ಮಣಿಪುರದ ಇಂಫಾಲ್‌ನಲ್ಲಿ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿರುವುದು  
ದೇಶ

ಮಣಿಪುರ ಹಿಂಸಾಚಾರ ತಡೆಗೆ ಕೇಂದ್ರ ಸರ್ಕಾರದಿಂದ ಶಾಂತಿಯ ಮಾರ್ಗಸೂಚಿ: FOCS ವಕ್ತಾರರು

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮಾರ್ಗಸೂಚಿಯ ಮೊದಲ ಹಂತವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಎ ಕೆ ಮಿಶ್ರಾ ತಮಗೆ ತಿಳಿಸಿದ್ದಾರೆ ಎಂದು ನಾಗರಿಕ ಸಮಾಜ ಒಕ್ಕೂಟದ ವಕ್ತಾರ ನ್ಗಾಂಗ್‌ಬಮ್ ಚಮ್ಚನ್ ಸಿಂಗ್ ಇಂದು ಸುದ್ದಿಗಾರರಿಗೆ ತಿಳಿಸಿದರು.

ಇಂಫಾಲ್: ಜನಾಂಗೀಯ ಕಲಹ ಪೀಡಿತ ಮಣಿಪುರ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ಈಶಾನ್ಯ ವಲಯ ಗೃಹ ಸಚಿವಾಲಯದ ಸಲಹೆಗಾರ ಎ.ಕೆ. ಮಿಶ್ರಾ ದೃಢಪಡಿಸಿದ್ದಾರೆ ಎಂದು ಮೈತೀಸ್‌ ನಾಗರಿಕ ಸಮಾಜ ಸಂಘಟನೆ ಗುರುವಾರ ಹೇಳಿದೆ.

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮಾರ್ಗಸೂಚಿಯ ಮೊದಲ ಹಂತವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಎ ಕೆ ಮಿಶ್ರಾ ತಮಗೆ ತಿಳಿಸಿದ್ದಾರೆ ಎಂದು ನಾಗರಿಕ ಸಮಾಜ ಒಕ್ಕೂಟದ ವಕ್ತಾರ ನ್ಗಾಂಗ್‌ಬಮ್ ಚಮ್ಚನ್ ಸಿಂಗ್ ಇಂದು ಸುದ್ದಿಗಾರರಿಗೆ ತಿಳಿಸಿದರು.

ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಕೇಂದ್ರವು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದು, ಅದನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ನಿನ್ನೆ ಭೇಟಿ ಮಾಡಿದ ನಾಗರಿಕ ಸಮಾಜದ ನಿಯೋಗಕ್ಕೆ ಭರವಸೆ ನೀಡಲಾಗಿದೆ ಎಂದು ಎ ಕೆ ಮಿಶ್ರಾ ತಿಳಿಸಿರುವುದಾಗಿ ನ್ಗಾಂಗ್‌ಬಮ್ ಚಮ್ಚನ್ ಸಿಂಗ್ ತಿಳಿಸಿದ್ದಾರೆ.

ಕೇಂದ್ರದ ಮಾರ್ಗಸೂಚಿಯಲ್ಲಿ ಶಸ್ತ್ರಾಸ್ತ್ರಗಳ ಶರಣಾಗತಿ, ರಸ್ತೆಗಳನ್ನು ಪುನಃ ತೆರೆಯುವುದು ಮತ್ತು ಸಶಸ್ತ್ರ ಗುಂಪುಗಳ ಚಟುವಟಿಕೆಗಳನ್ನು ತಡೆಯುವುದು ಸೇರಿವೆ ಎಂದು ಮಿಶ್ರಾ ನಮಗೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಫೆಬ್ರವರಿ 20 ರಂದು, ರಾಜ್ಯಪಾಲರು ಎಲ್ಲಾ ಶಸ್ತ್ರಾಸ್ತ್ರಗಳ ಶರಣಾಗತಿಗೆ ಕರೆ ನೀಡಿದ್ದರು. ರಾಜ್ಯದ ಎಲ್ಲಾ ರಸ್ತೆಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಜನರ ಚಲನೆಗೆ ಅನುವು ಮಾಡಿಕೊಡಬೇಕು. ಗೃಹ ಸಚಿವಾಲಯ ಪ್ರಕಾರ ಇವು ಮಾರ್ಗಸೂಚಿಯ ಆರಂಭಿಕ ಹಂತದ ಭಾಗವಾಗಿದೆ.

ಕೇಂದ್ರ ಮತ್ತು ಕುಕಿ ಸಶಸ್ತ್ರ ಗುಂಪುಗಳ ನಡುವಿನ ಕಾರ್ಯಾಚರಣೆ (SOO) ಸ್ಥಗಿತ ಒಪ್ಪಂದ ಮರು ಮಾರ್ಪಡಿಸಲಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಪರಿಷ್ಕರಿಸಲಾಗುತ್ತದೆ. ಯಾವುದೇ ಅಡೆತಡೆಯಿಲ್ಲದೆ ರಾಜ್ಯದ ಎಲ್ಲಾ ಜನರ ಮುಕ್ತ ಸಂಚಾರ ಸೇರಿದಂತೆ ಐದು ಅಂಶಗಳನ್ನು ನಾವು ಅವರಿಗೆ ಪ್ರಸ್ತುತಪಡಿಸಿದ್ದೇವೆ ಎಂದು FOCS ವಕ್ತಾರರು ಹೇಳಿದರು.

ಮೇ 2023 ರಿಂದ ಮೈತೀಸ್ ಮತ್ತು ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಮೃತಪಟ್ಟು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

2027 ರವರೆಗೆ ಅಧಿಕಾರಾವಧಿಯನ್ನು ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರ ಸರ್ಕಾರವು ಫೆಬ್ರವರಿ 13 ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT