ಲಾಲು ಪ್ರಸಾದ್ ಯಾದವ್- ಅಮಿತ್ ಶಾ  online desk
ದೇಶ

ದನಗಳ ಮೇವನ್ನೂ ಬಿಡದೇ ತಿಂದವರು ಜನರನ್ನ ಬಿಡ್ತಾರಾ?: Lalu ವಿರುದ್ಧ Amit Shah ಹಿಗ್ಗಾ-ಮುಗ್ಗಾ ವಾಗ್ದಾಳಿ!

"ಇಲ್ಲಿ ಲಾಲು-ರಾಬ್ರಿ ಆಡಳಿತ ಮತ್ತು ಕೇಂದ್ರದಲ್ಲಿ ಸೋನಿಯಾ-ಮನಮೋಹನ್ ಸರ್ಕಾರ ಬಿಹಾರಕ್ಕೆ ಏನನ್ನೂ ಮಾಡಲಿಲ್ಲ. ಲಾಲು ಪ್ರಸಾದ್ ತಮ್ಮ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡಿದರು." ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಪಾಟ್ನ: ಬಿಹಾರದಲ್ಲಿ ಚುನಾವಣೆಯ ರಣಕಹಳೆ ಮೊಳಗಿಸಿರುವ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲಾಲು ಪ್ರಸಾದ್ ಯಾದವ್ ವಿರುದ್ಧ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ವಿವಿಧ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಟೀಕಿಸಿದ ಅಮಿತ್ ಶಾ, "ಮೇವು ತಿಂದವರು ಬಿಹಾರದ ಜನರ ಕಲ್ಯಾಣದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ" ಎಂದು ಆರೋಪಿಸಿದರು. ಆರ್‌ಜೆಡಿ ಮುಖ್ಯಸ್ಥರು ಬಿಹಾರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ತಮ್ಮ ಕುಟುಂಬದ ಒಳಿತಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗೋಪಾಲಗಂಜ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, "ಕೇಂದ್ರ ಮತ್ತು ಬಿಹಾರದ ಎರಡೂ ಎನ್‌ಡಿಎ ಸರ್ಕಾರಗಳು ಬಿಹಾರದ ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿವೆ. "ದನಗಳಿಗೆ ಮೀಸಲಾದ ಮೇವನ್ನು ತಿಂದುಹಾಕಿದವರು ರಾಜ್ಯದ ಜನರ ಕಲ್ಯಾಣದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಪ್ರಸಾದ್ "ಬಿಟುಮೆನ್ ಹಗರಣ, ಪ್ರವಾಹ ಪರಿಹಾರ ಸಾಮಗ್ರಿ ಪೂರೈಕೆ ಹಗರಣ, 'ಚಾರ್ವಾಹ ವಿದ್ಯಾಲಯ' (ದನ ಮೇಯಿಸುವವರ ಶಾಲೆ) ಹಗರಣದಲ್ಲಿ ಭಾಗಿಯಾಗಿದ್ದರು ಮತ್ತು ಅವರು ಮೇವನ್ನು ಸಹ ತಿಂದುಹಾಕಿದ್ದರು" ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ದೋರಾಂಡಾ, ದಿಯೋಘರ್, ದುಮ್ಕಾ ಮತ್ತು ಚೈಬಾಸಾದಂತಹ ಖಜಾನೆಗಳಿಂದ ಕೋಟ್ಯಂತರ ರೂಪಾಯಿಗಳನ್ನು ವಂಚನೆಯಿಂದ ಹಿಂಪಡೆಯಲಾದ ಮೇವು ಹಗರಣವು 1990 ರ ದಶಕದಲ್ಲಿ ಜಾರ್ಖಂಡ್ ಬಿಹಾರದ ಭಾಗವಾಗಿದ್ದಾಗ ಬಹಿರಂಗವಾಯಿತು. ಬಿಹಾರದ ಮಾಜಿ ಮುಖ್ಯಮಂತ್ರಿ ಪ್ರಸಾದ್, ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಉನ್ನತ ರಾಜಕಾರಣಿಗಳಲ್ಲಿ ಒಬ್ಬರು.

"ಇಲ್ಲಿ ಲಾಲು-ರಾಬ್ರಿ ಆಡಳಿತ ಮತ್ತು ಕೇಂದ್ರದಲ್ಲಿ ಸೋನಿಯಾ-ಮನಮೋಹನ್ ಸರ್ಕಾರ ಬಿಹಾರಕ್ಕೆ ಏನನ್ನೂ ಮಾಡಲಿಲ್ಲ. ಲಾಲು ಪ್ರಸಾದ್ ತಮ್ಮ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡಿದರು." ಅವರು ತಮ್ಮ ಇಬ್ಬರು ಪುತ್ರರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರಯತ್ನಿಸಿದರು, ಪತ್ನಿಯನ್ನು ಬಿಹಾರ ಮುಖ್ಯಮಂತ್ರಿಯನ್ನಾಗಿ ಮಾಡಿದರು, ಮಗಳನ್ನು ರಾಜ್ಯಸಭೆಗೆ ಕಳುಹಿಸಿದರು, ಆದರೆ ಜನರಿಗಾಗಿ ಏನನ್ನೂ ಮಾಡಲಿಲ್ಲ" ಎಂದು ಶಾ ಆರೋಪಿಸಿದರು.

ಮುಂದಿನ ಐದು ವರ್ಷಗಳಲ್ಲಿ ಬಿಹಾರವನ್ನು ಪ್ರವಾಹ ಮುಕ್ತಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. "ಬಿಹಾರದಲ್ಲಿ ಪ್ರವಾಹ ಶೀಘ್ರದಲ್ಲೇ ಭೂತಕಾಲವಾಗಲಿದೆ" ಎಂದು ಅಮಿತ್ ಶಾ ಹೇಳಿದ್ದಾರೆ.

ಬಿಹಾರದ ಸೀತಾದೇವಿಯ ಜನ್ಮಸ್ಥಳದಲ್ಲಿ ಎನ್‌ಡಿಎ ಸರ್ಕಾರವು ಬೃಹತ್ ದೇವಾಲಯವನ್ನು ನಿರ್ಮಿಸುತ್ತಿದೆ ಎಂದು ಅಮಿತ್ ಶಾ ಇದೇ ವೇಳೆ ತಿಳಿಸಿದ್ದಾರೆ.

ಸೀತಾದೇವಿಯ ಜನ್ಮಸ್ಥಳವೆಂದು ಪರಿಗಣಿಸಲಾದ ಸೀತಾಮರ್ಹಿ ಜಿಲ್ಲೆಯಲ್ಲಿ ಹಿಂದೂ ಯಾತ್ರಾ ಸ್ಥಳವಾದ 'ಪುನೌರ ಧಾಮ್ ಜಾನಕಿ ಮಂದಿರ'ವನ್ನು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ ಎಂದು ಶಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT