ರಣವೀರ್ ಅಲ್ಹಾಬಾದಿಯಾ online desk
ದೇಶ

YouTuber Ranveer Allahabadia ಶೋ ಪುನರಾರಂಭ?: ಸುಪ್ರೀಂ ಕೋರ್ಟ್ ಹೇಳಿದ್ದೇನೆಂದರೆ...

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಸೋಮವಾರ ಅಲ್ಹಾಬಾದಿಯಾ ಅವರ ಅರ್ಜಿಯ ಕುರಿತು ಆದೇಶವನ್ನು ನೀಡಿತು.

ನವದೆಹಲಿ: ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ತಮ್ಮ ಕಾರ್ಯಕ್ರಮವನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದ್ದು, ಅದು "ಸಭ್ಯತೆ ಮತ್ತು ನೈತಿಕತೆ"ಯ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂದು ಎಚ್ಚರಿಸಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಸೋಮವಾರ ಅಲ್ಹಾಬಾದಿಯಾ ಅವರ ಅರ್ಜಿಯ ಕುರಿತು ಆದೇಶವನ್ನು ನೀಡಿತು.

ಅವರ ಕಾರ್ಯಕ್ರಮ "ಸಭ್ಯತೆ ಮತ್ತು ನೈತಿಕತೆ"ಯಿಂದ ಕೂಡಿರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ ಸುಪ್ರೀಂ ಕೋರ್ಟ್, ಅದು ಎಲ್ಲಾ ವಯೋಮಾನದವರಿಗೆ ಸೂಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಹೇಳಿದೆ.

ಆದಾಗ್ಯೂ, ಈಗ ಅಲ್ಹಾಬಾದಿಯಾ ಅವರ ವಿದೇಶ ಪ್ರವಾಸಕ್ಕೆ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ನಿರಾಕರಿಸಿದೆ. ಅವರು ಪ್ರಕರಣದ ತನಿಖೆ ಎದುರಿಸಿದ ನಂತರವಷ್ಟೇ ಅನುಮತಿ ನೀಡಬಹುದು ಎಂದು ಕೋರ್ಟ್ ಹೇಳಿದೆ.

ಫೆಬ್ರವರಿ 18 ರಂದು ಸುಪ್ರೀಂ ಕೋರ್ಟ್ "ಇಂಡಿಯಾಸ್ ಗಾಟ್ ಲ್ಯಾಟೆಂಟ್" ಎಂಬ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಅಲ್ಹಾಬಾದಿಯಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿತ್ತು ಮತ್ತು ಅವರ ಅಸಭ್ಯ ಕಾಮೆಂಟ್‌ಗಳಿಗಾಗಿ ಅವರನ್ನು ಖಂಡಿಸಿತ್ತು.

ಯೂಟ್ಯೂಬ್ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಆಕ್ಷೇಪಾರ್ಹ ಅಶ್ಲೀಲ ಹೇಳಿಕೆಗಳಿಗಾಗಿ ಅವರು ಟೀಕೆಗಳನ್ನು ಎದುರಿಸಿದ್ದರು. ವಿಚಾರಣೆಯ ಸಮಯದಲ್ಲಿ, ಅಲ್ಹಾಬಾದಿಯಾ ಅವರನ್ನು ಪ್ರತಿನಿಧಿಸುವ ವಕೀಲ ಡಾ. ಅಭಿನವ್ ಚಂದ್ರಚೂಡ್, ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಮನವಿ ಮಾಡಿದ್ದಾರೆ. ಅಲಹಾಬಾದ್‌ಡಿಯಾಗೆ ಹಲವಾರು ಕೊಲೆ ಬೆದರಿಕೆಗಳು ಬಂದಿವೆ - ಮೊದಲು ಮಹಾರಾಷ್ಟ್ರ, ನಂತರ ಅಸ್ಸಾಂ ಮತ್ತು ಈಗ ಜೈಪುರದಲ್ಲಿ ಕೊಲೆ ಬೆದರಿಕೆಗಳು ಬಂದಿವೆ. ಜೊತೆಗೆ ಅವರ ವಿರುದ್ಧ ಬಹುಮಾನವನ್ನು ನೀಡಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಈ ಅಪರಾಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಳೆಯ ಸೆಕ್ಷನ್ 153-ಎ (ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಬರುತ್ತದೆ.

ಅಲ್ಹಾಬಾದಿಯಾ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಕಾಂತ್, "ಅಶ್ಲೀಲತೆ ಮತ್ತು ಅಸಭ್ಯತೆಯ ಮಿತಿ ಯಾವುವು? ಇದು ಈ ದೇಶದಲ್ಲಿ ಅಶ್ಲೀಲತೆಯಲ್ಲದಿದ್ದರೆ, ಮತ್ತೇನು? ನೀವು ಬಳಸುತ್ತಿರುವ ಭಾಷೆಯನ್ನು ನೋಡಿ! ನೀವು ಎಲ್ಲಾ ರೀತಿಯ ಭಾಷೆಗಳನ್ನು ಮಾತನಾಡಲು ಪರವಾನಗಿ ಪಡೆದಿದ್ದೀರಾ? ಇದು ಖಂಡನೀಯ ನಡವಳಿಕೆ... ಇದು ಕೇವಲ ವ್ಯಕ್ತಿಯ ನೈತಿಕತೆಯ ಪ್ರಶ್ನೆಯಲ್ಲ. ಆತ ತನ್ನ ಹೆತ್ತವರನ್ನೂ ಅವಮಾನಿಸುತ್ತಿದ್ದಾನೆ! ಈ ಕಾರ್ಯಕ್ರಮದ ಮೂಲಕ ಈ ವ್ಯಕ್ತಿಯ ಮನಸ್ಸಿನಲ್ಲಿ ಏನೋ ಕೊಳಕು ಹರಡಿದೆ" ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಗುವಾಹಟಿ ಪೊಲೀಸರು ಈಗಾಗಲೇ ತನಗೆ ಸಮನ್ಸ್ ಜಾರಿ ಮಾಡಿರುವ ಕಾರಣ, ಅಲ್ಹಾಬಾದಿಯಾ ಪೊಲೀಸರ ಬಂಧನಕ್ಕೆ ಹೆದರಿ ನಿರೀಕ್ಷಣಾ ಜಾಮೀನು ಕೋರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT