ಏರ್ ಇಂಡಿಯಾ ವಿಮಾನ ಪತನ 
ದೇಶ

Air India ವಿಮಾನ ಅಪಘಾತದ ಬಗ್ಗೆ 'ಅಗತ್ಯ' ಮಾಹಿತಿ ನಾವೇ ಪ್ರಕಟಿಸುತ್ತೀವಿ: ಅಂತಾರಾಷ್ಟ್ರೀಯ ಮಾಧ್ಯಮಗಳ 'ಬೇಜವಾಬ್ದಾರಿ' ವರದಿ ಕುರಿತು AAIB ಖಂಡನೆ!

ತನಿಖಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಅಕಾಲಿಕ ನಿರೂಪಣೆಗಳನ್ನು ಹರಡುವುದನ್ನು ನಾವು ಸಾರ್ವಜನಿಕರು ಮತ್ತು ಮಾಧ್ಯಮಗಳು ತಡೆಯಬೇಕೆಂದು ಒತ್ತಾಯಿಸುತ್ತೇವೆ.

ನವದೆಹಲಿ: 260ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹೊಸ ಮಾಹಿತಿಗಳನ್ನು ನಾವೇ ಪ್ರಕಟಿಸುತ್ತೀವಿ ಎಂದು ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಹೇಳಿದೆ.

ವಿಮಾನ ಅಪಘಾತದಿಂದಾಗಿ ಸಾವನ್ನಪ್ಪಿದ ಪ್ರಯಾಣಿಕರು, ಸಿಬ್ಬಂದಿ ಮತ್ತು ಇತರರ ಕುಟುಂಬ ಸದಸ್ಯರ ಸೂಕ್ಷ್ಮತೆಯನ್ನು ಗೌರವಿಸುವುದು ಅತ್ಯಗತ್ಯ ಎಂದು ತನಿಖಾ ಸಂಸ್ಥೆ ಒತ್ತಿಹೇಳಿದೆ. ತಾಂತ್ರಿಕ, ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ ತನಿಖೆಗೆ ಸಂಬಂಧಿಸಿದ ವಿವರಗಳನ್ನು 'ಅಗತ್ಯವಿದ್ದಾಗ ಮತ್ತು ಅಗತ್ಯವಿರುವಾಗ' ತಾವೇ ಪ್ರಕಟಿಸುತ್ತೇವೆ ಎಂದು ಹೇಳಿದೆ.

ತನಿಖೆಯ ಕುರಿತಾದ ಅಂತರರಾಷ್ಟ್ರೀಯ ಮಾಧ್ಯಮ ವರದಿಗಳನ್ನು AAIB ಟೀಕಿಸಿದ್ದು ಆ ವರದಿ 'ಬೇಜವಾಬ್ದಾರಿ' ಎಂದು ಹೇಳಿದೆ. ಅಂತರರಾಷ್ಟ್ರೀಯ ಕೆಲವು ಮಾಧ್ಯಮಗಳು ಆಯ್ದ ಮತ್ತು ಪರಿಶೀಲಿಸದ ವರದಿಯ ಮೂಲಕ ಪದೇ ಪದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಕ್ರಮಗಳು ಬೇಜವಾಬ್ದಾರಿಯಿಂದ ಕೂಡಿರುತ್ತವೆ. ವಿಶೇಷವಾಗಿ ತನಿಖೆ ನಡೆಯುತ್ತಿರುವಾಗ ಎಂದು AAIB ಮಹಾನಿರ್ದೇಶಕ ಜಿ ವಿ ಜಿ ಯುಗಂಧರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನಿಖಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಅಕಾಲಿಕ ನಿರೂಪಣೆಗಳನ್ನು ಹರಡುವುದನ್ನು ನಾವು ಸಾರ್ವಜನಿಕರು ಮತ್ತು ಮಾಧ್ಯಮಗಳು ತಡೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು. ಪೈಲಟ್ ದೋಷದಿಂದಾಗಿ ಜೂನ್ 12ರಂದು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ವರದಿಗಳು ಬಂದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ ಬೋಯಿಂಗ್ 787-8 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಏರ್ ಇಂಡಿಯಾ ವಿಮಾನದ ಇಬ್ಬರು ಪೈಲಟ್‌ಗಳ ನಡುವಿನ ಸಂಭಾಷಣೆಯ ಕಾಕ್‌ಪಿಟ್ ರೆಕಾರ್ಡಿಂಗ್, ವಿಮಾನದ ಎಂಜಿನ್‌ಗಳಿಗೆ ಹೋಗುವ ಇಂಧನವನ್ನು ನಿಯಂತ್ರಿಸುವ ಸ್ವಿಚ್‌ಗಳನ್ನು ಕ್ಯಾಪ್ಟನ್ ಆಫ್ ಮಾಡಿದ್ದಾರೆ ಎಂದು ಸೂಚಿಸಿದೆ. ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಶನಿವಾರ ಬಿಡುಗಡೆ ಮಾಡಿದ ವರದಿಯು ಜೂನ್ 12ರ ದುರಂತಕ್ಕೆ ಯಾವುದೇ ತೀರ್ಮಾನ ಅಥವಾ ಹೊಣೆಗಾರಿಕೆಯನ್ನು ಹೇಳಿಲ್ಲ. ಆದರೆ ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್ ಗೆ ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ ಎಂದು ಕೇಳಿದ್ದಾರೆ. ಎರಡನೇ ಪೈಲಟ್ ಇಲ್ಲ, ನಾನು ಕಡಿತಗೊಳಿಸಿಲ್ಲ ಎಂದು ಪ್ರತಿಕ್ರಿಯಿಸಿದರು ಎಂದು ವರದಿ ಸೂಚಿಸಿದೆ.

ಮೊದಲು ಆಶ್ಚರ್ಯ ವ್ಯಕ್ತಪಡಿಸಿದ ಪೈಲಟ್ ನಂತರ ಭಯಭೀತರಾದರು. ಇನ್ನು ಮುಖ್ಯ ಪೈಲಟ್ ಶಾಂತವಾಗಿ ಉಳಿದಂತೆ ಕಾಣುತ್ತಿತ್ತು ಎಂದು ರಾಯಿಟರ್ಸ್ WSJ ಅನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ವರದಿಗೆ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಬೋಯಿಂಗ್ ಮತ್ತು ಏರ್ ಇಂಡಿಯಾ ಇನ್ನೂ ಪ್ರತಿಕ್ರಿಯಿಸಿಲ್ಲ. ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಅವರು ಕ್ರಮವಾಗಿ 15,638 ಗಂಟೆಗಳು ಮತ್ತು 3,403 ಗಂಟೆಗಳ ಒಟ್ಟು ಹಾರಾಟದ ಅನುಭವವನ್ನು ಹೊಂದಿದ್ದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನದ AI 171 ಅಪಘಾತದಲ್ಲಿ 229 ಪ್ರಯಾಣಿಕರು, 12 ಸಿಬ್ಬಂದಿ ಹಾಗೂ ಕಟ್ಟಡದಲ್ಲಿದ್ದ 19 ಜನರು ಸೇರಿದಂತೆ 260 ಜನರು ಸಾವನ್ನಪ್ಪಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bihar polls: ಎನ್‌ಡಿಎ ಪ್ರಣಾಳಿಕೆ ಬಿಡುಗಡೆ; ಒಂದು ಕೋಟಿ ಯುವಕರಿಗೆ ಉದ್ಯೋಗ, ಉಚಿತ ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ ಭರವಸೆ

ಸರ್ದಾರ್ ಪಟೇಲರು ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು, ಆದರೆ ಜವಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ: ಪ್ರಧಾನಿ ಮೋದಿ

ಬಿಹಾರದಲ್ಲಿ ನರೇಂದ್ರ ಮೋದಿ ಹನುಮಾನ್‌ ಚಿರಾಗ್‌ ಪಾಸ್ವಾನ್‌ (ನೇರ ನೋಟ)

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದೋಷಾರೋಪ ನಿಗದಿ ನ.3ಕ್ಕೆ ಮುಂದೂಡಿಕೆ

ಜೆಫ್ರಿ ಎಪ್ಸ್ಟೀನ್ ಜೊತೆಗೆ ಅಕ್ರಮ ಸಂಬಂಧ ಆಪಾದನೆ: ಪ್ರಿನ್ಸ್ ಆಂಡ್ರ್ಯೂ ಬಿರುದು ತೆಗೆದುಹಾಕಿ ಅರಮನೆಯಿಂದ ಹೊರಹಾಕಿದ King Charles III

SCROLL FOR NEXT