ಚಿರತೆ ಜೊತೆ ಸೆಣಸಿದ ವ್ಯಕ್ತಿ 
ದೇಶ

ಚಿರತೆ ಜೊತೆ ಬರಿಗೈಯಲ್ಲಿ ಏಕಾಂಗಿಯಾಗಿ ಹೋರಾಡಿದ ಇಟ್ಟಿಗೆ ಕಾರ್ಮಿಕ; ಸಹಾಯಕ್ಕೆ ಬಾರದ ಜನ; Video!

ಚಿರತೆಗೆ ಅದೆಷ್ಟು ಶಕ್ತಿ ಇದೆಯೆಂದರೆ ಅದು ಸಾಮಾನ್ಯ ಮನುಷ್ಯನನ್ನು ತನ್ನ ಹಿಡಿತದಲ್ಲಿ ಸುಲಭವಾಗಿ ಹಿಡಿಯಬಲ್ಲದು. ಆದರೆ ಕೆಲವರು ಈ ಜಗತ್ತಿನಲ್ಲಿ ಗಟ್ಟಿ ಗುಂಡಿಗೆಯಿಂದ ಹುಟ್ಟುತ್ತಾರೆ.

ಲಖಿಂಪುರ ಖೇರಿ (ಉತ್ತರಪ್ರದೇಶ): ಚಿರತೆಗೆ ಅದೆಷ್ಟು ಶಕ್ತಿ ಇದೆಯೆಂದರೆ ಅದು ಸಾಮಾನ್ಯ ಮನುಷ್ಯನನ್ನು ತನ್ನ ಹಿಡಿತದಲ್ಲಿ ಸುಲಭವಾಗಿ ಹಿಡಿಯಬಲ್ಲದು. ಆದರೆ ಕೆಲವರು ಈ ಜಗತ್ತಿನಲ್ಲಿ ಗಟ್ಟಿ ಗುಂಡಿಗೆಯಿಂದ ಹುಟ್ಟುತ್ತಾರೆ. ಯಾವುದೇ ಕಷ್ಟಕ್ಕೂ ತಲೆಬಾಗುವ ಬದಲು ಧೈರ್ಯದಿಂದ ಎದುರಿಸುತ್ತಾರೆ. ಇದೇ ರೀತಿಯ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಇಟ್ಟಿಗೆ ಗೂಡಿನ ಘಟನೆಯಾಗಿದೆ. ಅಲ್ಲಿ ಚಿರತೆ ಇದ್ದಕ್ಕಿದ್ದಂತೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ದಾಳಿ ಮಾಡುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಓರ್ವ ವ್ಯಕ್ತಿ ಕೊನೆಯ ಉಸಿರಿನವರೆಗೂ ಚಿರತೆ ಜೊತೆ ಹೋರಾಡುತ್ತಾನೆ. ಚಿರತೆ ಕೂಡ ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವನು ಸಹ ಸೋಲು ಒಪ್ಪಿಕೊಳ್ಳದೆ ಕಠಿಣ ಹೋರಾಟವನ್ನು ಸಹ ನೀಡುತ್ತಾನೆ. ಇದರಿಂದಾಗಿ ಇಬ್ಬರ ನಡುವೆ ಸುಮಾರು 2 ನಿಮಿಷಗಳ ಕಾಲ ಭೀಕರ ಕಾಳಗ ನಡೆಯುತ್ತದೆ.

ಯಾರೇ ಆಗಲಿ ಚಿರತೆಯೊಂದಿಗೆ ಹೋರಾಡುವ ಕನಸು ಕಾಣುವುದಿಲ್ಲ. ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಚಿರತೆಯೊಂದಿಗೆ ಹೋರಾಡುವುದಲ್ಲದೆ, ಅದನ್ನು ಸೋಲಿಸಿದ ನಂತರವೇ ವಿಶ್ರಾಂತಿ ಪಡೆಯುತ್ತಾನೆ. ಕ್ಲಿಪ್‌ನಲ್ಲಿ, ಆ ವ್ಯಕ್ತಿ ಚಿರತೆಯನ್ನು ಒಂಟಿಯಾಗಿ ಹಿಡಿದಿದ್ದಾನೆ. ಆದರೆ ಚಿರತೆ ಆತನ ಮೇಲೆ ದಾಳಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಅಲ್ಲೆ ನಿಂತಿದ್ದ ಜನರು ಮಾತ್ರ ವೀಡಿಯೊ ಮಾಡುವುದರಲ್ಲಿ ನಿರತರಾಗುತ್ತಾರೆ ಹೊರತು ಸಹಾಯಕ್ಕೆ ಮುಂದಾಗುವುದಿಲ್ಲ.

ಜನರು ಇಟ್ಟಿಗೆಯನ್ನು ತೆಗೆದುಕೊಂಡು ಚಿರತೆ ಮೇಲೆ ಎಸೆಯುತ್ತಾರೆ. ಇದರಿಂದಾಗಿ ಚಿರತೆ ಎಲ್ಲೋ ಎರಡು ಹೊಡೆತಗಳನ್ನು ಎದುರಿಸುತ್ತಿದೆ. ಆದರೆ ಆಗಲೂ ಚಿರತೆ ಹೋರಾಡುವ ವ್ಯಕ್ತಿಯ ಮೇಲೆ ಹಲವು ಬಾರಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತದೆ. ಕ್ಲಿಪ್‌ನ ಕೊನೆಯಲ್ಲಿ, ಆ ವ್ಯಕ್ತಿ ಚಿರತೆಯನ್ನು ಬಿಟ್ಟು ಅಲ್ಲಿಂದ ಹೋಗಲು ಪ್ರಾರಂಭಿಸಿದಾಗ, ಚಿರತೆ ಕೂಡ ಅವನನ್ನು ಹಿಂಬಾಲಿಸುತ್ತದೆ. ನಂತರ ಚಿರತೆ ಸುಸ್ತಾಗಿ ಹೊಲಕ್ಕೆ ನುಗ್ಗಿದ್ದ ಓಡಿ ಹೋಗುತ್ತದೆ. ಈ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆದ ತಕ್ಷಣ, ಬಳಕೆದಾರರು ಆ ವ್ಯಕ್ತಿಯನ್ನು ಸಾಕಷ್ಟು ಹೊಗಳಿದ್ದಾರೆ.

ಸಾಮಾಜಿಕ ಮಾಧ್ಯಮದ ಸಾರ್ವಜನಿಕರು ಆ ವ್ಯಕ್ತಿಯ 'ಧೈರ್ಯ'ವನ್ನು ಹೊಗಳುತ್ತಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ - ತುಂಬಾ ಜನರಿದ್ದರು, ಎಲ್ಲರೂ ಮೊಬೈಲ್‌ನಲ್ಲಿ ದೃಶ್ಯವನ್ನು ನೋಡುತ್ತಿದ್ದರು ಮತ್ತು ವೀಡಿಯೊಗಳನ್ನು ಮಾಡುತ್ತಿದ್ದರು. ಇಬ್ಬರು ಜನರಿಗೆ ಧೈರ್ಯವಿದ್ದರೆ, ಅವನು ಒಬ್ಬಂಟಿಯಾಗಿ ಹೋರಾಡುತ್ತಿರಲಿಲ್ಲ. ಉಳಿದ ಜನರು ಕೆಳಗೆ ಬಂದು ಸಹಾಯ ಮಾಡಬೇಕಾಗಿತ್ತು ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಅವರು ಮೇಲಿನಿಂದ ಇಟ್ಟಿಗೆಗಳನ್ನು ಎಸೆಯುತ್ತಿದ್ದಾರೆ, ಅವುಗಳಲ್ಲಿ ಕೆಲವು ಈ ಧೈರ್ಯಶಾಲಿ ಕಾರ್ಮಿಕನ ಮೇಲೆ ಬೀಳುತ್ತಿವೆ. ಇದಲ್ಲದೆ, ಹೆಚ್ಚಿನ ಬಳಕೆದಾರರು ಕಾಮೆಂಟ್‌ಗಳಲ್ಲಿ ಆ ವ್ಯಕ್ತಿಯ ಧೈರ್ಯವನ್ನು ಹೊಗಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT