ಶ್ರೀನಗರದಲ್ಲಿ ಗರಿಷ್ಟ ತಾಪಮಾನ 
ದೇಶ

20 ವರ್ಷಗಳಲ್ಲಿ ಇದೇ ಮೊದಲು, Srinagar ದಲ್ಲಿ ಜೂನ್‌ ತಿಂಗಳ ಗರಿಷ್ಠ ತಾಪಮಾನ ದಾಖಲು: ಹವಾಮಾನ ಇಲಾಖೆ

ಕಾಶ್ಮೀರವನ್ನು ಆವರಿಸಿರುವ ಶಾಖದ ಅಲೆಯು ದಾಖಲೆಯ ವೇಗದಲ್ಲಿದ್ದು, ಗುರುವಾರ ಶ್ರೀನಗರ ಸೇರಿದಂತೆ ಕಣಿವೆಯ ಹಲವಾರು ಭಾಗಗಳಲ್ಲಿ ಗರಿಷ್ಟ ತಾಪಮಾನ ದಾಖಲಾಗಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ತನ್ನ ಶೀಥ ವಾತಾವರಣದಿಂದಲೇ ಖ್ಯಾತಿ ಗಳಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಶಾಖದ ಅಲೆ ಆವರಿಸಿದ್ದು ಜೂನ್ ತಿಂಗಳಲ್ಲಿ ಗರಿಷ್ಛ ತಾಪಮಾನ ದಾಖಲಾಗಿದೆ.

ಕಾಶ್ಮೀರವನ್ನು ಆವರಿಸಿರುವ ಶಾಖದ ಅಲೆಯು ದಾಖಲೆಯ ವೇಗದಲ್ಲಿದ್ದು, ಗುರುವಾರ ಶ್ರೀನಗರ ಸೇರಿದಂತೆ ಕಣಿವೆಯ ಹಲವಾರು ಭಾಗಗಳಲ್ಲಿ ಗರಿಷ್ಟ ತಾಪಮಾನ ದಾಖಲಾಗಿದೆ. ಶ್ರೀನಗರದಲ್ಲಿ ಗುರುವಾರ ಗರಿಷ್ಛ 35.2 ತಾಪಮಾನ ದಾಖಲಾಗಿದ್ದು, ಇದು ಕಳೆದ 20 ವರ್ಷಗಳಲ್ಲಿ ಜೂನ್‌ ತಿಂಗಳಲ್ಲಿ ದಾಖಲಾದ ಅತ್ಯಂತ ಗರಿಷ್ಛ ತಾಪಮಾನ ಎಂದು ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಶ್ರೀನಗರದಲ್ಲಿ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಕಳೆದ 20 ವರ್ಷಗಳಲ್ಲಿ ಜೂನ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದ ತಾಪಮಾನವಾಗಿದೆ. ಅಂತೆಯೇ ಋತುಮಾನದ ಸರಾಸರಿಗಿಂತ ಏಳು ಡಿಗ್ರಿ ಹೆಚ್ಚಾಗಿದೆ.

ಶ್ರೀನಗರದಲ್ಲಿ ಜೂನ್‌ನಲ್ಲಿ ಅತಿ ಹೆಚ್ಚು ತಾಪಮಾನವು ಜೂನ್ 25, 2005 ರಂದು ದಾಖಲಾಗಿತ್ತು, ಆಗ ತಾಪಮಾನ 36.5 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಇದನ್ನು ಹೊರತು ಪಡಿಸಿದರೆ ನಿನ್ನೆ ಗರಿಷ್ಛ ಪ್ರಮಾಣದ ತಾಪಮಾನ ದಾಖಲಾಗಿದೆ.

ಕುಲ್ಗಮ್ ಜಿಲ್ಲೆಯ ಕಾಶ್ಮೀರದ ಹೆಬ್ಬಾಗಿಲು ಪಟ್ಟಣವಾದ ಖಾಜಿಗುಂಡ್‌ನಲ್ಲಿ 37 ವರ್ಷಗಳಲ್ಲಿ ಅತ್ಯಂತ ಬಿಸಿಯಾದ ದಿನ ದಾಖಲಾಗಿದ್ದು, ಇಲ್ಲಿ ತಾಪಮಾನ 34.7 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು ಎಂದು IMD ದತ್ತಾಂಶ ತೋರಿಸಿದೆ. ಈ ಹಿಂದೆ ಜೂನ್ 26, 1988 ರಂದು, ಖಾಜಿಗುಂಡ್‌ನಲ್ಲಿ ಗರಿಷ್ಠ 35.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಅಂತೆಯೇ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕರ್ನಾಗ್ ಜೂನ್ 25, 2005 ರಂದು 34.9 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ನಂತರ ಜೂನ್‌ನಲ್ಲಿ ಎರಡನೇ ಅತ್ಯಂತ ಬಿಸಿಯಾದ ದಿನ 33.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ದತ್ತಾಂಶ ತಿಳಿಸಿದೆ.

ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಪ್ರವಾಸಿ ತಾಣ ಗುರುವಾರ ಕಣಿವೆಯಲ್ಲಿ ಅತ್ಯಂತ ತಂಪಾಗಿದ್ದು, ಗರಿಷ್ಠ ತಾಪಮಾನವು 25.9 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುವಿನ ಸರಾಸರಿಗಿಂತ 3.5 ಡಿಗ್ರಿ ಹೆಚ್ಚಾಗಿದೆ.

ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ಪಹಲ್ಗಾಮ್ ಕಣಿವೆಯಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಗರಿಷ್ಠ ತಾಪಮಾನವನ್ನು 29.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಿಸಿದ ಏಕೈಕ ಸ್ಥಳವಾಗಿದೆ, ಇದು ಋತುವಿನ ಸರಾಸರಿಗಿಂತ 5.5 ಡಿಗ್ರಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ದತ್ತಾಂಶ ತೋರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT