ಸಂಜಯ್ ಶಿರ್ಸತ್ - ಅಜಿತ್ ಪವಾರ್  
ದೇಶ

ಮಹಾಯುತಿಯಲ್ಲಿ ಭಿನ್ನಮತ: ಅಜಿತ್ ಪವಾರ್ ಸಚಿವಾಲಯ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿ- ಶಿವಸೇನಾ ಸಚಿವ ಟೀಕೆ

ಹಂಚಿಕೆಯಾದ ಹಣವನ್ನು ಆಗಾಗ ಡೈವರ್ಟ್ ಮಾಡುವ ಬದಲು ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆಯನ್ನು ಮುಚ್ಚುವುದು ಉತ್ತಮ ಎಂದು ಶಿವಸೇನೆ ಸಚಿವರು ಕಿಡಿ ಕಾರಿದ್ದಾರೆ.

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಜಿತ್ ಪವಾರ್ ನೇತೃತ್ವದ ಹಣಕಾಸು ಇಲಾಖೆಯು ನನ್ನ ಗಮನಕ್ಕೆ ತರದೇ ನನ್ನ ಇಲಾಖೆಯಿಂದ ಹಣವನ್ನು "ಅಕ್ರಮ"ವಾಗಿ ಡೈವರ್ಟ್ ಮಾಡಿದೆ ಎಂದು ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಸಚಿವ ಮತ್ತು ಶಿವಸೇನಾ ನಾಯಕ ಸಂಜಯ್ ಶಿರ್ಸತ್ ಅವರು ಶನಿವಾರ ಆರೋಪಿಸಿದ್ದಾರೆ.

ಹಂಚಿಕೆಯಾದ ಹಣವನ್ನು ಆಗಾಗ ಡೈವರ್ಟ್ ಮಾಡುವ ಬದಲು ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆಯನ್ನು ಮುಚ್ಚುವುದು ಉತ್ತಮ ಎಂದು ಶಿವಸೇನೆ ಸಚಿವರು ಕಿಡಿ ಕಾರಿದ್ದಾರೆ.

ಸಚಿವರ ಈ ಆಕ್ರೋಶ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದು.

"ಅವರು ಈ ಹಿಂದೆ (ಬಜೆಟ್ ಸಮಯದಲ್ಲಿ) ನನ್ನನ್ನು ಕತ್ತಲೆಯಲ್ಲಿಟ್ಟು ನನ್ನ ಇಲಾಖೆಯಿಂದ 7,000 ಕೋಟಿ ರೂ.ಗಳನ್ನು ಬೇರೆಡೆಗೆ ತಿರುಗಿಸಿದ್ದರು. ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆ ಕಾರ್ಯನಿರ್ವಹಿಸುವುದನ್ನು ಬಯಸದಿದ್ದರೆ ಅಥವಾ ಹಣವನ್ನು ಖರ್ಚು ಮಾಡಲು ಬಯಸದಿದ್ದರೆ, ಅವರು ಈ ಇಲಾಖೆಯನ್ನು ಮುಚ್ಚಬೇಕು. ಇದು ಅನ್ಯಾಯ. ಇದರ ಹಿಂದಿನ ಕಾರಣ ನನಗೆ ಗೊತ್ತಿಲ್ಲ" ಎಂದು ಶಿರ್ಸತ್ ಛತ್ರಪತಿ ಸಂಭಾಜಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಾಮಾಜಿಕ ನ್ಯಾಯ ಇಲಾಖೆಗೆ ಹಂಚಿಕೆಯಾಗಿದ್ದ 413.30 ಕೋಟಿ ರೂ.ಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ವರದಿಯಾದ ಬಗ್ಗೆ ಶಿರ್ಸತ್ ಆಕ್ರೋಶ ವ್ಯಕ್ತಪಡಿಸಿದರು. ಶಿವಸೇನಾ ಶಾಸಕರು ಈ ವಿಷಯವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.

"ಹಣವನ್ನು ಈ ರೀತಿ ಡೈವರ್ಟ್ ನಾಡುವುದು ಕಾನೂನುಬದ್ಧವಲ್ಲ. ಹಣಕಾಸು ಇಲಾಖೆಯ ಈ ಉದ್ಧಟತನ ತಪ್ಪು. ಅವರ ಕ್ರಮ ತಪ್ಪು. ನಾನು ಅದನ್ನು ವಿರೋಧಿಸುತ್ತೇನೆ" ಎಂದು ಶಿವಸೇನೆ ಸಚಿವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT