ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್ 
ದೇಶ

Hyderabad: ನಗರದ ಸಿಟಿ ಸಿವಿಲ್ ಕೋರ್ಟ್ ಗೆ ಬಾಂಬ್ ಬೆದರಿಕೆ! ಆತಂಕದ ವಾತವಾರಣ

ನ್ಯಾಯಾಲಯ ಸ್ಫೋಟಗೊಂಡ 23 ನಿಮಿಷಗಳ ನಂತರ ಜಿಮ್ ಖಾನ ಕ್ಲಬ್ ಹೈದರಾಬಾದ್ ಸ್ಫೋಟಗೊಳ್ಳಲಿದೆ ಎಂದು ಇ-ಮೇಲ್ ಸಂದೇಶದಲ್ಲಿ ಹೇಳಲಾಗಿದೆ.

ಹೈದ್ರಾಬಾದ್: ನಗರದ ಸಿಟಿ ಸಿವಿಲ್ ಕೋರ್ಟ್, ರಾಜ ಭವನ ಮತ್ತು ಜಿಮ್ ಖಾನ ಕ್ಲಬ್ ಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ನಂತರ ಮಂಗಳವಾರ ಸ್ಥಳದಲ್ಲಿ ಆತಂಕದ ವಾತವಾರಣ ನಿರ್ಮಾಣವಾಯಿತು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಎಲ್ಲಾ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

ನಗರದ ಸಿವಿಲ್ ಕೋರ್ಟ್ ಮತ್ತು ಜಿಮ್ ಖಾನ ಕ್ಲಬ್ ನಲ್ಲಿ 4 ಆರ್ ಡಿಎಕ್ಸ್ ಆಧಾರಿತ ಸುಧಾರಿತ ಸ್ಫೋಟಕ ವಸ್ತು (IED) ಇಟ್ಟಿದ್ದು, ಅವುಗಳು ಮಂಗಳವಾರ ಸ್ಫೋಟಗೊಳ್ಳಲಿವೆ. ಎಲ್ಲಾ ಜಡ್ಜ್ ಗಳು, ಸಿಬ್ಬಂದಿ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಅಪರಿಚಿತ ವ್ಯಕ್ತಿಯೋರ್ವ ಸಿಟಿ ಸಿವಿಲ್ ಕೋರ್ಟ್ ಮತ್ತು ಜಿಮ್ ಖಾನ ಕ್ಲಬ್ ಗೆ ಕಳುಹಿಸಿದ ಇ-ಮೇಲ್ ಬೆದರಿಕೆ ಸಂದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೇ, ಸ್ಪೋಟದ ಕಡಿಮೆ ತೀವ್ರತೆ ಹಾಗೂ ಸಾವು ನೋವು ಹೆಚ್ಚಿನ ಪ್ರಮಾಣದಲ್ಲಿ ಆಗದಿರಲಿ ಎಂಬ ಉದ್ದೇಶದಿಂದ ನಾಲ್ಕು RDX 800-ಬೇಸ್ ಫ್ಯೂಸ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ ಎಂದು ಇಮೇಲ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

ದಯವಿಟ್ಟು ನ್ಯಾಯಾಲಯದ ಆವರಣದಿಂದ ಎಲ್ಲಾ ನ್ಯಾಯಾಧೀಶರು, ದೂರುದಾರರನ್ನು ಸ್ಥಳಾಂತರಿಸಿ. ನ್ಯಾಯಾಲಯ ಸ್ಫೋಟಗೊಂಡ 23 ನಿಮಿಷಗಳ ನಂತರ ಜಿಮ್ ಖಾನ ಕ್ಲಬ್ ಹೈದರಾಬಾದ್ ಸ್ಫೋಟಗೊಳ್ಳಲಿದೆ ಎಂದು ಇ-ಮೇಲ್ ಸಂದೇಶದಲ್ಲಿ ಹೇಳಲಾಗಿದೆ.

ತದನಂತರ ಪೊಲೀಸರು ಸಿವಿಲ್ ಕೋರ್ಟ್ ಹಾಗೂ ಜಿಮ್ ಖಾನ್ ಹಾಗೂ ರಾಜಭವನದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಇ-ಮೇಲ್‌ನ ಮೂಲ ಪತ್ತೆಹಚ್ಚಲು ಮತ್ತು ಕಳುಹಿಸುವವರನ್ನು ಗುರುತಿಸಲು ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT