತುಂಬಾ ಆಸಕ್ತಿದಾಯಕವಾಗಿದೆ. ಅವರಿಗೆ ಛಾಯಾಗ್ರಹಣದಲ್ಲಿ ತೀವ್ರ ಆಸಕ್ತಿ ಇತ್ತು. ಈ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಅವರಿಗೆ ಪದವಿಯ ಅಗತ್ಯವಿತ್ತು. ಈ ಕಾರಣಕ್ಕಾಗಿ, ಅವರು ಒಂದು ವರ್ಷ ಕೋಚಿಂಗ್‌ ಪಡೆದಿದ್ದರು.

ನೀವು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ, ನೀವು ತುಂಬಾ ವಿದ್ಯಾವಂತರೆಂದು ತೋರುತ್ತದೆ ಎಂದು ಪತ್ರಕರ್ತರೊಬ್ಬರು ಕೇಳುತ್ತಾರೆ. ಅದಕ್ಕೆ ಬಾಬಾ, ತಾವು ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಓದಿರುವುದಾಗಿ ಹೇಳಿದರು. ಈ ವಿಚಾರ ತಿಳಿದ ನಂತರ ಸಂದರ್ಶಕ ಸ್ವಲ್ಪ ಸಮಯದವರೆಗೆ ಮೌನವಾಗಿದ್ದರು. ನಂತರ ಮತ್ತೆ ಬಾಬಾ ಅವರನ್ನು ನೀವು ನಿಜವಾಗಿಯೂ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಓದಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಹೌದು ಎಂದು ಬಾಬಾ ಉತ್ತರಿಸಿತ್ತಾರೆ. ಅವರ ನಿಜವಾದ ಹೆಸರು ಅಭಯ್ ಸಿಂಗ್ ಎಂದು ತಿಳಿದುಬಂದಿದೆ. ನೀವು ಸನ್ಯಾಸತ್ವ ಯಾಕೆ ಸ್ವೀಕರಿಸಿದ್ರಿ?" ಎಂದು ಸಂದರ್ಶಕರು ಸಿಂಗ್ ಅವರನ್ನು ಕೇಳಿದರು. ಅದಕ್ಕೆ ಸಿಂಗ್ ಮುಗುಳ್ನಗುತ್ತಾ, ಇದು ಅತ್ಯುತ್ತಮ ಮಾರ್ಗ, ಜ್ಞಾನವನ್ನು ಮುಂದುವರಿಸಬೇಕು ಎಂದು ಹೇಳಿದರು.

ತಮ್ಮ ಶೈಕ್ಷಣಿಕ ಯಶಸ್ಸು ಮತ್ತು ತಾಂತ್ರಿಕ ಪರಿಣತಿಯ ಹೊರತಾಗಿಯೂ, ಜ್ಞಾನದ ನಿಜವಾದ ಅನ್ವೇಷಣೆ ಭೌತಿಕ ಪ್ರಪಂಚದ ಆಚೆಗೆ ಇದೆ ಎಂದು ಸಿಂಗ್ ತಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಕುಂಭಮೇಳದಲ್ಲಿ ನಾನು ತೊಡಗಿದ್ದು ಈಗ ತಮ್ಮ ಆಧ್ಯಾತ್ಮಿಕ ಹೆಸರನ್ನು ಮಸಾನಿ ಗೋರಖ್ ಎಂದು ಕರೆದುಕೊಂಡಿದ್ದಾರೆ. ಇದು ಆಳವಾದ ಅರ್ಥದ ಹುಡುಕಾಟದ ಪರಾಕಾಷ್ಠೆಯಾಗಿದೆ ಎಂದು ಅವರು ವಿವರಿಸಿದರು.

ಈ ಹಂತವು ಅತ್ಯುತ್ತಮ ಹಂತವಾಗಿದೆ ಎಂದು ಅವರು ಆಯ್ಕೆ ಮಾಡಿದ ಆಧ್ಯಾತ್ಮಿಕ ಜೀವನವನ್ನು ಉಲ್ಲೇಖಿಸುತ್ತಾ ಹೇಳಿದರು. ಹೆಚ್ಚಿನ ಸಂಬಳದ ವೃತ್ತಿಜೀವನದ ನಿರೀಕ್ಷೆಗಳನ್ನು ಬಿಟ್ಟು ಆಧ್ಯಾತ್ಮಿಕತೆಯನ್ನು ಅನುಸರಿಸುವ ಅವರ ನಿರ್ಧಾರವು ಜ್ಞಾನದ ಅನ್ವೇಷಣೆಯು ಅಂತಿಮವಾಗಿ ಆಳವಾದ, ಹೆಚ್ಚು ಅರ್ಥಪೂರ್ಣ ಅಸ್ತಿತ್ವಕ್ಕೆ ಕಾರಣವಾಗುತ್ತದೆ ಎಂಬ ಅವರ ನಂಬಿಕೆಯಲ್ಲಿ ಬೇರೂರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?