ಸಾಂದರ್ಭಿಕ ಚಿತ್ರ  
ದೇಶ

ಪರಮಾಣು ವಿದ್ಯುತ್ ಉತ್ಪಾದನೆ: ಖಾಸಗಿ ವಲಯಗಳಿಂದ ಹೂಡಿಕೆಗೆ ಕೇಂದ್ರ ಸರ್ಕಾರ ಕ್ರಮ

ಯೋಜನಾ ಪೂರ್ವ ಹಂತಗಳು, ನಿರ್ವಹಣೆ, ಹಾನಿಯ ಸಂದರ್ಭದಲ್ಲಿ ಆಸ್ತಿ ಮರುಸ್ಥಾಪನೆ ಮತ್ತು ನಿಷ್ಕ್ರಿಯಗೊಳಿಸುವಿಕೆ ಸೇರಿದಂತೆ ಎಲ್ಲಾ ಬಂಡವಾಳ ಮತ್ತು ನಿರ್ವಹಣಾ ವೆಚ್ಚಗಳಿಗೆ ಬಳಕೆದಾರರು ಜವಾಬ್ದಾರರಾಗಿರುತ್ತಾರೆ.

ನವದೆಹಲಿ: ಕಳೆದ ವರ್ಷ ಲೋಕಸಭೆ ಚುನಾವಣೆ ನಂತರ ಕೇಂದ್ರ ಬಜೆಟ್ ನಲ್ಲಿ ಮಾಡಿದ ಘೋಷಣೆಗೆ ಅನುಗುಣವಾಗಿ ಮತ್ತು ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಪಾಲುದಾರರಿಗೆ ಸಕಾರಾತ್ಮಕ ಸೂಚನೆ ನೀಡುವ ಕಾರ್ಯತಂತ್ರದ ಕ್ರಮದ ಭಾಗವಾಗಿ ಕೇಂದ್ರ ಸರ್ಕಾರವು ಪರಮಾಣು ವಲಯವನ್ನು ಖಾಸಗಿ ಹೂಡಿಕೆಗೆ ಮುಕ್ತಗೊಳಿಸಲು ಕ್ರಮಗಳನ್ನು ತೆಗೆದುಕೊಂಡಿದೆ.

ದೇಶದ ಏಕೈಕ ಪರಮಾಣು ವಿದ್ಯುತ್ ನಿರ್ವಾಹಕವಾದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL), ಪ್ರಸ್ತಾವನೆಗಳಿಗಾಗಿ ವಿನಂತಿಯನ್ನು (RFP) ಹೊರಡಿಸಿದ್ದು, ಸರ್ಕಾರಿ ನಿಯಮಗಳ ಪ್ರಕಾರ ಕ್ಯಾಪ್ಟಿವ್ ಬಳಕೆ ಮತ್ತು ವಿದ್ಯುತ್ ಮಾರಾಟಕ್ಕಾಗಿ 220 ಮೆಗಾ ವ್ಯಾಟ್ ಭಾರತ್ ಸ್ಮಾಲ್ ರಿಯಾಕ್ಟರ್‌ಗಳ (BSRs) ಪ್ರಸ್ತಾವಿತ ಉದ್ದೇಶಗಳಿಗೆ ಹಣಕಾಸು ಒದಗಿಸಲು ಭಾರತೀಯ ಕೈಗಾರಿಕೆಗಳನ್ನು ಆಹ್ವಾನಿಸಿದೆ ಎಂದು ಸಾರ್ವಜನಿಕ ವಲಯ ಘಟಕ ತಿಳಿಸಿದೆ.

ಪ್ರಸ್ತಾವನೆಗಳನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಅಂತಹ ಪರಮಾಣು ರಿಯಾಕ್ಟರ್‌ಗಳ ಸ್ಥಾಪನೆಯು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಮೂಲಕ 2070 ರ ಸರ್ಕಾರದ ಶೂನ್ಯ ಹೊರಸೂಸುವಿಕೆ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಮಾಣು ಶಕ್ತಿ ನವೀಕರಿಸಬಹುದಾದ ಶಕ್ತಿಯಲ್ಲ ಆದರೆ ಇದು ಶೂನ್ಯ-ಹೊರಸೂಸುವ ಶುದ್ಧ ಇಂಧನ ಮೂಲವಾಗಿದೆ.

ಬಿಎಸ್ ಆರ್ ಗಳನ್ನು ಖಾಸಗಿ ಬಂಡವಾಳದೊಂದಿಗೆ ಸ್ಥಾಪಿಸಲು ಉದ್ದೇಶಿಸಲಾಗಿದೆ, ಈಗಿರುವ ಕಾನೂನು ಚೌಕಟ್ಟು ಮತ್ತು ಅನುಮೋದಿತ ವ್ಯವಹಾರ ಮಾದರಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕಾರ್ಯಾಚರಣೆಯ ಉದ್ದೇಶಗಳಿಗಾಗಿ, ಸ್ಥಾವರ ಸ್ವತ್ತುಗಳನ್ನು ಎನ್ ಪಿಸಿಐಎಲ್ ಗೆ ವರ್ಗಾಯಿಸಲಾಗುತ್ತದೆ. ಭಾರತೀಯ ಕಾನೂನುಗಳ ಪ್ರಕಾರ, ಎನ್ ಪಿಸಿಐಎಲ್ ದೇಶದ ಪರಮಾಣು ವಿದ್ಯುತ್ ಸ್ಥಾವರಗಳ ಏಕೈಕ ನಿರ್ವಾಹಕವಾಗಿದೆ. ಬಳಕೆದಾರರು ಉತ್ಪಾದಿಸಿದ ಶಕ್ತಿಯನ್ನು ತನ್ನದೇ ಆದ ಕ್ಯಾಪ್ಟಿವ್ ಅಗತ್ಯಗಳಿಗಾಗಿ ಬಳಸಬೇಕೆಂದು ನಿರೀಕ್ಷಿಸಲಾಗಿದೆ. ಆದರೆ ಭಾರತೀಯ ಕಾನೂನುಗಳಿಗೆ ಅನುಸಾರವಾಗಿ ಪರಮಾಣು ಇಂಧನ ಇಲಾಖೆ ನಿಗದಿಪಡಿಸಿದ ಸುಂಕದಲ್ಲಿ ಇತರ ಗ್ರಾಹಕರಿಗೆ ವಿದ್ಯುತ್ ನ್ನು ಮಾರಾಟ ಮಾಡಬಹುದು.

ಯೋಜನಾ ಪೂರ್ವ ಹಂತಗಳು, ನಿರ್ವಹಣೆ, ಹಾನಿಯ ಸಂದರ್ಭದಲ್ಲಿ ಆಸ್ತಿ ಮರುಸ್ಥಾಪನೆ ಮತ್ತು ನಿಷ್ಕ್ರಿಯಗೊಳಿಸುವಿಕೆ ಸೇರಿದಂತೆ ಎಲ್ಲಾ ಬಂಡವಾಳ ಮತ್ತು ನಿರ್ವಹಣಾ ವೆಚ್ಚಗಳಿಗೆ ಬಳಕೆದಾರರು ಜವಾಬ್ದಾರರಾಗಿರುತ್ತಾರೆ. ಎನ್ ಪಿಸಿಐಎಲ್ ನ ಮೇಲ್ವಿಚಾರಣೆಯಲ್ಲಿ ಬಳಕೆದಾರರು ಯೋಜನೆಯನ್ನು ನಿರ್ಮಿಸುತ್ತಾರೆ ಮತ್ತು ಪೂರ್ಣಗೊಂಡ ನಂತರ, ಸ್ಥಾವರವನ್ನು ಕಾರ್ಯಾಚರಣೆಗಾಗಿ ಎನ್ ಪಿಸಿಐಎಲ್ ಗೆ ವರ್ಗಾಯಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 4 ರಂದು ಲೋಕಸಭೆಗೆ ಲಿಖಿತ ಪ್ರತಿಕ್ರಿಯೆಯಾಗಿ ತನ್ನ ಪರಮಾಣು ವಿದ್ಯುತ್ ಕಾರ್ಯಕ್ರಮದ ಭಾಗವಾಗಿ ಬಿಎಸ್‌ಆರ್‌ಗಳಿಗಾಗಿ ಸರ್ಕಾರದ ದೃಷ್ಟಿಕೋನವನ್ನು ವಿವರಿಸಿದ ಕೇಂದ್ರ ವಿದ್ಯುತ್ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರ ಹೇಳಿಕೆಯ ನಂತರ ಆರ್‌ಎಫ್‌ಪಿ ಘೋಷಣೆ ಮಾಡಲಾಗಿದೆ.

ಭಾರತ್ ಶೂನ್ಯ ರಿಯಾಕ್ಟರ್‌ಗಳು 220 ಮೆಗಾ ವ್ಯಾಟ್ ಒತ್ತಡದ ಭಾರೀ ನೀರಿನ ರಿಯಾಕ್ಟರ್‌ಗಳಾಗಿವೆ, ಭಾರತವು ಈಗಾಗಲೇ 220 ಮೆಗಾವ್ಯಾಟ್ ಒತ್ತಡದ ಭಾರೀ ನೀರಿನ ರಿಯಾಕ್ಟರ್ ವಿನ್ಯಾಸವನ್ನು ನಿರ್ವಹಿಸುತ್ತಿದೆ, ಅವುಗಳಲ್ಲಿ ಹಲವು ಉತ್ತರ ಪ್ರದೇಶದ ನರೋರಾ ಮತ್ತು ಗುಜರಾತ್‌ನ ಕಾಕ್ರಾಪರ್ ಸೇರಿದಂತೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT