ಸಾಂದರ್ಭಿಕ ಚಿತ್ರ 
ದೇಶ

ಕೊಚ್ಚಿ: ಬಂದೂಕಿನ ಬುಲೆಟ್ ಗಳನ್ನು ಬಾಣಲೆಗೆ ಹಾಕಿ ಹುರಿದ PSI; ನಂತರ ಆಗಿದ್ದೇನು?

ಮೃತ ಪೊಲೀಸ್ ಸಿಬ್ಬಂದಿಯ ಅಂತ್ಯಕ್ರಿಯೆ ಇತ್ತು. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿತ್ತು. ಅಧಿಕಾರಿ ಸಿವಿ ಸಜೀವ್ ಅಂತ್ಯಕ್ರಿಯೆ ಸಮಾರಂಭಕ್ಕಾಗಿ ಬಂದೂಕಿನ ಗುಂಡುಗಳನ್ನು ಸಿದ್ಧಪಡಿಸುತ್ತಿದ್ದರು.

ಕೊಚ್ಚಿ: ಕೊಚ್ಚಿ ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆ (ಎಆರ್) ಶಿಬಿರದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬಂದೂಕಿನ ಬುಲೆಟ್ ಗಳನ್ನು ಬಾಣಲೆಗೆ ಹಾಕಿ ಹುರಿದಿರುವ ವಿಲಕ್ಷಣ ಘಟನೆ ನಡೆದಿದೆ, ಅದೃಷ್ಟ ವಶಾತ್ ಯಾವುದೇ ರೀತಿಯ ಅಪಾಯವಾಗಿಲ್ಲ.

ಮಾರ್ಚ್ 10 ರಂದು ಮೃತ ಪೊಲೀಸ್ ಸಿಬ್ಬಂದಿಯ ಅಂತ್ಯಕ್ರಿಯೆ ಇತ್ತು. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿತ್ತು. ಅಧಿಕಾರಿ ಸಿವಿ ಸಜೀವ್ ಅಂತ್ಯಕ್ರಿಯೆ ಸಮಾರಂಭಕ್ಕಾಗಿ ಬಂದೂಕಿನ ಗುಂಡುಗಳನ್ನು ಸಿದ್ಧಪಡಿಸುತ್ತಿದ್ದರು. ಗನ್‌ಪೌಡರ್ ಹೊಂದಿರುವ ಆದರೆ ಯಾವುದೇ ಸ್ಪೋಟಕವಿಲ್ಲದ ಖಾಲಿ ಗುಂಡುಗಳನ್ನು ಗೌರವ ಸೇವೆಗಳಲ್ಲಿ ಬಳಸಲಾಗುತ್ತದೆ.

ಮದ್ದುಗುಂಡು ಘಟಕದ ಉಸ್ತುವಾರಿ ವಹಿಸಿದ್ದ ಸಜೀವ್, ಶಿಬಿರದ ಶಸ್ತ್ರಾಗಾರದಲ್ಲಿ ಸಂಗ್ರಹಿಸಲಾದ ಖಾಲಿ ಗುಂಡುಗಳು ತುಕ್ಕು ಹಿಡಿದಿರುವುದನ್ನು ಗಮನಿಸಿದ್ದಾರೆ. ಸಾಮಾನ್ಯವಾಗಿ, ಅಂತಹ ಗುಂಡುಗಳನ್ನು ಬಳಕ್ಗೆ ಯೋಗ್ಯವಾಗಿಸಲು ಸೂರ್ಯನ ಬೆಳಕಿನಲ್ಲಿ ಒಣಗಿಸಲಾಗುತ್ತದೆ. ಆದರೆ ಕಡಿಮೆ ಸಮಯದ ಕಾರಣ, ಶಿಬಿರದ ಅಡುಗೆಮನೆಯಲ್ಲಿರುವ ಬಾಣಲೆಯಲ್ಲಿ ಅವುಗಳನ್ನು ಬಿಸಿ ಮಾಡಲು ನಿರ್ಧರಿಸಿದರು. ಹೀಗೆ ಮಾಡುವಾಗ, ಎರಡು ಗುಂಡುಗಳು ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡವು. ಇದರಿಂದ ಎಲ್ಲರೂ ಭಯಭೀತರಾಗಿದ್ದರು.

ಖಾಲಿ ಗುಂಡುಗಳ ಒಳಗೆ ಇದ್ದ ಗನ್‌ಪೌಡರ್ ಸ್ಫೋಟಕ್ಕೆ ಕಾರಣವಾಗಬಹುದು ಎಂಬುದನ್ನು ಅಧಿಕಾರಿ ಸಂಪೂರ್ಣವಾಗಿ ಮರೆತಿದ್ದಾರೆ. ಅದೃಷ್ಟವಶಾತ್, ಅಡುಗೆಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳು ಇರಲಿಲ್ಲ. ಒಂದು ವೇಳೆ ಅಲ್ಲಿ ಸಿಲಿಂಡರ್ ಇದ್ದಿದ್ದರೇ ದೊಡ್ಡ ದುರಂತ ಸಂಭವಿಸುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ನಂತರ, ಕೊಚ್ಚಿ ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಅವರು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಎಆರ್ ಶಿಬಿರದ ಕಮಾಂಡೆಂಟ್‌ಗೆ ವರದಿ ಸಲ್ಲಿಸಲು ತಿಳಿಸಲಾಗಿದ್ದು, ತನಿಖೆ ನಂತರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ: RSS ಕಾರ್ಯಕ್ರಮಕ್ಕೆ ಹೋಗಲ್ಲ- CJI ಗವಾಯಿ ತಾಯಿ

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!

1st Test: ಮೊದಲ ದಿನದಾಟ ಅಂತ್ಯ, ವಿಂಡೀಸ್ ವಿರುದ್ಧ ಭಾರತ ಮೇಲುಗೈ, 41 ರನ್ ಹಿನ್ನಡೆ!

'RSS-BJP' ಸೈದ್ಧಾಂತಿಕತೆಯ ಹೃದಯದಲ್ಲಿ ಹೇಡಿತನವಿದೆ: ಕೊಲಂಬಿಯಾದಲ್ಲಿ ಗುಡುಗಿದ ರಾಹುಲ್ ಗಾಂಧಿ!

SCROLL FOR NEXT