ಕೇಂದ್ರ ಸಚಿವ ಕಿರಣ್ ರಿಜಿಜು  
ದೇಶ

ಲಕ್ಷ್ಮಣ ರೇಖೆ ದಾಟಿದ ಲಂಕೆ ದಹನವಾದಂತೆ ಪಾಕಿಸ್ತಾನದ ಉಗ್ರರ ಶಿಬಿರಗಳಿಗೂ ಬೆಂಕಿ ಬಿದ್ದಿತು: ಕಿರಣ್ ರಿಜಿಜು

ಯಾವಾಗ ರಾವಣ ಲಕ್ಷ್ಮಣ ರೇಖೆಯನ್ನು ದಾಟಿದನೋ, ಆಗ ಲಂಕೆಗೆ ಬೆಂಕಿ ಬಿದ್ದಿತು. ಅದೇ ರೀತಿ ಪಾಕಿಸ್ತಾನ ಭಾರತ ಎಳೆದ ಗೆರೆಯನ್ನು ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿತು.

ನವದೆಹಲಿ: ಲಕ್ಷ್ಮಣ ರೇಖೆ ದಾಟಿದ ರಾವಣನ ಲಂಕೆಯ ದಹನವಾದಂತೆ ಭಾರತ ಎಳೆದ ಗೆರೆಯನ್ನು ಪಾಕಿಸ್ತಾನ ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೂ ಬೆಂಕಿ ಬಿದ್ದಿತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಸೋಮವಾರ ಹೇಳಿದ್ದಾರೆ.

ಲೋಕಸಭೆಯಲ್ಲಿಂದು ಭಾರತೀಯ ಸೇನೆ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ವಿಶೇಷ ಚರ್ಚೆ ನಡೆಯಲಿದ್ದು, ಸಭೆ ನಡೆಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಜ್ಜಾಗಿದ್ದಾರೆ.

ಈ ನಡುವೆ ‘ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಯುದ್ಧವನ್ನು ತಪ್ಪಿಸಿದ್ದೇ ನಾನು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ.

ಇದರ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಆ‍ಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ರಾಮಾಯಣದ ಲಂಕಾ ದಹನಕ್ಕೆ ಹೋಲಿಕೆ ಮಾಡಿದ್ದಾರೆ.

ಆ‍ಪರೇಷನ್‌ ಸಿಂಧೂರ ಕುರಿತ ಇಂದು ಚರ್ಚೆ ಆರಂಭವಾಗಲಿದೆ. ಯಾವಾಗ ರಾವಣ ಲಕ್ಷ್ಮಣ ರೇಖೆಯನ್ನು ದಾಟಿದನೋ, ಆಗ ಲಂಕೆಗೆ ಬೆಂಕಿ ಬಿದ್ದಿತು. ಅದೇ ರೀತಿ ಪಾಕಿಸ್ತಾನ ಭಾರತ ಎಳೆದ ಗೆರೆಯನ್ನು ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿತು ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!