ಯೋಗಿ ಆದಿತ್ಯನಾಥ್- ಅಬು ಅಜ್ಮಿ online desk
ದೇಶ

ಸರಿಯಾದ ಟ್ರೀಟ್ ಮೆಂಟ್ ಕೊಡ್ತೀವಿ, ಆ ಹತಭಾಗ್ಯನನ್ನು UP ಗೆ ಕಳುಹಿಸಿ: ಅಬು ಅಜ್ಮಿ ವಿರುದ್ಧ ಯೋಗಿ ಆದಿತ್ಯನಾಥ್ ಅಬ್ಬರ!

ಉತ್ತರ ಪ್ರದೇಶ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಸಮಾಜವಾದಿ ಪಕ್ಷವನ್ನು ಖಂಡಿಸುತ್ತಾ, ಅಬು ಅಜ್ಮಿ ಅವರನ್ನು ಪಕ್ಷದಿಂದ ತೆಗೆದುಹಾಕಿ "ಟ್ರೀಟ್ಮೆಂಟ್"ಗಾಗಿ ಉತ್ತರ ಪ್ರದೇಶಕ್ಕೆ ಕಳುಹಿಸಿ ಎಂದು ಯೋಗಿ ಆದಿತ್ಯನಾಥ್ ಕೇಳಿದ್ದಾರೆ.

ಲಖನೌ: ಮೊಘಲ್ ದೊರೆ ಔರಂಗಜೇಬನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಸಮಾಜವಾದಿ ಪಕ್ಷ ಮತ್ತು ಅದರ ಮಹಾರಾಷ್ಟ್ರ ಶಾಸಕ ಅಬು ಅಜ್ಮಿ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಬ್ಬರಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಸಮಾಜವಾದಿ ಪಕ್ಷವನ್ನು ಖಂಡಿಸುತ್ತಾ, ಅಬು ಅಜ್ಮಿ ಅವರನ್ನು ಪಕ್ಷದಿಂದ ತೆಗೆದುಹಾಕಿ "ಟ್ರೀಟ್ಮೆಂಟ್"ಗಾಗಿ ಉತ್ತರ ಪ್ರದೇಶಕ್ಕೆ ಕಳುಹಿಸಿ ಎಂದು ಯೋಗಿ ಆದಿತ್ಯನಾಥ್ ಕೇಳಿದ್ದಾರೆ.

"ಸಮಾಜವಾದಿ ಪಕ್ಷದ ಆ ದೌರ್ಭಾಗ್ಯ ವ್ಯಕ್ತಿಯನ್ನು ಪಕ್ಷದಿಂದ ತೆಗೆದುಹಾಕಿ ಮತ್ತು ಅವರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ, ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ" ಎಂದು ಆದತ್ಯನಾಥ್ ಸದನದಲ್ಲಿ ಅಬ್ಬರಿಸಿದ್ದಾರೆ.

ಎಸ್‌ಪಿ ವಿರುದ್ಧ ತಮ್ಮ ದಾಳಿಯನ್ನು ತೀಕ್ಷ್ಣಗೊಳಿಸಿದ ಸಿಎಂ ಯೋಗಿ, ಎಸ್‌ಪಿ ಶಾಸಕರು ದೇವಾಲಯವನ್ನು ನಾಶಪಡಿಸಿದ ವ್ಯಕ್ತಿಯನ್ನು (ಔರಂಗಜೇಬ) ಹೊಗಳುತ್ತಿರುವಾಗ ಅವರು ಮಹಾಕುಂಭವನ್ನು ದೂಷಿಸುತ್ತಲೇ ಇದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

"ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯ ಬಗ್ಗೆ ನಾಚಿಕೆಪಡುವ ವ್ಯಕ್ತಿ, ಹೆಮ್ಮೆಪಡುವ ಬದಲು ಮತ್ತು ಔರಂಗಜೇಬನನ್ನು ತನ್ನ ಆರಾಧ್ಯ ದೈವವೆಂದು ಪರಿಗಣಿಸುವ ವ್ಯಕ್ತಿಗೆ ನಮ್ಮ ದೇಶದಲ್ಲಿ ಉಳಿಯುವ ಹಕ್ಕಿದೆಯೇ? ಸಮಾಜವಾದಿ ಪಕ್ಷ ಇದಕ್ಕೆ ಉತ್ತರಿಸಬೇಕು. ಒಂದೆಡೆ, ನೀವು ಮಹಾ ಕುಂಭಮೇಳವನ್ನು ದೂಷಿಸುತ್ತಲೇ ಇರುತ್ತೀರಿ... ಮತ್ತೊಂದೆಡೆ, ದೇಶದ ದೇವಾಲಯಗಳನ್ನು ನಾಶಪಡಿಸಿದ ಔರಂಗಜೇಬನಂತಹ ವ್ಯಕ್ತಿಯನ್ನು ನೀವು ಹೊಗಳುತ್ತೀರಿ... ನಿಮ್ಮ ಆ ಶಾಸಕನನ್ನು ನೀವು ಏಕೆ ನಿಯಂತ್ರಿಸಲು ಸಾಧ್ಯವಿಲ್ಲ? ಅವರ ಹೇಳಿಕೆಯನ್ನು ನೀವು ಏಕೆ ಖಂಡಿಸಲಿಲ್ಲ?" ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT