ಏಕನಾಥ್ ಖಾಡ್ಸೆ 
ದೇಶ

ಪುಣೆಯಲ್ಲಿ 'ಡ್ರಗ್ಸ್ ಪಾರ್ಟಿ' ಮೇಲೆ ದಾಳಿ; ಮಾಜಿ ಸಚಿವ ಖಾಡ್ಸೆ ಅಳಿಯ ಸೇರಿ 7 ಜನರ ಬಂಧನ

ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಡ್ಸೆ ಅವರ ಪುತ್ರಿ ರೋಹಿಣಿ ಖಡ್ಸೆ ಅವರ ಪತಿ ಪ್ರಾಂಜಲ್ ಖೇವಾಲ್ಕರ್ ಅವರು ಬಂಧಿತರಲ್ಲಿ ಒಬ್ಬರು ಎಂದು ಅವರು ಹೇಳಿದ್ದಾರೆ.

ಪುಣೆ: ಪುಣೆಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ನಡೆಯುತ್ತಿದ್ದ "ಡ್ರಗ್ಸ್ ಪಾರ್ಟಿ" ಮೇಲೆ ಭಾನುವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಏಳು ಜನರನ್ನು ಬಂಧಿಸಿದ್ದಾರೆ ಮತ್ತು ಮಾದಕ ದ್ರವ್ಯ, ಹುಕ್ಕಾ ಸೆಟ್‌ಗಳು ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಡ್ಸೆ ಅವರ ಪುತ್ರಿ ರೋಹಿಣಿ ಖಡ್ಸೆ ಅವರ ಪತಿ ಪ್ರಾಂಜಲ್ ಖೇವಾಲ್ಕರ್ ಅವರು ಬಂಧಿತರಲ್ಲಿ ಒಬ್ಬರು ಎಂದು ಅವರು ಹೇಳಿದ್ದಾರೆ.

ಪೊಲೀಸ್ ಕ್ರಮದ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಸಬೇಕು ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಏಕನಾಥ್ ಖಡ್ಸೆ ಹೇಳಿದ್ದಾರೆ.

ರೋಹಿಣಿ ಖಡ್ಸೆ ಅವರು ವಿರೋಧ ಪಕ್ಷ ಎನ್‌ಸಿಪಿ(ಎಸ್‌ಪಿ)ಯ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆಯಾಗಿದ್ದಾರೆ.

ರೇವ್ ಪಾರ್ಟಿಯ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಮಹಾರಾಷ್ಟ್ರ ಪೊಲೀಸರ ಅಪರಾಧ ವಿಭಾಗವು ಪುಣೆ ನಗರದ ದುಬಾರಿ ಖರಾಡಿ ಪ್ರದೇಶದಲ್ಲಿರುವ ಸ್ಟುಡಿಯೋ ಅಪಾರ್ಟ್‌ಮೆಂಟ್‌ನಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಬೆಳಗಿನ ಜಾವ 3.30 ರ ಸುಮಾರಿಗೆ ದಾಳಿ ನಡೆಸಲಾಗಿದ್ದು, ಸ್ಟುಡಿಯೋ ಅಪಾರ್ಟ್‌ಮೆಂಟ್‌ನಲ್ಲಿ "ಡ್ರಗ್ ಪಾರ್ಟಿ" ನಡೆಯುತ್ತಿರುವುದು ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ) ನಿಖಿಲ್ ಪಿಂಗಳೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದಾಳಿ ಮತ್ತು ನಂತರದ ಶೋಧದ ಸಮಯದಲ್ಲಿ, ಪೊಲೀಸರು 2.7 ಗ್ರಾಂ ಕೊಕೇನ್ ತರಹದ ವಸ್ತು, 70 ಗ್ರಾಂ ಗಾಂಜಾ ತರಹದ ವಸ್ತು, ಒಂದು ಹುಕ್ಕಾ ಮಡಕೆ, ವಿವಿಧ ಹುಕ್ಕಾ ಫ್ಲೇವರ್‌ಗಳು ಮತ್ತು ಮದ್ಯ ಮತ್ತು ಬಿಯರ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

"ನಾವು ಪ್ರಾಂಜಲ್ ಖೇವಾಲ್ಕರ್, ನಿಖಿಲ್ ಪೋಪ್ಟಾನಿ, ಸಮೀರ್ ಸಯ್ಯದ್, ಶ್ರೀಪಾದ್ ಯಾದವ್, ಸಚಿನ್ ಭೋಂಬೆ, ಇಶಾ ಸಿಂಗ್ ಮತ್ತು ಪ್ರಾಚಿ ಶರ್ಮಾ ಎಂಬ ಏಳು ವ್ಯಕ್ತಿಗಳನ್ನು NDPS ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ, ಲೆಬನಾನ್ ಕದನ ವಿರಾಮ, ಆಸ್ತಿ ಬಿಡುಗಡೆ ಪ್ರಮುಖ ಅಜೆಂಡಾ-Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

SCROLL FOR NEXT