ಮಹಮದ್ ಶಮಿ ಪತ್ನಿ ಹಸಿನ್ ಜಹಾನ್ ಮತ್ತು ಪುತ್ರಿ ಆಯಿರಾ 
ದೇಶ

'ಅತ್ಯಾಚಾರವಾದಾಗ ಎಲ್ಲಿಗೆ ಹೋಗಿರ್ತೀರಾ?'; ಮಗಳ ಹೋಳಿ ಆಚರಣೆ ಟೀಕಿಸಿದ ಮೌಲಾನಾಗೆ Mohammed Shami ಮಾಜಿ ಪತ್ನಿ ತೀವ್ರ ತರಾಟೆ!

ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ರಂಜಾನ್ ಉಪವಾಸ ಆಚರಿಸಲಿಲ್ಲ ಎಂದು ಕ್ರಿಕೆಟಿಗ ಮಹಮದ್ ಶಮಿ ವಿರುದ್ಧ ಕೆಲ ಧಾರ್ಮಿಕ ಮುಖಂಡರು ಕಿಡಿಕಾರಿದ್ದರು.

ಮುಂಬೈ: ಮಗಳ ಹೋಳಿ ಆಚರಣೆಯನ್ನು ಟೀಕಿಸಿದ ಮೌಲಾನಾಗೆ ಕ್ರಿಕೆಟಿಗ ಮಹಮದ್ ಶಮಿ (Mohammed Shami) ಖಡಕ್ ತಿರುಗೇಟು ನೀಡಿದ್ದು, ಮಕ್ಕಳ ಹೋಳಿ ಆಚರಣೆ ಪ್ರಶ್ನೆ ಮಾಡೋ ನೀವು ಮಹಿಳೆಯರ ಮೇಲೆ ಅತ್ಯಾಚಾರವಾದಾಗ ಎಲ್ಲಿಗೆ ಹೋಗಿರ್ತೀರಾ ಎಂದು ಪ್ರಶ್ನಿಸಿದ್ದಾರೆ.

ಹೌದು.. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ರಂಜಾನ್ ಉಪವಾಸ ಆಚರಿಸಲಿಲ್ಲ ಎಂದು ಕ್ರಿಕೆಟಿಗ ಮಹಮದ್ ಶಮಿ ವಿರುದ್ಧ ಕೆಲ ಧಾರ್ಮಿಕ ಮುಖಂಡರು ಕಿಡಿಕಾರಿದ್ದರು. ಇದೀಗ ಇದೇ ಶಮಿ ಅವರ ಪುತ್ರಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಮತ್ತೆ ಟೀಕಾಪ್ರಹಾರ ನಡೆಸಿದ್ದು, ಮೊಹಮ್ಮದ್ ಶಮಿ ಅವರ ಮಗಳು ಆಯಿರಾ ರಂಜಾನ್ ತಿಂಗಳಲ್ಲಿ ಹೋಳಿ ಆಡುವುದನ್ನು ಮೌಲಾನಾ ಟೀಕಿಸಿದ್ದಾರೆ.

ಇದು ಅಪರಾಧ ಎಂದು ಹೇಳಿರುವ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ, '"ಅವಳು ಚಿಕ್ಕ ಹುಡುಗಿ ... ಅವಳು ಅರ್ಥಮಾಡಿಕೊಳ್ಳದೆ ಹೋಳಿ ಆಡಿದರೆ, ಅದು ಅಪರಾಧವಲ್ಲ. ಆಕೆಯ ಪೋಷಕರಿಗೆ ಬುದ್ದಿ ಇರಬೇಕಿತ್ತು. ಆಕೆ ವಿವೇಕಿಯಾಗಿ ಹೋಳಿ ಆಚರಣೆ ಮಾಡಿದ್ದರೆ ಅದು ಷರಿಯಾ ಪ್ರಕಾರ ಅದನ್ನು ಧರ್ಮ ವಿರೋಧಿ ನಡೆ ಎಂದು ಪರಿಗಣಿಸಲಾಗುತ್ತದೆ ಎಂದು ಟೀಕಿಸಿದ್ದರು.

ಶಮಿ ಮಾಜಿ ಪತ್ನಿ ತೀವ್ರ ತರಾಟೆ!

ಮೌಲಾನಾ ಟೀಕೆ ವ್ಯಾಪಕ ಸುದ್ದಿಯಾಗುತ್ತಲೇ ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಮದ್ ಶಮಿ ಮಾಜಿ ಪತ್ನಿ ಹಸಿನ್ ಜಹಾನ್ ಮೌಲಾನರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಹೋಳಿ ಆಚರಣೆಯನ್ನು ಟೀಕಿಸುವ ಮೌಲಾನಾಗಳು ಇದೇ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವಾದಾಗ ಎಲ್ಲಿಗೆ ಹೋಗಿರುತ್ತಾರೆ. ಆ ಬಗ್ಗೆ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಅಂದಹಾಗೆ ಶಮಿ ಪುತ್ರಿ ಆಯಿರಾ ಮಾತ್ರವಲ್ಲದೇ ಶಮಿ ಮಾಜಿ ಪತ್ನಿ ಹಸೀನ್ ಜಹಾನ್ ಕೂಡ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT