ಯೋಗೇಶ್ ಅರ್ಜುನ್ ಚವಾಣ್ - ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿ ರಕ್ಷಣೆ 
ದೇಶ

ಪುಣೆ: ಅಪಾರ್ಟ್‌ಮೆಂಟ್‌‌ನ ಮೂರನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ 4 ವರ್ಷದ ಬಾಲಕಿ ರಕ್ಷಣೆ!

'ನಾನು ಕರ್ತವ್ಯದಲ್ಲಿದ್ದರೂ ಅಥವಾ ಇಲ್ಲದಿದ್ದರೂ ಇದು ನನ್ನ ಕೆಲಸ. ಜೀವಗಳನ್ನು ಉಳಿಸುವುದು ನನ್ನ ಪ್ರಮುಖ ಗುರಿಯಾಗಿದೆ' ಎಂದು ಚವಾಣ್ ರಕ್ಷಣಾ ಕಾರ್ಯಾಚರಣೆಯ ನಂತರ ಹೇಳಿದರು.

ಕತ್ರಜ್: ಪುಣೆಯ ಕತ್ರಜ್‌ನ ಖೋಪ್ಡೆ ನಗರ ಪ್ರದೇಶದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೂರನೇ ಮಹಡಿಯ ಕಿಟಕಿಯಿಂದ ಹೊರಬಂದು ನೇತಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಯೋಗೇಶ್ ಅರ್ಜುನ್ ಚವಾಣ್ ರಕ್ಷಿಸಿದ್ದು, ಈ ಮೂಲಕ ದೊಡ್ಡ ದುರಂತವೊಂದು ತಪ್ಪಿದೆ.

ಮಾಹಿತಿ ಪ್ರಕಾರ, ಕೊಥ್ರುಡ್ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚವಾಣ್ ರಜೆಯ ಮೇಲೆ ಮನೆಯಲ್ಲಿದ್ದಾಗ ಹೊರಗೆ ಗದ್ದಲ ಕೇಳಿಸಿದೆ. ಮಂಗಳವಾರ ಬೆಳಿಗ್ಗೆ 9.06ರ ಸುಮಾರಿಗೆ, ಸೋನಾವಾನೆ ಕಟ್ಟಡದ ಬಳಿ ನೆರೆಮನೆಯ ಉಮೇಶ್ ಸುತಾರ್ ಎಂಬುವವರು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಗಮನಿಸಿದ್ದಾರೆ. ಏನೆಂದು ನೋಡಲು ಚವಾಣ್ ತಮ್ಮ ಗ್ಯಾಲರಿಗೆ ಹೋದಾಗ, ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ಮಲಗುವ ಕೋಣೆಯ ಕಿಟಕಿಯಿಂದ ಮಗುವೊಂದು ಅಪಾಯಕಾರಿಯಾಗಿ ನೇತಾಡುತ್ತಿರುವುದನ್ನು ನೋಡಿದ್ದಾರೆ.

ಕೂಡಲೇ ಚವಾಣ್ ಅವರು ಆ ಕಟ್ಟಡದತ್ತ ಧಾವಿಸಿದ್ದಾರೆ. ಆ ಮಹಡಿ ತಲುಪಿದಾಗ, ಬಾಗಿಲು ಲಾಕ್ ಆಗಿರುವುದನ್ನು ಮತ್ತು ಬಾಲಕಿ ಒಬ್ಬಳೇ ಒಳಗೆ ಇರುವುದನ್ನು ಗಮನಿಸಿದ್ದಾರೆ. ಬಾಲಕಿಯ ತಾಯಿ ಸ್ವಲ್ಪ ಸಮಯದ ಮುನ್ನ ತನ್ನ ಇನ್ನೊಂದು ಮಗುವನ್ನು ಶಾಲೆಗೆ ಬಿಡಲು ಹೋಗಿರುವುದು ತಿಳಿದುಬಂದಿದೆ.

ಅಷ್ಟೊತ್ತಿಗಾಗಲೇ ಆ ಬಾಲಕಿಯ ತಾಯಿ ಕೂಡ ಬಂದಿದ್ದಾರೆ. ಅವರಿಂದ ಮನೆಯ ಬೀಗ ತೆಗೆದ ಕೂಡಲೇ ಚವಾಣ್ ಅವರು ಬೇಗನೆ ಅಪಾರ್ಟ್ಮೆಂಟ್ ಪ್ರವೇಶಿಸಿದ್ದಾರೆ ಮತ್ತು ಜಾರಿಬೀಳುವ ಮೊದಲು ಮಗುವನ್ನು ಸುರಕ್ಷಿತವಾಗಿ ಮೇಲೆಳೆದುಕೊಂಡಿದ್ದಾರೆ.

'ನಾನು ಕರ್ತವ್ಯದಲ್ಲಿದ್ದರೂ ಅಥವಾ ಇಲ್ಲದಿದ್ದರೂ ಇದು ನನ್ನ ಕೆಲಸ. ಜೀವಗಳನ್ನು ಉಳಿಸುವುದು ನನ್ನ ಪ್ರಮುಖ ಗುರಿಯಾಗಿದೆ' ಎಂದು ಚವಾಣ್ ರಕ್ಷಣಾ ಕಾರ್ಯಾಚರಣೆಯ ನಂತರ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?