ಮಿಶಾ ಅಗರ್ ವಾಲ್ 
ದೇಶ

Instagram ಫಾಲೋವರ್ಸ್ ಸಂಖ್ಯೆ ಕುಸಿತ: 25ನೇ ವರ್ಷದ ಹುಟ್ಟುಹಬ್ಬಕ್ಕೂ ಮುನ್ನ ಕಂಟೆಂಟ್ ಕ್ರಿಯೇಟರ್ ಆತ್ಮಹತ್ಯೆ

ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗಿರುವುದು ಆಕೆಯನ್ನು ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡಿತ್ತು. ಏಪ್ರಿಲ್ ತಿಂಗಳ ಆರಂಭದಿಂದಲೂ ಆಕೆ ತೀವ್ರ ಒತ್ತಡದಲ್ಲಿದ್ದಳು.

ಮುಂಬಯಿ: ಸಣ್ಣ ವಯಸ್ಸಿನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದ ಕಂಟೆಂಟ್‌ ಕ್ರಿಯೇಟರ್‌ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗುತ್ತಿದ್ದಾರೆ ಎಂದು ಮಾನಸಿಕ ಖಿನ್ನತೆಗೊಳಗಾಗಿ ಕಂಟೆಂಟ್ ಕ್ರಿಯೇಟರ್ ಮಿಶಾ ಅಗರ್ವಾಲ್ ಸಾವಿಗೆ ಶರಣಾಗಿದ್ದಾರೆ.

ಇದೀಗ ಕುಟುಂಬಸ್ಥರು ಅವರ ಸಾವಿನ ಹಿಂದಿನ ಕಾರಣವನ್ನು ರಿವೀಲ್‌ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾ ಪ್ರಭಾವಿ ಆಗಿ, ರೀಲ್ಸ್‌ ಮೂಲಕ ಹಲವು ಕಂಟೆಂಟ್‌ಗಳನ್ನು ಮಾಡಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಮಿಶಾ ಅಗರ್ವಾಲ್ ಏ.24 ರಂದು ತನ್ನ ಹುಟ್ಟುಹಬ್ಬದ ಎರಡು ದಿನದ ಮುನ್ನ ಪ್ರಾಣ ಕಳೆದುಕೊಂಡಿದ್ದಾರೆ.

ಈ ಕುರಿತು ಮೃತಳ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತನ್ನ 25ನೇ ಹುಟ್ಟುಹಬ್ಬ ಸಮೀಪಿಸುತ್ತಿರುವಾಗ ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗಿರುವುದು ಆಕೆಯನ್ನು ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡಿತ್ತು. ಏಪ್ರಿಲ್ ತಿಂಗಳ ಆರಂಭದಿಂದಲೂ ಆಕೆ ತೀವ್ರ ಒತ್ತಡದಲ್ಲಿದ್ದಳು. 1 ಮಿಲಿಯನ್ ಫಾಲೋವರ್ಸ್ ಗಳಿಸಬೇಕೆನ್ನುವುದು ಆಕೆಯ ಗುರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಇದೇ ಬೇಸರದಿಂದ ಆತ್ಮಹತ್ಯೆ ಶರಣಾಗಿದ್ದಾ

ಮಿಶಾ ಸೋಶಿಯಲ್‌ ಮೀಡಿಯಾದಲ್ಲೇ ತನ್ನ ಕೆರಿಯರ್‌ ಕಂಡುಕೊಂಡಿದ್ದಳು. ಇನ್ಸ್ಟಾಗ್ರಾಮ್‌ ಕಂಟೆಂಟ್‌ಗಳೇ ಅವಳ ಕೆರಿಯರ್‌ ಬಿಲ್ಡ್‌ ಮಾಡಿತ್ತು. 1 ಮಿಲಿಯನ್‌ ಫಾಲೋವರ್ಸ್‌ಗಳನ್ನು ತಲುಪಬೇಕೆನ್ನುವ ದೊಡ್ಡ ಕನಸು ಮಿಶಾಗಿತ್ತು. ಪ್ರತಿನಿತ್ಯ ಹೇಗೆ ತಾನು ಅಧಿಕ ಫಾಲೋವರ್ಸ್‌ಗಳನ್ನು ಪಡೆಯಬೇಕೆನ್ನುವ ಬಗ್ಗೆ ಮಾತನಾಡುತಿದ್ದಳು.

ಆದರೆ ಏಪ್ರಿಲ್‌ ತಿಂಗಳಿನಿಂದ ಅವಳ ಇನ್ಸ್ಟಾಗ್ರಾಮ್‌ ಖಾತೆಯ ಫಾಲೋವರ್ಸ್‌ಗಳು ಕಡಿಮೆ ಆಗುತ್ತಾ ಬಂದಿತ್ತು. ಇದರಿಂದ ಮಿಶಾ ಖಿನ್ನತೆಗೆ ಒಳಗಾಗಿದ್ದಳು. ಫಾಲೋವರ್ಸ್‌ಗಳು ಕಡಿಮೆ ಆದರೆ ಏನು ಮಾಡಬೇಕೆಂದು ಹೇಳಿ ದುಃಖಿಸುತ್ತಿದ್ದಳು. ಫಾಲೋವರ್ಸ್‌ಗಳು ಕಡಿಮೆ ಆದದ್ದಕ್ಕೆ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಪೋಸ್ಟ್‌ ಮೂಲಕ ಹೇಳಿದ್ದಾರೆ. ಮಿಶಾಳ ಮೊಬೈಲ್‌ ವಾಲ್‌ಪೇಪರ್‌ನಲ್ಲೂ 1 ಮಿಲಿಯನ್‌ ಫಾಲೋವರ್ಸ್‌ ಆಗುತ್ತದೆ ಎನ್ನುವ ಸ್ಕ್ರೀನ್‌ ಶಾಟ್‌ ಹಾಕಿಕೊಂಡಿದ್ದಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT