ಸಂಗ್ರಹ ಚಿತ್ರ 
ದೇಶ

ಯುಗಾದಿ ಸೇರಿ 5 ಧಾರ್ಮಿಕ ಹಬ್ಬದ ದಿನ ಮಾಂಸದ ಅಂಗಡಿ ಮುಚ್ಚಲು ಖಡಕ್ ಆದೇಶ; Ramzan ದಿನವೂ ಬಂದ್!

ಮೈಹಾರ್‌ನಲ್ಲಿ ಜಿಲ್ಲಾಡಳಿತವು ಮೊಟ್ಟೆ, ಮೀನು, ಕೋಳಿ ಮತ್ತು ಮಾಂಸ ಸೇರಿದಂತೆ ಎಲ್ಲಾ ಮಾಂಸಾಹಾರಿ ಆಹಾರಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದೆ.

ಭೋಪಾಲ್: ಈಶಾನ್ಯ ಮಧ್ಯಪ್ರದೇಶದ ಧಾರ್ಮಿಕ ನಗರವಾದ ಮೈಹಾರ್‌ನಲ್ಲಿ ಜಿಲ್ಲಾಡಳಿತವು ಮಾರ್ಚ್ 30 ರಿಂದ ಏಪ್ರಿಲ್ 7 ರವರೆಗೆ ಒಂಬತ್ತು ದಿನಗಳ ನವರಾತ್ರಿ ಉತ್ಸವದ ಸಮಯದಲ್ಲಿ ಮೊಟ್ಟೆ, ಮೀನು, ಕೋಳಿ ಮತ್ತು ಮಾಂಸ ಸೇರಿದಂತೆ ಎಲ್ಲಾ ಮಾಂಸಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದೆ. ಏತನ್ಮಧ್ಯೆ, ರಾಜಧಾನಿ ಭೋಪಾಲ್ ಮತ್ತು ರಾಜ್ಯದ ಅತ್ಯಂತ ಜನನಿಬಿಡ ನಗರವಾದ ಇಂದೋರ್ ಸೇರಿದಂತೆ ಬಿಜೆಪಿ ಆಡಳಿತದ ಮಧ್ಯಪ್ರದೇಶದ ಎರಡು ಪ್ರಮುಖ ನಗರಗಳಲ್ಲಿನ ಮಾಂಸದ ಅಂಗಡಿಗಳು ಮುಂಬರುವ ಐದು ಹಿಂದೂ, ಜೈನ, ಸಿಂಧಿ ಮತ್ತು ಬೌದ್ಧ ಹಬ್ಬಗಳಂದು ಮುಚ್ಚಲು ಆದೇಶಿಸಲಾಗಿದೆ.

ಗುಡಿ ಪಾಡ್ವಾ ಮತ್ತು ಚೈತಿ ಚಂದ್ (ಮಾರ್ಚ್ 30), ರಾಮ ನವಮಿ (ಏಪ್ರಿಲ್ 6), ಮಹಾವೀರ ಜಯಂತಿ (ಏಪ್ರಿಲ್ 10), ಮತ್ತು ಬುದ್ಧ ಪೂರ್ಣಿಮಾ (ಮೇ 12) ರಂದು ಪುರಸಭೆಯ ಮಿತಿಯೊಳಗಿನ ಮಾಂಸದ ಅಂಗಡಿಗಳನ್ನು ಮುಚ್ಚಲು ಎರಡೂ ನಗರಗಳಲ್ಲಿನ ಬಿಜೆಪಿ ಆಡಳಿತದ ಪುರಸಭೆಗಳು ಆದೇಶಿಸಿವೆ. ಆದೇಶವನ್ನು ಉಲ್ಲಂಘಿಸುವುದು ಕಂಡುಬಂದರೆ ಪರವಾನಗಿಗಳನ್ನು ರದ್ದುಗೊಳಿಸುವುದು ಸೇರಿದಂತೆ ಯಾವುದೇ ಅಂಗಡಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆದಾಗ್ಯೂ, ಇಂದೋರ್‌ನಲ್ಲಿ ಪುರಸಭೆಯು ನವರಾತ್ರಿಯನ್ನು ಸಂಪೂರ್ಣವಾಗಿ ಮುಚ್ಚುವ ಬದಲು ನಾಲ್ಕು ದಿನಗಳ ಕಾಲ ಮುಚ್ಚಲು ಆದೇಶಿಸಿದ್ದರಿಂದ ಬಲಪಂಥೀಯ ಹಿಂದೂ ರಾಷ್ಟ್ರ ಸಂಘಟನ್ (HRS) ನಗರಾದ್ಯಂತ ಒಂಬತ್ತು ದಿನವೂ ಮಾಂಸದ ಅಂಗಡಿಗಳನ್ನು ಮುಚ್ಚಿಸುವಂತೆ ಒತ್ತಾಯಿಸಿದೆ. ನಾವು ಮೊದಲು ವಿನಂತಿ ಮತ್ತು ನಂತರ ಶಿಕ್ಷೆಯಲ್ಲಿ ನಂಬಿಕೆ ಇಡುತ್ತೇವೆ. ನಮ್ಮ ಕಾರ್ಯಕರ್ತರು ಇಂದೋರ್‌ನಾದ್ಯಂತ ಪ್ರಯಾಣಿಸುತ್ತಾರೆ. ಎಲ್ಲಿ ಮಾಂಸದ ಅಂಗಡಿಗಳು ತೆರೆದಿದ್ದರೆ ಇಡೀ ಚೈತ್ರ ನವರಾತ್ರಿಯ ಸಮಯದಲ್ಲಿ ಅವುಗಳನ್ನು ಮುಚ್ಚಿಸುತ್ತೇವೆ ಎಂದು HRS ಮುಖ್ಯಸ್ಥ ರಾಜೇಶ್ ಶಿರೋಡ್ಕರ್ ಹೇಳಿದರು.

ಲೋಕೋಪಯೋಗಿ ಇಲಾಖೆ ಸಚಿವ ರಾಕೇಶ್ ಸಿಂಗ್, ಮೊದಲ ಬಾರಿಗೆ ಜಬಲ್ಪುರ್ ಉತ್ತರ ಶಾಸಕ ಅಭಿಲಾಷ್ ಪಾಂಡೆ ಮತ್ತು ಹುಜೂರ್ (ಭೋಪಾಲ್) ಶಾಸಕ ರಾಮೇಶ್ವರ ಶರ್ಮಾ ಸೇರಿದಂತೆ ರಾಜ್ಯದ ಹಲವಾರು ಬಿಜೆಪಿ ಶಾಸಕರು ನವರಾತ್ರಿಯ ಸಮಯದಲ್ಲಿ ರಾಜ್ಯಾದ್ಯಂತ ಒಂಬತ್ತು ದಿನಗಳ ಮಾಂಸದ ಅಂಗಡಿ ಮುಚ್ಚುವ ಕರೆಗಳನ್ನು ಬೆಂಬಲಿಸಿದ್ದರು.

ಏತನ್ಮಧ್ಯೆ, ಇಂದೋರ್‌ನಲ್ಲಿ ಆಯ್ದ ನಿಷೇಧಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸಚ್ ಸಲುಜಾ, ಕೆಎಫ್‌ಸಿ ಮತ್ತು ಮೆಕ್‌ಡೊನಾಲ್ಡ್ಸ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳು ಸೇರಿದಂತೆ ದೊಡ್ಡ ರೆಸ್ಟೋರೆಂಟ್‌ಗಳಿಗೆ ಈ ಆದೇಶ ಏಕೆ ಅನ್ವಯಿಸುವುದಿಲ್ಲ? ಸಣ್ಣ ಅಂಗಡಿ ಮಾಲೀಕರನ್ನು ಮಾತ್ರ ಗುರಿಯಾಗಿಸಿಕೊಂಡಿರುವಾಗ, ದೊಡ್ಡ ರೆಸ್ಟೋರೆಂಟ್‌ಗಳ ಮೇಲೆ ಯಾಕೆ ಪರಿಣಾಮ ಬೀರುವುದಿಲ್ಲ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT