ಸಾಂಕೇತಿಕ ಚಿತ್ರ online desk
ದೇಶ

ಪ್ರತಿ ವರ್ಷ ದೇಶ ತೊರೆಯುತ್ತಿದ್ದಾರೆ 25 ಲಕ್ಷ ಭಾರತೀಯರು; ಶೇ.22 ರಷ್ಟು ಸೂಪರ್ ರಿಚ್ ಗಳಲ್ಲಿ ಭಾರತ ತೊರೆಯುವ ಆಲೋಚನೆ!

150 ಅತಿ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳನ್ನೊಳಗೊಂಡ ಸಮೀಕ್ಷೆ ಇದಾಗಿದೆ.

ನವದೆಹಲಿ: ದೇಶದಲ್ಲಿನ ಜೀವನ ಪರಿಸ್ಥಿತಿಗಳು, ವಿದೇಶಗಳಲ್ಲಿ ಉತ್ತಮ ಜೀವನ ಮಟ್ಟ ಮತ್ತು ಇತರ ದೇಶಗಳಲ್ಲಿ ಸುಲಭವಾದ ವ್ಯಾಪಾರ ವಾತಾವರಣದಂತಹ ಅಂಶಗಳಿಂದಾಗಿ ಭಾರತದಲ್ಲಿರುವ ಸೂಪರ್ ರಿಚ್ (ಅತಿ ಶ್ರೀಮಂತರ) ಪೈಕಿ 22% ಮಂದಿ ದೇಶವನ್ನು ತೊರೆಯಲು ಬಯಸುತ್ತಾರೆ ಎಂದು ಬುಧವಾರ ಪ್ರಕಟಗೊಂಡ ಸಮೀಕ್ಷೆಯ ವರದಿ ತಿಳಿಸಿದೆ.

150 ಅತಿ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳನ್ನೊಳಗೊಂಡ ಸಮೀಕ್ಷೆ ಇದಾಗಿದೆ. ಗೋಲ್ಡನ್ ವೀಸಾ ಯೋಜನೆಯ ಕಾರಣದಿಂದಾಗಿ ಅಮೆರಿಕ, ಯುಕೆ, ಆಸ್ಟ್ರೇಲಿಯಾ, ಕೆನಡಾ ಮತ್ತು ಯುಎಇ ಶ್ರೀಮಂತರು ನೆಲೆಸಲು ಇಷ್ಟಪಡುವ ನೆಚ್ಚಿನ ತಾಣಗಳಾಗಿವೆ ಎಂದು ತಿಳಿದುಬಂದಿದೆ.

ಕನ್ಸಲ್ಟೆನ್ಸಿ EY ಸಹಯೋಗದೊಂದಿಗೆ ಸಮೀಕ್ಷೆಯನ್ನು ಕೈಗೊಂಡ ದೇಶದ ಪ್ರಮುಖ ಸಂಪತ್ತು ವ್ಯವಸ್ಥಾಪಕ ಕೋಟಕ್ ಪ್ರೈವೇಟ್, ವಿದೇಶಾಂಗ ಸಚಿವಾಲಯದ ಪ್ರಕಾರ ಪ್ರತಿ ವರ್ಷ 25 ಲಕ್ಷ ಭಾರತೀಯರು ಇತರ ದೇಶಗಳಿಗೆ ವಲಸೆ ಹೋಗುತ್ತಾರೆ ಎಂದು ಹೇಳಿದೆ.

"ಸಮೀಕ್ಷೆಗೆ ಒಳಗಾದ ಪ್ರತಿ ಐದು ಅತಿ ಶ್ರೀಮಂತರಲ್ಲಿ ಒಬ್ಬರು ಪ್ರಸ್ತುತ ವಲಸೆ ಹೋಗುವ ಪ್ರಕ್ರಿಯೆಯಲ್ಲಿದ್ದಾರೆ ಅಥವಾ ವಲಸೆ ಹೋಗಲು ಯೋಜಿಸುತ್ತಿದ್ದಾರೆ" ಎಂದು ಸಮೀಕ್ಷೆಯ ಸಂಶೋಧನೆಗಳು ತಿಳಿಸಿವೆ. ಅವರಲ್ಲಿ ಹೆಚ್ಚಿನವರು ತಮ್ಮ ಭಾರತೀಯ ಪೌರತ್ವವನ್ನು ಉಳಿಸಿಕೊಂಡು ತಮ್ಮ ಆಯ್ಕೆಯ ಆತಿಥೇಯ ದೇಶದಲ್ಲಿ ಶಾಶ್ವತವಾಗಿ ವಾಸಿಸಲು ಉದ್ದೇಶಿಸಿದ್ದಾರೆ.

ಅವರು ಸುಧಾರಿತ ಜೀವನ ಮಟ್ಟ, ಆರೋಗ್ಯ ಪರಿಹಾರಗಳು, ಶಿಕ್ಷಣ ಅಥವಾ ಜೀವನಶೈಲಿಯನ್ನು ಬಯಸುತ್ತಾರೆ ಎಂದು ಸಮೀಕ್ಷೆ ಹೇಳಿದೆ, ಮೂರನೇ ಎರಡರಷ್ಟು ಜನರು ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಅವರಿಗೆ ದೇಶ ತೊರೆಯುವುದಕ್ಕೆ ಇರುವ ಪ್ರಮುಖ ಅಂಶ ಎಂದು ಹೇಳಿದ್ದಾರೆ.

ವಲಸೆ ನಿರ್ಧಾರವನ್ನು "ಭವಿಷ್ಯದಲ್ಲಿ ಹೂಡಿಕೆ" ಎಂದು ಹೇಳಿರುವ ಸಮೀಕ್ಷೆಯು, ಶ್ರೀಮಂತರಿಗೆ ತಮ್ಮ ಮಕ್ಕಳಿಗೆ ಅತ್ಯುತ್ತಮ ಉನ್ನತ ಶಿಕ್ಷಣವನ್ನು ಪಡೆಯುವುದು ಹೊರದೇಶಗಳನ್ನು ಆಯ್ಕೆ ಮಾಡಲು ಕಾರಣವಾಗಿದೆ ಎಂದು ಹೇಳಿದೆ.

ಆದಾಗ್ಯೂ, ಕೋಟಕ್ ಮಹೀಂದ್ರಾ ಬ್ಯಾಂಕಿನ ಅಧ್ಯಕ್ಷೆ ಗೌತಮಿ ಗವಾಂಕರ್, ವಲಸೆ ನಿರ್ಧಾರವನ್ನು ದೇಶದಿಂದ ಬಂಡವಾಳದ ಹೊರಹೋಗುವಿಕೆಯಾಗಿ ನೋಡಬಾರದು ಎಂದು ಹೇಳಿದ್ದಾರೆ. ಅಂತಹ ಚಟುವಟಿಕೆಗಳ ಮೇಲಿನ ಮಿತಿಗಳು ಒಬ್ಬ ವ್ಯಕ್ತಿಯು ನಿವಾಸವನ್ನು ಬದಲಾಯಿಸಿದರೂ ಸಹ ಹಣವು ಹೊರಹೋಗದಂತೆ ಖಚಿತಪಡಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT