ಸುನೀತಾ ಸಾವಂತ್ PTI
ದೇಶ

ಇದೇ ಮೊದಲು, ವೈರ್‌ಲೆಸ್‌ ಮೂಲಕ ವರ್ಗಾವಣೆ ಆದೇಶ: ಬಜರಂಗದಳದ ಕುರಿತು ಮಾಹಿತಿ ಸಂಗ್ರಹಕ್ಕೆ ಮುಂದಾದ ಎಸ್‌ಪಿ ಸುನೀತಾ ಸಾವಂತ್ ಎತ್ತಂಗಡಿ!

ಕ್ಯಾಲಂಗುಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆಗೆದುಹಾಕುವುದರ ವಿರುದ್ಧ ಮೊದಲ ಬಾರಿಗೆ ಬಜರಂಗದಳ ಬಹಿರಂಗ ಪ್ರತಿಭಟನೆ ಮಾಡಿತ್ತು.

ಪಣಜಿ: ದಕ್ಷಿಣ ಗೋವಾದ ಎಸ್‌ಪಿ ಸುನೀತಾ ಸಾವಂತ್ ಅವರನ್ನು ಸೋಮವಾರ ತಡರಾತ್ರಿ ವರ್ಗಾವಣೆ ಮಾಡಲಾಗಿದೆ. ಹಿಂದೂ ಸಂಘಟನೆ ಭಜರಂಗದಳದ ಹಿರಿಯ ಅಧಿಕಾರಿಗಳು ಮತ್ತು ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಲು ಅವರು ವೈರ್‌ಲೆಸ್ ಸಂದೇಶವನ್ನು ಕಳುಹಿಸಿದ್ದರು. ನಂತರ ಅದೇ ವೈರ್‌ಲೆಸ್ ಸಂದೇಶದ ಮೂಲಕ ಸುನೀತಾ ಸಾವಂತ್ ಅವರನ್ನು ವರ್ಗಾವಣೆ ಮಾಡಿದ್ದಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ, ಎಸ್‌ಪಿ ಮಟ್ಟದ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸುತ್ತದೆ, ಆದರೆ ಈ ಸಂದರ್ಭದಲ್ಲಿ, ಗೋವಾ ಪೊಲೀಸರು ಎಸ್‌ಪಿ ಸುನೀಲಾ ಸಾವಂತ್ ಅವರನ್ನು ವೈರ್‌ಲೆಸ್ ಸಂದೇಶದ ಮೂಲಕ ವರ್ಗಾಯಿಸಿದರು.

ಈಗ ಮಾದಕ ದ್ರವ್ಯ ವಿರೋಧಿ ಘಟಕದ ಎಸ್‌ಪಿ ಟಿಕಮ್ ಸಿಂಗ್ ವರ್ಮಾ ಅವರನ್ನು ದಕ್ಷಿಣ ಗೋವಾದ ಹೊಸ ಎಸ್‌ಪಿಯಾಗಿ ನೇಮಿಸಲಾಗಿದೆ. ಸೋಮವಾರ ಬೆಳಿಗ್ಗೆ ಸುನೀತಾ ಸಾವಂತ್ ಕಳುಹಿಸಿದ ಸಂದೇಶದ ಆಧಾರದ ಮೇಲೆ, ಪೊಲೀಸ್ ಠಾಣೆಗಳು ಭಜರಂಗದಳ ನಾಯಕರು ಮತ್ತು ಸದಸ್ಯರ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯ ಬಜರಂಗದಳದ ಹಿರಿಯ ಕಾರ್ಯಕರ್ತರಿಗೆ ತಿಳಿದ ತಕ್ಷಣ, ಅವರನ್ನು ದಕ್ಷಿಣ ಗೋವಾದಿಂದ ಬೇರೆಡೆಗೆ ವರ್ಗಾಯಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು.

ಇದರಿಂದಾಗಿ ಗೋವಾ ಪೊಲೀಸರು ಸುನೀತಾ ಸಾವಂತ್ ಅವರನ್ನು ಕಚೇರಿ ಖಾಲಿ ಮಾಡುವಂತೆ ಕೇಳಿಕೊಂಡಿದ್ದು ಅವರ ವರ್ಗಾವಣೆ ಆದೇಶವನ್ನು ವೈರ್‌ಲೆಸ್ ಮೂಲಕ ತಿಳಿಸಲಾಗಿದೆ. ಇದಾದ ನಂತರ, ಸುನೀತಾ ಸಾವಂತ್ ಅವರಿಗೆ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಯಿತು. 2023ರಿಂದ ಬಜರಂಗದಳವು ರಾಜ್ಯದಲ್ಲಿ ಕ್ರಮೇಣ ಸಕ್ರಿಯವಾಗುತ್ತಿದೆ. ರಾಜ್ಯದಲ್ಲಿ ಬಜರಂಗದಳ ಸದಸ್ಯರ ಪ್ರತಿಭಟನೆಗಳು ಹಲವು ಬಾರಿ ನಡೆದಿವೆ. ಕ್ಯಾಲಂಗುಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆಗೆದುಹಾಕುವುದರ ವಿರುದ್ಧ ಮೊದಲ ಬಾರಿಗೆ ಬಜರಂಗದಳ ಬಹಿರಂಗ ಪ್ರತಿಭಟನೆ ಮಾಡಿತ್ತು.

ಇದಲ್ಲದೆ, ಸುನೀತಾ ಸಾವಂತ್ ಅವರ ವರ್ಗಾವಣೆಗೆ ದಕ್ಷಿಣ ಗೋವಾದಲ್ಲಿ ಇತ್ತೀಚೆಗೆ ನಡೆದ ಘಟನೆಯೂ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಲು ಆತನ ಮನೆಗೆ ಭೇಟಿ ನೀಡಿದ್ದರು. ಆ ವ್ಯಕ್ತಿಯ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಯಿತು. ಆದರೆ ಪೊಲೀಸರಿಗೆ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT