86 ಶಸ್ತ್ರಾಸ್ತ್ರ, 974 ಮದ್ದುಗುಂಡುಗಳು ಜಪ್ತಿ 
ದೇಶ

ಮಣಿಪುರ: ಪ್ರಮುಖ ಕಾರ್ಯಾಚರಣೆಯಲ್ಲಿ 86 ಶಸ್ತ್ರಾಸ್ತ್ರ, 974 ಮದ್ದುಗುಂಡುಗಳು ಜಪ್ತಿ

"ಮಣಿಪುರ ಪೊಲೀಸ್, CAPFs, ಸೇನೆ ಮತ್ತು ಅಸ್ಸಾಂ ರೈಫಲ್ಸ್‌ಗಳನ್ನು ಒಳಗೊಂಡ ಜಂಟಿ ತಂಡ, ಏಕಕಾಲದಲ್ಲಿ ಅನೇಕ ಸ್ಥಳಗಳಲ್ಲಿ ಸಂಘಟಿತ ಕಾರ್ಯಾಚರಣೆ ನಡೆಸಿದವು"

ಇಂಫಾಲ್: ಅಕ್ರಮ ಶಸ್ತ್ರಾಸ್ತ್ರಗಳ ವಿರುದ್ಧ ಮಂಗಳವಾರ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು ಮಣಿಪುರದ ಐದು ಕಣಿವೆಯ ಜಿಲ್ಲೆಗಳಲ್ಲಿ ನಡೆಸಿದ ಸಂಘಟಿತ ಕಾರ್ಯಾಚರಣೆಯಲ್ಲಿ 86 ಶಸ್ತ್ರಾಸ್ತ್ರಗಳು ಮತ್ತು 974 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಮಣಿಪುರ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPFs), ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡಗಳು ಇಂಫಾಲ್ ಪೂರ್ವ, ಕಾಕ್ಚಿಂಗ್, ಇಂಫಾಲ್ ಪಶ್ಚಿಮ, ತೌಬಲ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದವು ಎಂದು ಐಜಿಪಿ(ವಲಯ-II) ಕೆ ಕಬೀಬ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಮಣಿಪುರ ಪೊಲೀಸ್, CAPFs, ಸೇನೆ ಮತ್ತು ಅಸ್ಸಾಂ ರೈಫಲ್ಸ್‌ಗಳನ್ನು ಒಳಗೊಂಡ ಜಂಟಿ ತಂಡ, ಏಕಕಾಲದಲ್ಲಿ ಅನೇಕ ಸ್ಥಳಗಳಲ್ಲಿ ಸಂಘಟಿತ ಕಾರ್ಯಾಚರಣೆ ನಡೆಸಿದವು" ಎಂದು ಅವರು ಹೇಳಿದರು.

ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಐದು ಎಕೆ ರೈಫಲ್‌ಗಳು, ಮೂರು ಐಎನ್‌ಎಸ್‌ಎಎಸ್ ರೈಫಲ್‌ಗಳು, 16 ಎಸ್‌ಎಲ್‌ಆರ್‌ಗಳು, ಐದು .303 ರೈಫಲ್‌ಗಳು, 19 ಪಿಸ್ತೂಲ್‌ಗಳು, ಎರಡು ಕಾರ್ಬೈನ್‌ಗಳು, ಒಂಬತ್ತು ಇತರ ರೀತಿಯ ರೈಫಲ್‌ಗಳು ಮತ್ತು 16 ಸಿಂಗಲ್-ಬ್ಯಾರೆಲ್ ಗನ್‌ಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.

“ಒಟ್ಟು 86 ಶಸ್ತ್ರಾಸ್ತ್ರಗಳು, 974 ವಿವಿಧ ರೀತಿಯ ಗ್ರೆನೇಡ್‌ಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಮಾರ್ಟರ್ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಲವತ್ತೊಂದು ಮ್ಯಾಗಜೀನ್‌ಗಳು ಮತ್ತು ಆರು ವೈರ್‌ಲೆಸ್ ಹ್ಯಾಂಡ್‌ಸೆಟ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.

ಶಾಂತಿಯನ್ನು ಪುನಃಸ್ಥಾಪಿಸಲು, ಸಾರ್ವಜನಿಕ ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ಮತ್ತು ಜೀವ ಹಾಗೂ ಆಸ್ತಿಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಈ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವಿಕೆಯು ಮಹತ್ವದ ಸಾಧನೆಯಾಗಿದೆ ಎಂದು ಕಬೀಬ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು! ತನಿಖೆಗೆ IAF ಆದೇಶ

ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ; ಶಾಸಕರಿಗೆ ಡಿಸಿಎಂ ಗಾಳ?: ಪರಪ್ಪನ ಅಗ್ರಹಾರಕ್ಕೆ ಡಿಕೆ ಶಿವಕುಮಾರ್ ಭೇಟಿ!

ಹೈಕಮಾಂಡ್ ಎಂದೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ; ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

'ನಾನು ಇನ್ನು ಮುಂದೆ ಈ SIR ಕೆಲಸ ಮಾಡಲು ಸಾಧ್ಯವಿಲ್ಲ': ಕೆಲಸದ ಒತ್ತಡದಿಂದ ಗುಜರಾತ್ ಶಿಕ್ಷಕ ಆತ್ಮಹತ್ಯೆ

Karnataka Politics: 'ನನ್ ಹತ್ರ ಯಾವ್ ಬಣ್ಣನೂ ಇಲ್ಲ.. ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ': ಡಿಕೆ ಶಿವಕುಮಾರ್, Video

SCROLL FOR NEXT