ನಿತೀಶ್ ಕುಮಾರ್ online desk
ದೇಶ

ಬಿಹಾರ: ರಾಷ್ಟ್ರಗೀತೆಗೂ ಮುನ್ನ ವೇದಿಕೆಯಿಂದ ನಿರ್ಗಮಿಸಿದ ನಿತೀಶ್!

ಕೆಲವು ನಿಮಿಷಗಳ ನಂತರ ಅಧಿಕಾರಿಗಳು 70 ವರ್ಷದ ಮುಖ್ಯಮಂತ್ರಿಗಳನ್ನು ವಾಪಸ್ ಕರೆದುಕೊಂಡು ಬಂದ ನಂತರ ಕಾರ್ಯಕ್ರಮ ಪುನರಾರಂಭವಾಯಿತು.

ಪಾಟ್ನ: ಗುರುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಂತಾರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆಗೆ ಮುಂಚಿತವಾಗಿ ವೇದಿಕೆಯಿಂದ ದಿಢೀರನೆ ನಿರ್ಗಮಿಸಿದ್ದು ಭಾರಿ ಸುದ್ದಿಯಾಗುತ್ತಿದ್ದು ಆಯೋಜಕರಿಗೆ ಅಚ್ಚರಿ ಮೂಡಿಸಿದೆ.

ಕೆಲವು ನಿಮಿಷಗಳ ನಂತರ ಅಧಿಕಾರಿಗಳು 70 ವರ್ಷದ ಮುಖ್ಯಮಂತ್ರಿಗಳನ್ನು ವಾಪಸ್ ಕರೆದುಕೊಂಡು ಬಂದ ನಂತರ ಕಾರ್ಯಕ್ರಮ ಪುನರಾರಂಭವಾಯಿತು.

2025 ರ ಸೆಪಕ್ ಟಕ್ರಾ ವಿಶ್ವಕಪ್ ಪಾಟಲಿಪುತ್ರ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿದ್ದು, 21 ದೇಶಗಳ 300 ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ. ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ, ರಾಷ್ಟ್ರಗೀತೆಗೆ ಸಮಯವಾಗಿದೆ ಎಂದು ಮಾಡರೇಟರ್ ಘೋಷಿಸಿದ ತಕ್ಷಣ, ಸಿಎಂ ತಮ್ಮ ಸ್ಥಾನದಿಂದ ಎದ್ದು ವೇದಿಕೆಯಿಂದ ಕೆಳಗೆ ನಡೆದಾಗ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ದಿಗ್ಭ್ರಮೆಗೊಂಡರು. 74 ವರ್ಷದ ಕುಮಾರ್ ಭಾಗವಹಿಸುವವರ ಕಡೆಗೆ ನಡೆದು "ನಮಸ್ತೆ" ಮತ್ತು ಕೈ ಬೀಸಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು ಮತ್ತು ಪ್ರಾಣಿಯ ತಲೆಯನ್ನು ಹೋಲುವ ಮುಖವಾಡ ಧರಿಸಿದ ಪ್ರದರ್ಶಕರಲ್ಲಿ ಒಬ್ಬರು ಹಸ್ತಲಾಘವಕ್ಕಾಗಿ ಮುಖ್ಯಮಂತ್ರಿಯ ಬಳಿಗೆ ಬಂದರು.

ರಾಜ್ಯ ವಿಧಾನಮಂಡಲದಲ್ಲಿ ಅಧಿವೇಶನದಲ್ಲಿ ಸಂತಸದಿಂದ ಕಂಡುಬಂದಿದ್ದ ನಿತೀಶ್ ಕುಮಾರ್ ಈ ಕಾರ್ಯಕ್ರಮದಲ್ಲಿ ಚಿಂತಾಕ್ರಾಂತರಾಗಿದ್ದರು. ಈ ವೇಳೆ ಮುಖವಾಡ ಧರಿಸಿದ್ದ ವ್ಯಕ್ತಿಯನ್ನು ಕಂಡು ಭಯಭೀತರಾಗಿ ಮುಖವಾಡ ತೆಗೆಯುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT