ಭಯ್ಯಾಜಿ ಜೋಶಿ ಮತ್ತು ಸಿಎಂ ದೇವೇಂದ್ರ ಫಡ್ನವೀಸ್ ಚಿತ್ರ 
ದೇಶ

ಮುಂಬೈನಲ್ಲಿ ಮರಾಠಿ ಕಲಿಯುವ ಅಗತ್ಯವಿಲ್ಲ: ವಿವಾದ ಹುಟ್ಟು ಹಾಕಿದ RSS ಹಿರಿಯ ಮುಖಂಡನ ಹೇಳಿಕೆ

ಮುಂಬೈಯಲ್ಲಿ ಕೇವಲ ಒಂದು ಭಾಷೆಯಿಲ್ಲ. ಅನೇಕ ಭಾಷೆಗಳಿವೆ. ಕೆಲವೊಂದು ಪ್ರದೇಶದಲ್ಲಿ ಅವರ ಸ್ವಂತ ಭಾಷೆಗಳನ್ನು ಜನ ಮಾತನಾಡುತ್ತಾರೆ. ಘಾಟ್‌ಕೋಪರ್‌ನ ಭಾಷೆ ಗುಜರಾತಿ ಎಂದು ಅವರು ಹೇಳಿದ್ದಾರೆ.

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವಾಸಿಸಲು ಮರಾಠಿ ತಿಳಿದಿರುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಭಯ್ಯಾಜಿ ಜೋಶಿ ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಮುಂಬೈಯಲ್ಲಿ ಕೇವಲ ಒಂದು ಭಾಷೆಯಿಲ್ಲ. ಅನೇಕ ಭಾಷೆಗಳಿವೆ. ಕೆಲವೊಂದು ಪ್ರದೇಶದಲ್ಲಿ ಅವರ ಸ್ವಂತ ಭಾಷೆಗಳನ್ನು ಜನ ಮಾತನಾಡುತ್ತಾರೆ. ಘಾಟ್‌ಕೋಪರ್‌ನ ಭಾಷೆ ಗುಜರಾತಿ ಎಂದು ಅವರು ಹೇಳಿದ್ದಾರೆ.

ಗಿರ್ಗಾಂವ್‌ನಲ್ಲಿ, ಕಡಿಮೆ ಹಿಂದಿ ಮಾತನಾಡುವ ಮತ್ತು ಹೆಚ್ಚು ಮರಾಠಿ ಮಾತನಾಡುವವರಿದ್ದಾರೆ. ಆದ್ದರಿಂದ ಮುಂಬೈಗೆ ಬರುವ ಯಾವುದೇ ವ್ಯಕ್ತಿ ಮರಾಠಿ ಕಲಿಯುವ ಅಗತ್ಯವಿಲ್ಲ ಎಂದು ಜೋಶಿ ಹೇಳಿದ್ದಾರೆ.

ಆದರೆ ಮರಾಠಿ ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆಯಾಗಿದ್ದು, ಇಲ್ಲಿ ವಾಸಿಸುವ ಯಾರೇ ಆದರೂ ಮರಾಠಿ ಕಲಿಯಬೇಕು ಮತ್ತು ಮಾತನಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಪಾದಿಸಿದ್ದಾರೆ.

ಈ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಪಪಡಿಸಬೇಕು ಎಂಬ ಶಿವಸೇನೆ-ಯುಬಿಟಿ ಶಾಸಕ ಭಾಸ್ಕರ್ ಜಾಧವ್ ಹೇಳಿಕೆಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಫಡ್ನವಿಸ್, "ಭಯ್ಯಾಜಿ ಹೇಳಿದ್ದನ್ನು ನಾನು ಕೇಳಿಲ್ಲ, ಆದರೆ ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆ ಮರಾಠಿ ಆಗಿದ್ದು, ಪ್ರತಿಯೊಬ್ಬರು ಮರಾಠಿ ಕಲಿಯಬೇಕು ಮತ್ತು ಮಾತನಾಡಬೇಕು ಎಂದು ಹೇಳಿದರು.

ಇದಕ್ಕೂ ಮುನ್ನಾ ಮಾತನಾಡಿದ ಶಿವಸೇನಾ -ಯುಬಿಟಿ ಸಂಸದ ಸಂಜಯ್ ರಾವತ್, ಮರಾಠಿ ನಮ್ಮ ರಾಜ್ಯ ಭಾಷೆ ಮತ್ತು ಅಂತಹ ಹೇಳಿಕೆಯು ದೇಶದ್ರೋಹಕ್ಕೆ ಸಮಾನವಾಗಿದೆ. ಇದು ಮರಾಠಿ ಭಾಷೆ ಮತ್ತು ಮರಾಠಿ ಹೆಮ್ಮೆಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT